ಶಿರಸಿ: ಮರಾಠಿಕೊಪ್ಪದ ಸುನೀಲ ಹರಿಜನ ತಮ್ಮ 25ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ವಿಪರೀತ ಮದ್ಯ ಸೇವನೆ ಪರಿಣಾಮ ಅವರು ಸಣ್ಣ ವಯಸ್ಸಿನಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ಶಿರಸಿ ಮರಾಠಿಕೊಪ್ಪ ಪುಟ್ಟನಮನೆಯ ಸುನೀಲ ಗೋಪಾಳ ಹರಿಜನ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ, ಸರಾಯಿ ಕುಡಿಯುವುದಕ್ಕಾಗಿ ಅವರು ತಮ್ಮ ಆದಾಯದ ಎಲ್ಲಾ ಹಣವನ್ನು ಖಾಲಿ ಮಾಡುತ್ತಿದ್ದರು.
ನ 17ರ ರಾತ್ರಿ 9 ಗಂಟೆಗೆ ಸರಾಯಿ ಕುಡಿದು ಅಸ್ವಸ್ಥರಾದ ಹಾಸಿಗೆ ಮೇಲೆ ಮಲಗಿ ಹೊರಳಾಡುತ್ತಿದ್ದರು. ಇದನ್ನು ನೋಡಿದ ಅವರ ತಾಯಿ ಸುಧಾ ಗೋಪಾಲ ಹರಿಜನ ಸುನೀಲರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರ ಶಿಫಾರಸ್ಸಿನ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿರಸಿಯ ರಾಮಾ ಹೆಗಡೆ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿಯೂ ಸಹ ಚೇತರಿಸಿಕೊಳ್ಳದ ಕಾರಣ ಆಂಬುಲೆನ್ಸ ಮೂಲಕ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು `ಸುನೀಲ ಇನ್ನಿಲ್ಲ’ ಎಂದು ಘೋಷಿಸಿದರು.




