ಕುಮಟಾ: ಗೋಕರ್ಣದ ಓಂ ಕಡಲತೀರಕ್ಕೆ ಸಾಗುವ ಕುಡ್ಲೆ ಕಡಲತೀರ ಮಾರ್ಗದ ಅಂಚಿನಲ್ಲಿ ಭೂ ಕುಸಿತ ಉಂಟಾಗಿದೆ. ರಸ್ತೆ ಸಹ ಕುಸಿತಕ್ಕೆ ಒಳಗಾಗುವ ಸಾಧ್ಯತೆಗಳಿದೆ. ರೆಸಾರ್ಟ ನಿರ್ಮಾಣಕ್ಕಾಗಿ ಅವೈಜ್ಞಾನಿಕ ರೀತಿ ಗುಡ್ಡ ಕೊರೆದಿರುವುದೇ ಈ ಕುಸಿತಕ್ಕೆ ಕಾರಣ.
ರಸ್ತೆ ಅಂಚಿನಲ್ಲಿಯೇ ಈ ಕುಸಿತ ಉಂಟಾಗಿರುವುದರಿAದ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಲಘು ವಾಹನಗಳ ಓಡಾಟಕ್ಕೆ ಸಮಸ್ಯೆ ಇಲ್ಲ. ಆದರೆ, ಬಸ್ಸು ಸೇರಿ ಭಾರೀ ಗಾತ್ರದ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವ ಮುನ್ನ ಮುನ್ನಚ್ಚರಿಕೆವಹಿಸುವುದು ಒಳಿತು. ಒಂದಾನುವೇಳೆ ಈ ರಸ್ತೆ ಕುಸಿತವಾದಲ್ಲಿ ಓಂ ಕಡಲತೀರಕ್ಕೆ ತೆರಳುವ ಮಾರ್ಗ ಕಡಿತವಾಗಲಿದೆ.
ಇಲ್ಲಿನ ಮುಖ್ಯರಸ್ತೆಗೆ ಹೊಂದಿಕೊoಡು 500ಮೀ ಹೆಚ್ಚು ಇಳಿಜಾರು ಪ್ರದೇಶವಿದ್ದು, ಅದನ್ನು ಯಂತ್ರಗಳನ್ನು ಬಳಸಿ ಕತ್ತರಿಸಲಾಗಿದೆ. ರೆಸಾರ್ಟ ನಿರ್ಮಾಣಕ್ಕಾಗಿ ಅವೈಜ್ಞಾನಿಕ ರೀತಿ ಗುಡ್ಡ ಕುಸಿದರೂ ಯಾವ ಅಧಿಕಾರಿಯೂ ತಲೆ ಕೆಡಿಸಿಕೊಂಡಿಲ್ಲ. ಇದೀಗ ಭೂ ಕುಸಿತ ಆದ ಪ್ರದೇಶದ ರಸ್ತೆಯಲ್ಲಿ ಸ್ಥಳೀಯರು ಸಾಲಾಗಿ ಕಲ್ಲುಗಳನ್ನು ಇರಿಸಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.




