ಕಾರವಾರ: ಅನೇಕ ವರ್ಷಗಳಿಂದ ಬೀಡಿ ಸೇದುವ ಚಟ ಹೊಂದಿದ್ದ ಪಾಂಡುರoಗ ಗೌಡ ಕುಸಿದು ಬಿದ್ದು ಸಾವನಪ್ಪಿದ್ದಾರೆ.
ಬೈತಖೋಲದ ಗೌಡವಾಡದಲ್ಲಿ ವಾಸವಾಗಿದ್ದ ಪಾಂಡುರoಗ ಗೌಡ (59) ಡಿ 22ರಂದು ಸರ್ವೋದಯ ನಗರಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಊಟ ಮುಗಿಸಿ ಕೆಲಸ ಮಾಡುತ್ತಿದ್ದರು. ಸಂಜೆ 6.30ರ ವೇಳೆಗೆ ಅವರು ಕುಸಿದು ಬಿದ್ದರು.
ಅವರ ಜೊತೆ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ಕೋಡಾರಕರ್ ಅವರು ಪಾಂಡುರAಗ ಗೌಡರನ್ನು ಆಸ್ಪತ್ರೆಗೆ ದಾಖಲಿಸಿದರು. ಅದಾದ ನಂತರ ಪಾಂಡು ರಂಗ ಅವರ ಮಗ ಸಂದೇಶ ಗೌಡ ಅವರಿಗೂ ಫೋನ್ ಮಾಡಿ ವಿಷಯ ತಿಳಿಸಿದರು.
ಸಂದೇಶ ಗೌಡ ಬಂದು ವಿಚಾರಿಸಿದಾಗ ಆಸ್ಪತ್ರೆಗೆ ಬರುವ ಮೊದಲೇ ಅವರ ತಂದೆ ಸಾವನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದರು. ಮೊದಲಿನಿಂದಲೂ ಬೀಡಿ ಸೇದುವ ಚಟ ಹೊಂದಿದ್ದ ಪಾಂಡುರAಗ ಗೌಡ ತಮಗಿದ್ದ ರೋಗದಿಂದ ಸಾವನಪ್ಪಿದ್ದಾರೆ ಎಂದು ಸಂದೇಶ ಗೌಡ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಪೊಲೀಸ್ ಪ್ರಕರಣ ದಾಖಲಿಸಿ ಅವರು ಶವ ಪಡೆದರು.




