ಶಿರಸಿ: ಹೂಡ್ಲಮನೆಯ ಗಣಪತಿ ಹೆಗಡೆ ಹಾಗೂ ಕಾಜಿನಮನೆ ಸದಾನಂದ ಭಟ್ಟ ನಡುವೆ ಅಪಘಾತ ನಡೆದಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.
ನ 27ರ ರಾತ್ರಿ 9.30ಕ್ಕೆ ಶಿರಸಿಯಿಂದ ಹುಡ್ಲಮನೆ ಕಡೆ ಗಣಪತಿ ಹೆಗಡೆ ಬೈಕ್ ಓಡಿಸುತ್ತಿದ್ದರು. ಇದೇ ವೇಳೆ ಸಿದ್ದಾಪುರದ ಮಣಿಗಾರಿನ ಕಾಜಿನಮನೆ ಸದಾನಂದ ಭಟ್ಟರು ರೇವಣಕಟ್ಟಾ ಕಡೆಯಿಂದ ಶಿರಸಿ ಕಡೆ ಬೈಕಿನಲ್ಲಿ ಚಲಿಸುತ್ತಿದ್ದರು. ಶಿರಸಿ ಅಮಿನಳ್ಳಿಯ ಹೆಗ್ಗರಣಿ ಹೊಸಮನೆ ಗ್ಯಾರೇಜ್ ಘಟ್ಟದ ತಿರುವಿನಲ್ಲಿ ಎರಡು ಬೈಕಿನ ನಡುವೆ ಡಿಕ್ಕಿಯಾಯಿತು.
ಪರಿಣಾಮ ಇಬ್ಬರು ನೆಲಕ್ಕೆ ಬಿದ್ದು ಗಾಯಗೊಂಡರು. ಬೈಕ್ ಸವಾರರಿಬ್ಬರ ತಲೆ, ಮುಖ, ಕಾಲುಗಳಿಗೆ ರಕ್ತ ಬರುವ ಹಾಗೇ ಪೆಟ್ಟಾಗಿದೆ. ಎರಡು ಬೈಕ್ ಜಖಂ ಆಗಿದೆ. ಗಾಯಗೊಂಡ ಗೋಪಾಲ ಹೆಗಡೆ ಕೃಷಿಕರು. ಸದಾನಂದ ಭಟ್ಟರು ಟಿಎಸ್ಎಸ್ ಉದ್ಯೋಗಿ. ಈ ಇಬ್ಬರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅಪಘಾತದ ಬಗ್ಗೆ ಸಿದ್ದಾಪುರ ಮಣಿಗಾರಿನ ರಾಜು ಮಡಿವಾಳ ಪೊಲೀಸ್ ದೂರು ನೀಡಿದ್ದಾರೆ.
ನಿಧಾನವಾಗಿ ಚಲಿಸಿ: ಸುರಕ್ಷತಾ ನಿಯಮ ಪಾಲಿಸಿ




