ಭಟ್ಕಳ: ಶಿರಾಲಿ ಗ್ರಾಮ ಲೆಕ್ಕಾಧಿಕಾರಿ ಹೇಮಾ ನಾಯ್ಕ ಅವರಿಗೆ ಲಾರಿ ಗುದ್ದಿದೆ. ಲಾರಿ ಗುದ್ದಿದ ಪರಿಣಾಮ ರಸ್ತೆ ಮೇಲೆ ಬಿದ್ದ ಅವರ ಕಾಲು, ಕುತ್ತಿಗೆ ಬೆನ್ನಿಗೆ ಪೆಟ್ಟಾಗಿದೆ.
ಮಾರುಕೇರಿ ಕೊಟಖಂಡ ಬಳಿಯ ಹೇಮ ನಾಯ್ಕ (38) ಅವರು ಜನವರಿ 3ರಂದು ತಮ್ಮ ಸ್ಕೂಟಿ ಮೇಲೆ ಭಟ್ಕಳದಿಂದ ಶಿರಾಲಿ ಕಡೆ ಚಲಿಸುತ್ತಿದ್ದರು. ಇದೇ ಮಾರ್ಗದಲ್ಲಿ ಶಿರಕುಳಿಹೊಂಡದ ಆರ್ಶದ್ ಹುಸೇನ್ ಟಿಪ್ಪರ್ ಚಲಾಯಿಸಿಕೊಂಡು ಬಂದಿದ್ದು, ಮುರಿನಕಟ್ಟಾ ಹತ್ತಿರ ಟಿಪ್ಪರ್’ನ್ನು ಏಕಾಏಕಿ ಯೂ ಟರ್ನ ಮಾಡಿದರು.
ಟಿಪ್ಪರ್ ತಿರುಗಿಸುವ ವೇಳೆ ಆರ್ಶದ್ ಹುಸೇನ್ ಯಾವುದೇ ಸಿಗ್ನಲ್ ನೀಡಲಿಲ್ಲ. ರಭಸವಾಗಿ ಟಿಪ್ಪರ್ ತಿರುಗಿಸಿದ್ದರಿಂದ ಆ ವಾಹನ ಹಿಂದಿನಿAದ ಬರುತ್ತಿದ್ದ ಹೇಮಾ ನಾಯ್ಕ ಅವರ ಸ್ಕೂಟಿಗೆ ಡಿಕ್ಕಿಯಾಯಿತು. ಡಿಕ್ಕಿಯ ರಭಸಕ್ಕೆ ಸ್ಕೂಟಿ ಜೊತೆ ಹೇಮಾ ನಾಯ್ಕ ಅವರು ಸಹ ರಸ್ತೆ ಮೇಲೆ ಬಿದ್ದರು. ಇದರಿಂದ ಅವರು ಗಾಯ ಮಾಡಿಕೊಂಡರು.
ಈ ಅಪಘಾತಕ್ಕೆ ಕಾರಣನಾದ ಟಿಪ್ಪರ್ ಚಾಲಕನ ವಿರುದ್ಧ ಗ್ರಾಮ ಸಹಾಯಕ ಮಂಜುನಾಥ ನಾಯ್ಕ ಪೊಲೀಸ್ ದೂರು ನೀಡಿ, ಪ್ರಕರಣ ದಾಖಲಿಸಿದ್ದಾರೆ.




