ಅಂಕೋಲಾ: ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರವಾರದ ನರೇಂದ್ರ ದೇಸಾಯಿ ಅವರಿಗೆ `ದೀನಬಂಧು ದತ್ತನಿಧಿ’ ಪ್ರಶಸ್ತಿ ದೊರೆತಿದೆ. ಅಂಕೋಲಾದ ಕಲಾ ಸಂಘದವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕರ್ನಾಟಕ ಕಲಾ ಸಂಘದವರು ಅನೇಕ ವರ್ಷಗಳಿಂದ ಸಾಂಸ್ಕೃತಿಕ ಚಟುವಟಿಕೆ ನಡೆಸಿಕೊಂಡು ಬಂದಿದ್ದಾರೆ. ಅದರೊಂದಿಗೆ ಕರ್ನಾಟಕ ಸಂಘದಿoದ `ದೀನಬಂಧು ಸ ಪ ಗಾಂವಕರ ದತ್ತಿ ನಿಧಿ’ ಸ್ಥಾಪಿಸಲಾಗಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡುತ್ತಿದ್ದಾರೆ. ಆಪ್ಟಿಕಲ್ ಫೈಬರ್ ನೆಟ್ವರ್ಕಿಂಗ್ ಕುರಿತು ದೆಹಲಿಯಲ್ಲಿ ಅಧ್ಯಯನ ನಡೆಸಿದ ನರೇಂದ್ರ ದೇಸಾಯಿ ಅವರು `ದೇಸಾಯಿ ಎಲೆಕ್ಟ್ರಾನಿಕ್ಸ್’ ಎಂಬ ಕಂಪನಿ ನಡೆಸುತ್ತಿದ್ದಾರೆ. ಇದರೊಂದಿಗೆ ದಕ್ಷಿಣ ಭಾರತದಲ್ಲಿ ಪ್ರಥಮ ಇಂಟರ್ನೆಟ್ ಕ್ಷೇತ್ರದ ಉದ್ಯಮಿ ಎಂಬ ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ. ತಾಯಿ ಹೆಸರಿನಲ್ಲಿ `ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್’ ಸ್ಥಾಪಿಸಿದ ನರೇಂದ್ರ ದೇಸಾಯಿ ಅವರು ಕಳೆದ ಎರಡು ದಶಕಗಳಿಂದ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದಾರೆ. ಇದರೊಂದಿಗೆ ಬಹುಮಹಡಿ ಕಟ್ಟಡಗಳನ್ನು ಅವರು ನಿರ್ಮಿಸಿತ್ತಾರೆ.
ವಿಕಲಚೇತನರು, ಅನಾರೋಗ್ಯಕ್ಕೆ ಒಳಗಾದವರು ಸೇರಿ ಅನೇಕರಿಗೆ ಅವರು ಆರ್ಥಿಕ ಸಹಾಯ ಮಾಡಿದ್ದಾರೆ. ಧಾರ್ಮಿಕ ಚಿಂತನೆಯನ್ನು ಹೊಂದಿರುವ ಅವರು 12 ಗುಂಟೆ ಕ್ಷೇತ್ರವನ್ನು ದೇವಾಲಯಕ್ಕೆ ದಾನವಾಗಿ ನೀಡಿದ್ದಾರೆ. ಇದರೊಂದಿಗೆ ಕಾರವಾರ ನಗರದಲ್ಲಿ ಬೀದಿ ದೀಪ ಅಳವಡಿಕೆ, ಅಂಗವಿಕಲರ ಸ್ವ ಉದ್ಯೋಗಕ್ಕೆ ನೆರವು, ಶಾಲಾ-ಕಾಲೇಜುಗಳಿಗೆ ಪರಿಕ್ಕರಗಳ ವಿತರಣೆಯನ್ನು ಮಾಡುತ್ತಿದ್ದಾರೆ. ಅವರ ಈ ಎಲ್ಲಾ ಸೇವೆ ಗುರುತಿಸಿ ಕರ್ನಾಟಕ ಸಂಘದವರು ಗೌರವಿಸಿದರು.





