ಅಂಕೋಲಾ: ಬಸ್ಸು-ಜೀಪು ಹಾಗೂ ಕಾರಿನ ನಡುವೆ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಪಘಾತದ ಪರಿಣಾಮ ಗಂಟೆಗಳ ಕಾಲ ಇತರೆ ವಾಹನ ಸವಾರರು ಸಮಸ್ಯೆ ಅನುಭವಿಸಿದರು.
ಸೋಮವಾರ ಸಂಜೆ ಹಾವೇರಿಯ ಮೆಹಬೂಬಲಿ ವೇಗವಾಗಿ ಬುಲೇರೋ ಪಿಕ್ಅಪ್ ಓಡಿಸಿಕೊಂಡು ಬರುತ್ತಿದ್ದರು. ಕಾರವಾರದಿಂದ ಅಂಕೋಲಾ ಕಡೆ ಸಾಗುತ್ತಿದ್ದ ಅವರು ಮೊದಲು ಎದುರಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿಗೆ ಗುದ್ದಿದರು. ಅದಾದ ಮೇಲೆ ಹಿಂದಿನಿAದ ಬರುತ್ತಿದ್ದ ಆರ್ಟಿಗಾ ಕಾರಿಗೆ ಡಿಕ್ಕಿ ಹೊಡೆದರು.
ಹಾರವಾಡ ಕರಿದೇವಸ್ಥಾನ ತಿರುವಿನಲ್ಲಿ ಈ ಅಪಘಾತ ನಡೆದಿದ್ದು, ಬುಲೋರೋದಲ್ಲಿದ್ದ ಆಕಾಶ ಪಾಟೀಲ ಹಾಗೂ ಅದೇ ವಾಹನ ಚಾಲಕ ಮೆಹಬೂಬಲಿ ಗಾಯಗೊಂಡರು. ಕೆಎಸ್ಆರ್ಟಿಸಿ ಬಸ್ಸಿಗೆ ಗುದ್ದಿದ ಕಾರಣ ಬಸ್ಸಿನ ಚಾಲಕ ರಾಜೇಂದ್ರ ತಾಂಡೇಲ್ ಪೊಲೀಸ್ ದೂರು ನೀಡಿದರು.




