ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಭೂಮಿ ಕಂಪನಿಸಿದ ಬಗ್ಗೆ ಸಾವಿರಾರು ಜನ ಅನುಭವ ಹಂಚಿಕೊoಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಜನ ಬರೆದುಕೊಂಡಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇದನ್ನು ಅಲ್ಲಗಳೆದಿದೆ!
ಉತ್ತರ ಕನ್ನಡ ಜಿಲ್ಲಾಡಳಿತದ ಅಧೀನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತದೆ. ಆದರೆ, ಜಿಲ್ಲೆಯಲ್ಲಿ ಭೂ ಕಂಪನ ಅಳೆಯುವ ಸಾಧನಗಳಿಲ್ಲ. ಹೀಗಾಗಿ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಿoದ ಮಾಹಿತಿ ಪಡೆಯಲಾಗುತ್ತದೆ. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ದಾಖಲೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭೂ ಕಂಪನದ ಬಗ್ಗೆ ದಾಖಲಾಗಿಲ್ಲ.
ಇದನ್ನು ಓದಿ: ಮಲೆನಾಡಿನ ಗುಡ್ಡ ಗಡಗಡ!
ಸಾಕ್ಷಿ ಹೇಳುವವರು ಬೇಕಾಗಿದ್ದಾರೆ!
ಕಂಪನದ ಅನುಭವ ಆದ ಬಗ್ಗೆ ಈಗಲೂ ಜನ ಮಾತನಾಡುತ್ತಿದ್ದಾರೆ. ಆದರೆ, ಅದಕ್ಕೆ ಸಾಕ್ಷಿ ಒದಗಿಸಲು ಸಾರ್ವಜನಿಕರಲ್ಲಿ ಯಾವುದೇ ಸಾಧನವಿಲ್ಲ. ಅದಾಗಿಯೂ ಸರ್ಕಾರ ಕಂಪನ ಆಗಿರುವುದನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ರೆಡಾರ್ ಮಾಫನವೇ ಹಾಳಾಗಿದೆಯೇ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ!
`ಜನ ಆತಂಕಕ್ಕೆ ಒಳಗಾಗುವುದು ಬೇಡ’ ಎಂದು ಜಿಲ್ಲಾಡಳಿತ ಪ್ರಕಟಣೆ ನೀಡಿದೆ. ಅದಾಗಿಯೂ ಕಂಪನದ ಅನುಭವ ಆದವರು ವಿಪತ್ತು ನಿರ್ವಹಣಾ ಕೇಂದ್ರದ ಸಂಖ್ಯೆ 1077 ಅಥವಾ 08382-229857ಗೆ ಫೋನ್ ಮಾಡುವಂತೆ ಸೂಚಿಸಿದೆ.




