6
  • Latest

ಶಿರಸಿ | ಕೋಟು-ಕಚೇರಿಗೆ ಬರುವವರಿಗೆ ಶ್ವಾನ ಕಾಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಶಿರಸಿ | ಕೋಟು-ಕಚೇರಿಗೆ ಬರುವವರಿಗೆ ಶ್ವಾನ ಕಾಟ!

AchyutKumar by AchyutKumar
December 17, 2024
in ವಿಡಿಯೋ
advt advt advt
ADVERTISEMENT

ಶಿರಸಿ: ನಗರದ ಎಲ್ಲೆಂದರಲ್ಲಿ ಬೀಡಾಡಿ ನಾಯಿಗಳು ಹೆಚ್ಚಾಗಿದ್ದು, ಸಾರ್ವಜನಿಕರ ಮೇಲೆ ಅವು ಆಕ್ರಮಣ ನಡೆಸುತ್ತಿವೆ. ಕೋರ್ಟು – ಕಚೇರಿ ಸುತ್ತಲಿನ ಪ್ರದೇಶದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಬೀದಿ ನಾಯಿಗಳಿವೆ. ಬೀಡಾಡಿ ನಾಯಿಗಳ ಆಕ್ರಮಣ ಹೆಚ್ಚಾಗಿದ್ದರೂ ಅವುಗಳ ನಿಯಂತ್ರಣ ಕಾರ್ಯ ನಡೆದಿಲ್ಲ!

ರಾಘವೇಂದ್ರ ಸರ್ಕಲ್’ನಿಂದ ದೇವಿಕೆರೆ ಹೋಗುವ ಕೋರ್ಟ ಹಿಂದಿನ ರಸ್ತೆ ಬದಿಯಲ್ಲಿ ಮಂಗಳವಾರ ನಾಯಿಗಳ ಹಿಂಡು ಕಾಣಿಸಿತು. ನಂತರ ಕೋರ್ಟ ಆವರಣದೊಳಗೆ ಅವು ಪ್ರವೇಶಿಸಿ ಗಲೀಜು ಮಾಡಿದವು. ನಗರಸಭೆ ಆವರಣವೂ ಸೇರಿ ನಗರದ ಹಲವು ಕಚೇರಿಯೊಳಗೆ ನಾಯಿ ಪ್ರವೇಶವಾಗುತ್ತಿದೆ. ಕಚೇರಿ ಕೆಲಸಕ್ಕಾಗಿ ಆಗಮಿಸುವವರ ಮೇಲೆ ನಾಯಿಗಳಿಂದ ಅನಗತ್ಯ ದಾಳಿ ನಡೆಯುತ್ತಿದೆ. ಎಲ್ಲೆಂದರಲ್ಲಿ ಜೊಲ್ಲು ಸುರಿಸುವ ನಾಯಿಗಳಿಂದ ರೋಗ ಹರಡುವಿಕೆಯ ಆತಂಕವೂ ಎದುರಾಗಿದೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಬೀಡಾಡಿ ಜಾನುವಾರುಗಳ ಕಾಟದಿಂದ ಪದೇ ಪದೇ ಅಪಘಾತಗಳು ನಡೆಯುತ್ತಿದೆ. ನಾಯಿ-ದನಕ್ಕೆ ಗುದ್ದಿ ಗಾಯಗೊಂಡ ಬೈಕ್ ಸವಾರರು ಅನೇಕರಿದ್ದಾರೆ. ಜನರಿಗೆ ಸಾಕಷ್ಟು ತೊಂದರೆ ನೀಡುತ್ತಿರುವ ಈ ಜೀವಿಗಳ ವಿರುದ್ಧ ಹೋರಾಟ ಮಾಡುವವರು ಶಿರಸಿಯಲ್ಲಿಲ್ಲ. ಅಧಿಕಾರಿಗಳು ಸಹ ಬೀಡಾಡಿ ಜೀವಿಗಳ ನಿಯಂತ್ರಣಕ್ಕೆ ಆಸಕ್ತಿವಹಿಸಿಲ್ಲ. ಬೀದಿ ಬೀದಿಯಲ್ಲಿ ಸಂಚರಿಸುವ ನಾಯಿಗಳಂತೂ ಜನರ ಕಾಲಿಗೆ ಬಾಯಿ ಹಾಕುತ್ತಿದ್ದು, ಸಣ್ಣ ಮಕ್ಕಳ ಜೊತೆ ವಾಕಿಂಗ್ ತೆರಳಲು ಜನ ಹೆದರುತ್ತಿದ್ದಾರೆ.

ಈ ನಾಯಿಗಳ ಕಾಟ ಶಿರಸಿ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಮೀಣ ಭಾಗದ ಜನರ ಮನೆಗೆ ಬರುವ ನೆಂಟರಿಗೂ ನಾಯಿ ದಾಳಿ ಮಾಡಿದ ಉದಾಹರಣೆಗಳಿವೆ. ಹುಲೆಕಲ್ ಸೋಂದಾ ರಸ್ತೆಯ ಹುತ್ಗಾರ್ ಬಳಿ ಮೊನ್ನೆ ಕಮಲಾ ಹೆಗಡೆ ಅವರು ನಾಯಿ ದಾಳಿಗೆ ಒಳಗಾದರು. ಅವರ ಸೀರೆಯನ್ನು ಬೀದಿ ನಾಯಿ ಹರಿದಿದ್ದು, ಅಂತೂ-ಇoತೂ ಅವರು ನಾಯಿ ಕಚ್ಚಿಸಿಕೊಳ್ಳುವಿಕೆಯಿಂದ ಬಚಾವಾದರು.
ನಾಯಿ ಕಾಟದಿಂದ ಆಗುವ ಸಮಸ್ಯೆಗಳ ಬಗ್ಗೆ ಸಾವಿತ್ರಿ ಭಟ್ಟ ಅವರು ನೀಡಿದ ಪ್ರತ್ಯಕ್ಷ ವರದಿಯ ವಿಡಿಯೋ ಇಲ್ಲಿ ನೋಡಿ..

ShareSendTweetShare
ADVERTISEMENT
Previous Post

ತುಳಸಿ ನಿಧನಕ್ಕೆ ಕರವೇ ನಗರ ಅಧ್ಯಕ್ಷರ ಕಂಬನಿ

Next Post

ವೃಕ್ಷಮಾತೆ ಸಂದೇಶಕ್ಕೆ ಸಾವಿಲ್ಲ | ಸುವರ್ಣ ಸೌಧದಲ್ಲಿಯೂ ತುಳಸಿ ಧ್ಯಾನ!

Next Post

ವೃಕ್ಷಮಾತೆ ಸಂದೇಶಕ್ಕೆ ಸಾವಿಲ್ಲ | ಸುವರ್ಣ ಸೌಧದಲ್ಲಿಯೂ ತುಳಸಿ ಧ್ಯಾನ!

ಕಾಳ ಸಂತೆಯಲ್ಲಿ ಮಕ್ಕಳ ಮಾರಾಟ: ಕಾರವಾರದ ವೈದ್ಯೆಯ ಮೇಲೆ ಅನುಮಾನ!

ಗೂಡಂಗಡಿ-ಹೊಟೇಲಿನಲ್ಲಿಯೂ ಮಟ್ಕಾ ಆಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.