ಮುಂಡಗೋಡು: ಸಿನಿಮಾ ನಟನ ಶೈಲಿಯಲ್ಲಿ ತಲೆಗೂದಲು ಬಿಟ್ಟಿದ್ದ ವಿದ್ಯಾರ್ಥಿಯನ್ನು ನೋಡಿದ ಸಮಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಉಮೇಶ ವೈ ಕೆ ಆ ವಿದ್ಯಾರ್ಥಿಯ ತಲೆ ಬೋಳಿಸಿದ್ದಾರೆ!
ಕರಗಿನಕೊಪ್ಪ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಉದ್ದ ಕೂದಲು ಬಿಟ್ಟಿದ್ದು, ಆತನನ್ನು ನೋಡಿದ ಉಪನಿರ್ದೇಶಕರು ಕ್ಷೌರಿಕನನ್ನು ಕರೆಯಿಸಿ ಕೂದಲು ತೆಗೆಸಿದ್ದಾರೆ. `ನೀವು ಶಿಕ್ಷಣ ಕಲಿಯಲು ಇಲ್ಲಿ ಬರುತ್ತೀರಾ? ಅಥವಾ ಶೋಕಿಗೆ ಬರುತ್ತೀರಾ?’ ಎಂದು ವಿದ್ಯಾರ್ಥಿಗಳನ್ನು ಉಮೇಶ ವೈ ಕೆ ಪ್ರಶ್ನಿಸಿದರು. `ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿ ಆಗಿರಬೇಕು’ ಎಂದು ಹೇಳಿದ ಅವರು ಕೂಡಲೇ ಕ್ಷೌರಿಕನನ್ನು ಕರೆಯಿಸಿ ವಿದ್ಯಾರ್ಥಿಗಳ ಕೂದಲು ಕತ್ತರಿಸಲು ಸೂಚಿಸಿದರು.
ವಿದ್ಯಾರ್ಥಿಗಳನ್ನು ನೋಡಿಕೊಳ್ಳುವ ವಾರ್ಡನ್ ಹಾಗೂ ಶಿಕ್ಷಕರ ಜೊತೆ ಅಡುಗೆ ಸಿಬ್ಬಂದಿಯನ್ನು ಸಹ ಅವರು ತರಾಠೆಗೆ ತೆಗೆದುಕೊಂಡರು. ನಂತರ ನಡೆದ ಶಿಕ್ಷಕರ ಸಭೆಯಲ್ಲಿ ಈ ಬಾರಿ `ಶೈಕ್ಷಣಿಕ ಫಲಿತಾಂಶ ಶೇ 100ರಷ್ಟು ಸಾಧಿಸಬೇಕು. ಅದರ ಬಗ್ಗೆ ಗಮನಕೊಡಿ’ ಎಂದು ಸೂಚಿಸಿದರು.




