6
  • Latest

ಹಸಿದ ಹೊಟ್ಟೆಗಳಿಗೆ ಹಬ್ಬದ ಊಟ ನೀಡುವುದೇ ಇವರ ಕಾಯಕ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಹಸಿದ ಹೊಟ್ಟೆಗಳಿಗೆ ಹಬ್ಬದ ಊಟ ನೀಡುವುದೇ ಇವರ ಕಾಯಕ!

ಅತಿಥಿ ಸತ್ಕಾರ ಎಂಬುದು ಉತ್ತರ ಕನ್ನಡದವರ ರಕ್ತದಲ್ಲಿಯೇ ಬಳುವಳಿಯಾಗಿ ಬಂದಿದೆ. ಮಧ್ಯಾಹ್ನದ ಹೊತ್ತು ಮನೆ ಮುಂದೆ ಅಪರಿಚಿತರೂ ಬಂದರೂ ತುತ್ತು ಅನ್ನ ಹಾಕದೇ ಅವರನ್ನು ಕಳುಹಿಸುವವರಲ್ಲ ಇಲ್ಲಿಯ ಜನ. ಹೀಗಿರುವಾಗ ಬಡವರ ಹಸಿವು ನೋಡಿದಾಗ ತಮ್ಮ ಹೊಟ್ಟೆಯಲ್ಲಿ ತಳಮಳ ಹೆಚ್ಚಿಸಿಕೊಳ್ಳುವ ತಂಡವೊoದು ಯಲ್ಲಾಪುರದಲ್ಲಿದ್ದು, ಹಸಿದ ಹೊಟ್ಟೆಗಳಿಗೆ ಹಬ್ಬದ ಊಟ ನೀಡುವುದೇ ಅವರ ಕಾಯಕ!

