ಶಿರಸಿ: ಬನವಾಸಿ ಬಳಿಯ ಮುಖವಳ್ಳಿ ಆದರ್ಶ ಕಾಳೆನವರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು 10 ಸಾವಿರ ರೂ ಹಣದ ಜೊತೆ 1.24 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗೊದ್ರೆಜ್ ಕಪಾಟನಲ್ಲಿದ್ದ ಹಣ, ಬಂಗಾರದ ಸರ, ಉಂಗುರ, ಜುಮುಕಿ, ಕಿವಿಯ ಒಲೆ, ಬೆಳ್ಳಿ ಸರವನ್ನು ಕಳ್ಳರು ದೋಚಿದ್ದಾರೆ.
ಮಗವಳ್ಳಿಯ ಆದರ್ಶ ಕನ್ನಪ್ಪ ಕಾಳೆನವರ್ ಅವರ ಮನೆಗೆ ಪೊಲೀಸರು ಬಂದಿದ್ದು, ಶ್ವಾನದಳದ ನೆರವಿನಿಂದ ಚಿನ್ನಾಭರಣಗಳ ಹುಡುಕಾಟ ನಡೆದಿದೆ. ಸಿಪಿಐ ಶಶಿಕಾಂತ ವರ್ಮ ಹಾಗೂ ಪಿಎಸ್ಐ ಚಂದ್ರಕಲಾ ಪತ್ತಾರ್ ತನಿಖೆ ನಡೆಸುತ್ತಿದ್ದಾರೆ.




