6
  • Latest

ಕಡಲ ಆಮೆಗೆ ಬಿಗಿ ಭದ್ರತೆ: ಮೊಟ್ಟೆ ಕಾಣಿಸಿದವರಿಗೆ ಸಾವಿರ ರೂ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಕಡಲ ಆಮೆಗೆ ಬಿಗಿ ಭದ್ರತೆ: ಮೊಟ್ಟೆ ಕಾಣಿಸಿದವರಿಗೆ ಸಾವಿರ ರೂ!

AchyutKumar by AchyutKumar
December 20, 2024
in ಲೇಖನ
advt advt advt
ADVERTISEMENT

ಕಡಲ ಆಮೆಗಳ ಸಂತಾನೋತ್ಪತ್ತಿಗೆ ಇದೀಗ ಸಕಾಲ. ಕಡಲತೀರದ ದಿಬ್ಬಕ್ಕೆ ಬರುವ ಆಮೆಗಳು ಅಲ್ಲಿ ಮೊಟ್ಟೆಯಿಟ್ಟು ತೆರಳುತ್ತಿದ್ದು, ಆ ಮೊಟ್ಟೆಗಳನ್ನು ಕಾಣಿಸಿಕೊಟ್ಟವರಿಗೆ ಅರಣ್ಯ ಇಲಾಖೆ ಸಾವಿರ ರೂ ಸಿಗುತ್ತದೆ!

ಪರಿಸರ ಸಂರಕ್ಷಣೆಯಲ್ಲಿ ಆಮೆಗಳ ಪಾತ್ರ ಬಹುದೊಡ್ಡದು. ಅದರಲ್ಲಿಯೂ ಕಡಲ ಆಮೆಗಳ ಜೀವನಶೈಲಿ ವಿಭಿನ್ನ. ಹೀಗಾಗಿ ಕಡಲ ಆಮೆಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ ನಾನಾ ಕಸರತ್ತು ನಡೆಸುತ್ತಿದೆ. ಮೊಟ್ಟೆಯಿಡುವ ಆಮೆಗಳ ಬಾಣಂತನ ಎಂದರೆ ಅರಣ್ಯ ಸಿಬ್ಬಂದಿಗೂ ಸಡಗರದ ಸಂಗತಿ. ಹೀಗಾಗಿ ಕಡಲತೀರಕ್ಕೆ ಬರುವ ಅತಿಥಿಗೆ ಈ ಅವಧಿಯಲ್ಲಿ ವಿಶೇಷ ಮನ್ನಣೆಯಿದೆ.

Advertisement. Scroll to continue reading.
ADVERTISEMENT
ADVERTISEMENT

ಆಮೆ ಮೊಟ್ಟೆ ಇಟ್ಟ ತಕ್ಷಣ ನಾಯಿ – ನರಿ ಸೇರಿ ಆಕ್ರಮಣ ನಡೆಸುವ ಸಾಧ್ಯತೆಗಳು ಹೆಚ್ಚಿವೆ. ಆಮೆ ಮೊಟ್ಟೆಗೆ ಕಾಳ ಸಂತೆಯಲ್ಲಿ ಭಾರೀ ಪ್ರಮಾಣದ ಬೇಡಿಕೆಯಿದೆ. ಹೀಗಾಗಿ ಅದನ್ನು ಸಂರಕ್ಷಿಸುವುದು ಸವಾಲಿನ ಕೆಲಸ. ಆಮೆ ಮೊಟ್ಟೆ ಇಟ್ಟಿರುವ ಸಂಗತಿಯನ್ನು ಗುರುತಿಸಿ ಇಲಾಖೆಗೆ ಮಾಹಿತಿ ನೀಡುವವರ ಸಂಖ್ಯೆಯೂ ವಿರಳ. ಈ ಹಿನ್ನಲೆ ಅರಣ್ಯ ಇಲಾಖೆ ಆಮೆಗಳ ಬಗ್ಗೆ ಜನರಿಗೆ ಪ್ರೀತಿ ಮೂಡಿಸಲು ಮೊಟ್ಟೆ ಕಾಣಿಸಿದವರಿಗೆ ಕಾಸು ಕೊಡುತ್ತಿದೆ.

ಆಮೆ ಮೊಟ್ಟೆ ಗುರುತಿಸುವುದು ಹೇಗೆ?
ಡಿಸೆಂಬರ್’ನಿoದ ಫೆಬ್ರವರಿ ಅಂತ್ಯದವರೆಗೂ ಆಮೆ ಮೊಟ್ಟೆಯಿಡುತ್ತದೆ. ನಸುಕಿನ ಅವಧಿಯಲ್ಲಿ ಕಡಲತೀರ ಸಂಚಾರ ನಡೆಸುವವರಿಗೆ ಕಡಲ ಆಮೆ ಮೊಟ್ಟೆ ಕಾಣಿಸುವ ಸಾಧ್ಯತೆ ಹೆಚ್ಚು. ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಗುರುತಿಸುತ್ತಾರೆ.

Advertisement. Scroll to continue reading.