AchyutKumar by AchyutKumar
June 18, 2024
in ಲೇಖನ
advt advt advt
ADVERTISEMENT

ಹಬ್ಬ-ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಒಂದಷ್ಟು ಸಮಾನ ಮನಸ್ಕರು ತಿಂಗಳಿನಲ್ಲಿ ಒಂದು ದಿನ ಆಸ್ಪತ್ರೆ, ಅನಾಥ ಮಕ್ಕಳು, ವೃದ್ಧರು ಹಾಗೂ ಅಶಕ್ತರಿಗೆ ಹಬ್ಬದ ಊಟ ಬಡಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ.
ಯಲ್ಲಾಪುರದ ಟಿಎಸ್‌ಎಸ್ ಆವಾರದಲ್ಲಿ ಬೇಕರಿ ನಡೆಸುತ್ತಿರುವ ಹೊನಗದ್ದೆಯ ದಯಾನಂದ ಹೆಗಡೆ ಈ ಸೇವೆಯ ರೂವಾರಿ. ಕೃಷಿ ಇಲಾಖೆಯ ಎದುರು ಹಣ್ಣಿನ ಅಂಗಡಿ ನಡೆಸುತ್ತಿರುವ ಸಂದ್ಯಾ ಹೆಗಡೆ, ಕಾವೇರಿ ವೆಲ್ಡಿಂಗ್’ನ ಸೂರ್ಯನಾರಾಯಣ ಭಟ್ಟ ಹಾಗೂ ನಂದೂಳ್ಳಿಯ  ಶ್ರೀಪಾದ ಹೆಗಡೆ ಜೊತೆದಾರರು. ಇವರೆಲ್ಲರೂ ತಮ್ಮ ದುಡಿಮೆಯಿಂದ ಉಳಿದ ಹಣದಲ್ಲಿ ಒಂದಷ್ಟು ಒಟ್ಟುಗೂಡಿಸಿ ಅನ್ನದಾನ ಮಾಡುತ್ತಿದ್ದಾರೆ.
ಏಳು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಶುರುವಾದ ಈ ಕಾಯಕ ಕಳೆದ ವರ್ಷದಿಂದ ಯಲ್ಲಾಪುರಕ್ಕೂ ವಿಸ್ತರಣೆಯಾಗಿದೆ. ಅಂಗವಿಕಲರು, ಮಾನಸಿಕ ಅಸ್ವಸ್ಥರು, ವೃದ್ಧ-ವೃದ್ಧೆಯರು ಅಂದರೆ ಈ ತಂಡದವರಿಗೆ ಎಲ್ಲಿಲ್ಲದ ಕನಿಕರ. ಪ್ರೀತಿಯಿಂದ ಬಡಿಸಿ, ಊಟ ಹಾಕಿದವರು ಅಲ್ಲಿಂದ ಹೊರಡುವಾಗ ಆಶ್ರಮದಲ್ಲಿನ ವೃದ್ಧರು ತಮ್ಮ ಮಕ್ಕಳನ್ನು, ಚಿಣ್ಣರು ತಂದೆ-ತಾಯಿಯರನ್ನು ನೆನೆದು ಕಣ್ಣೀರು ಹಾಕಿದ್ದು ಇದೆ. ನಾಯ್ಕನಕೆರೆಯಲ್ಲಿರುವ ರಾಘವೇಂದ್ರ ಆಶ್ರಮ ಹಾಗೂ ಕಾಳಮ್ಮನಗರದಲ್ಲಿನ ವಿಠ್ಠಲ ವನವಾಸಿ ಆಶ್ರಮದಲ್ಲಿದ್ದವರು ಸಂತೃಪ್ತಿಯಿAದ ಊಟ ಮಾಡಿ ದಾನಿಗಳಿಗೆ ಹರಸುತ್ತಾರೆ.
ಬೆಂಗಳೂರಿನಲ್ಲಿ ಕೆಲವರು ತಮ್ಮ ತಮ್ಮ ಹುಟ್ಟುಹಬ್ಬದ ದಿನ ಬಡವರಿಗೆ ಊಟ ಕೊಡಿಸುತ್ತಿದ್ದರು. ಅಂಥವರೆಲ್ಲ ಪರಸ್ಪರ ಪರಿಚಯವಾಗಿ `ದಾನವೇ ಭೂಮಿಯಲ್ಲಿ ಶ್ರೇಷ್ಟ’ ಎಂಬ ಟ್ರಸ್ಟ್ ರಚಿಸಿಕೊಂಡು ಅವರವರ ಹುಟ್ಟುಹಬ್ಬದ ಬದಲು ತಿಂಗಳಿಗೆ ಒಮ್ಮೆ ಊಟ ಕೊಡುವ ಬಗ್ಗೆ ನಿರ್ಣಯಿಸಿದರು. 52 ಮಂದಿ ಈ ತಂಡದಲ್ಲಿದ್ದು, ಯಲ್ಲಾಪುರದ ನಾಲ್ವರು ಇಲ್ಲಿ ಆ ಪದ್ಧತಿಯನ್ನು ಮುಂದುವರೆಸಿದ್ದಾರೆ. ಬೆಂಗಳೂರಿನಲ್ಲಿರುವ ಉಳಿದವರು ಅಲ್ಲಿನ ಹಲವು ಆಶ್ರಮಗಳಿಗೆ ಊಟ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಕೆಲಸ ಮಾಡುತ್ತಿರುವವರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯವರಿದ್ದು, ಅಲ್ಲಿನ ನಿವಾಸಿಗಳು ಸಹ ಇವರ ಜೊತೆಯಾಗಿದ್ದಾರೆ.
ಇಲ್ಲಿ ಅನ್ನ – ಸಾರು ಜೊತೆ ಸಿಹಿ ಮತ್ತು ಖಾರ ತಿನಿಸು, ತಂಬಳಿಯನ್ನು ಒಳಗೊಂಡ `ಹವ್ಯಕ’ ಶೈಲಿಯ ಊಟವನ್ನು ನೀಡಲಾಗುತ್ತದೆ. ಎಪಿಎಂಸಿ ಮುಂಬಾಗ ಕ್ಯಾಂಟಿನ್ ನಡೆಸುವ ಶ್ರೀಮಾತಾದ ಮಂಜಣ್ಣ ಇವರು ಹೇಳಿದಲ್ಲಿ ಊಟ ತೆಗೆದುಕೊಂಡು ಹೋಗುವ ಹೊಣೆ ಹೊತ್ತಿದ್ದಾರೆ. ಯುಗಾದಿ, ಶಿವರಾತ್ರಿ, ರಾಮನವಮಿ ಮೊದಲಾದ ಹಬ್ಬ ಇದ್ದಲ್ಲಿ ಹಬ್ಬದ ದಿನದಂದೇ ಊಟ ಬಡಿಸಲಾಗುತ್ತದೆ. ಇಷ್ಟೇ ಅಲ್ಲ, ಯಲ್ಲಾಪುರದಲ್ಲಿರುವ ಈ ನಾಲ್ವರು ಸೇರಿ ಕಳೆದ ವರ್ಷ ಶಾಲಾ ಮಕ್ಕಳಿಗೆ ಪಠ್ಯ ವಿತರಿಸಿದ್ದಾರೆ. ಪೌರ ಕಾರ್ಮಿಕರಿಗೂ ನೆರವು ನೀಡಿದ್ದಾರೆ.
– ಅಚ್ಯುತಕುಮಾರ ಯಲ್ಲಾಪುರ

ADVERTISEMENT
ADVERTISEMENT
Advertisement. Scroll to continue reading.
Advertisement. Scroll to continue reading.
ShareSendTweetShare
ADVERTISEMENT
Previous Post

ಪ್ರಯಾಣಿಕರನ್ನು ಬಿಟ್ಟು ಬಂದ ಬಸ್: ಮಹಿಳಾ ಕಂಡೆಕ್ಟರ್ ಮೇಲೆ ಹಲ್ಲೆ

Next Post

ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಬಿಜೆಪಿ ನಾಯಕ

Next Post

ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಬಿಜೆಪಿ ನಾಯಕ

ಸರ್ಕಾರಕ್ಕೆ ವರ ನೀಡಿದ ಮಂಜಗುಣಿ ದೇಗುಲ

ಬಕ್ರಿದ್'ಗೆ ಬಂದು ಸಿಕ್ಕಿಬಿದ್ದ `ಭಯ'ಉತ್ಪಾದಕ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.