ಮೊಟ್ಟೆಗಳನ್ನಿಡಲು ದಡಕ್ಕೆ ಬರುವ ಆಮೆ ಕಡಲ ಮರಳಿನ ಮೇಲೆ ವಾಹನ ಚಕ್ರ ಓಡಾಡಿದ ರೀತಿ ಕುರುಹು ಬಿಡುತ್ತದೆ. ಅದನ್ನು ಆಧರಿಸಿ ಹುಡುಕಾಟ ನಡೆಸಿದರೆ ಮರಳಿನಲ್ಲಿ ಅಡಗಿದ ಆಮೆ ಮೊಟ್ಟೆ ಕಾಣುತ್ತದೆ. ಮೊಟ್ಟೆಯನ್ನು ಯಾವ ಪ್ರಾಣಿಯೂ ಮುಟ್ಟದಂತೆ ಕಾಪಾಡಿ, ಅರಣ್ಯ ಸಿಬ್ಬಂದಿಗೆ ಫೋನಾಯಿಸಿದರೆ ನಮ್ಮ-ನಿಮ್ಮ ಕೆಲಸ ಮುಗಿಯಿತು.

ಕುಮಟಾದ ದುಬ್ಬಿನಸಸಿ ಕಡಲತೀರದಲ್ಲಿ ಗುರುವಾರ ರಾತ್ರಿ ಕಡಲ ಆಮೆ ಮೊಟ್ಟೆಯಿಟ್ಟಿದೆ. ಈ ಮಾಹಿತಿ ಆಧರಿಸಿ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆಮೆ ಮೊಟ್ಟೆಯ ಸುದ್ದಿ ಮುಟ್ಟಿಸಿದವರಿಗೆ ಸ್ಥಳದಲ್ಲಿಯೇ ಸಾವಿರ ರೂ ನೀಡಿದ್ದಾರೆ. ಒಟ್ಟು 130 ಮೊಟ್ಟೆಗಳಿಗೆ ಅವರು ಭದ್ರತೆ ಒದಗಿಸಿದ್ದಾರೆ. ಎಲ್ಲಾ ಮೊಟ್ಟೆಗಳನ್ನು ಗಂಗೆಕೊಳ್ಳದ ಸಂರಕ್ಷಣಾ ಕೇಂದ್ರದಲ್ಲಿ ರಕ್ಷಿಸಲಾಗಿದ್ದು, 45 ದಿನಗಳ ನಂತರ ಮರಿಗಳು ಹೊರಬರಲಿವೆ.

ಆಮೆ ಮೊಟ್ಟೆ ಸಂರಕ್ಷಣೆಯಲ್ಲಿ ತೊಡಗಿರುವ ಅರಣ್ಯ ಸಿಬ್ಬಂದಿ

ಕಳೆದ ವರ್ಷ ಅರಣ್ಯ ಇಲಾಖೆ 8 ಸಾವಿರ ಮೊಟ್ಟೆಗಳನ್ನು ಸಂರಕ್ಷಿಸಿತ್ತು. ಆಮೆ ಮರಿಗಳನ್ನು ಶಾಲಾ ಮಕ್ಕಳು ಸಮುದ್ರಕ್ಕೆ ಬಿಟ್ಟು ಸಂಭ್ರಮಿಸಿದ್ದರು. ಈ ವರ್ಷ ಈವರೆಗೆ ಮೂರು ಗೂಡು ಗುರುತಿಸಲಾಗಿದ್ದು, 310 ಮೊಟ್ಟೆಗಳು ಸಿಕ್ಕಿದೆ. `ಆಮೆ ಮೊಟ್ಟೆಯಿಟ್ಟಿರುವ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ ಮೊದಲಿನಿಂದಲೂ ಗೌರವಧನ ಕೊಡುವ ಪದ್ಧತಿಯಿದೆ. ಮೊದಲು 400 ರೂ ಕೊಡಲಾಗುತ್ತಿತ್ತು. ನಂತರ 600ರೂ ಇದ್ದು, ಇದೀಗ 1 ಸಾವಿರ ರೂ ನೀಡಲಾಗುತ್ತದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ತಿಳಿಸಿದರು.

ShareSendTweetShare
ADVERTISEMENT
Previous Post

ಪೊಲೀಸ್ ಅಧೀಕ್ಷಕರಿಗೆ ಹುಟ್ಟುಹಬ್ಬದ ಸಡಗರ: ಎಂ ನಾರಾಯಣ ಅವರಿಗೆ ಇದೀಗ 48ರ ಪ್ರಾಯ!

Next Post

ಕೇಂದ್ರ ಸಚಿವರಿಗೆ ಚಪ್ಪಲಿ ಏಟು!

Next Post

ಕೇಂದ್ರ ಸಚಿವರಿಗೆ ಚಪ್ಪಲಿ ಏಟು!

ಸಮೃದ್ಧಿ ಸೊಸೈಟಿ: ಅವ್ಯವಹಾರ ಎಂದು ಬೆದರಿಸಿದವ 76 ಲಕ್ಷ ರೂ ಕೇಳಿದ!

ದೇವರ ದುಡ್ಡಿನ ಮೇಲೆ ಕಳ್ಳರ ಕಣ್ಣು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.