ಶಿರಸಿ: `ಅರಣ್ಯಾಧಿಕಾರಿಗಳ ದೌರ್ಜನ್ಯದ ಕುರಿತಾದ ದೂರುಗಳ ಸಮಗ್ರ ವಿಚಾರಣೆ ನಡೆಸುವುದರ ಜೊತೆ ಹೊಸ ಅತಿಕ್ರಮಣವನ್ನು ನಿಯಂತ್ರಿಸಲಾಗುತ್ತದೆ’ ಎಂದು ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹೇಳಿದ್ದಾರೆ.
ಗುರುವಾರ ಶಿರಸಿಯ ಗಾನಿಗ ಕಲ್ಯಾಣ ಮಂಟಪದಲ್ಲಿ `ಅರಣ್ಯ ಅಧಿಕಾರಿಗಳೊಂದಿಗೆ ಅರಣ್ಯವಾಸಿಗಳ ಸಭೆ’ಯಲ್ಲಿ ಮಾತನಾಡಿದ ಅವರು `ಅರಣ್ಯ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ ಪ್ರಕರಣವನ್ನು ಗಮನಕ್ಕೆ ತಂದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಹೇಳಿದರು. `27 ಎಪ್ರಿಲ್ 1978ರ ಪೂರ್ವ ಜಿಲ್ಲೆಯಲ್ಲಿ 2449 ಪ್ರಕರಣಗಳಲ್ಲಿ 1900ರಷ್ಟು ಹೆಕ್ಟರ ಪ್ರದೇಶ ಅರಣ್ಯೇತರ ಚಟುವಟಿಕೆಗೆ ಬಿಡುಗಡೆ ಮಾಡಲು ಪ್ರಕ್ರಿಯೆ ಜರುಗುತ್ತಿದೆ’ ಎಂದು ತಿಳಿಸಿದರು.
`ಕಾಯ್ದೆಗೆ ವಿರುದ್ಧವಾಗಿ ಅರಣ್ಯ ಸಿಬ್ಬಂದಿ ಅರಣ್ಯವಾಸಿಗಳ ಮೇಲೆ ದೌರ್ಜನ್ಯ ನಡೆಸಿದರೆ ಕಠಿಣ ಕ್ರಮ ಅನಿವಾರ್ಯ’ ಎಂದು ಅರಣ್ಯ ಸಿಬ್ಬಂದಿಗೂ ಎಚ್ಚರಿಕೆ ನೀಡಿದರು. `ಅರಣ್ಯ ಸಿಬ್ಬಂದಿ ಬಳಿ ಸೌಜನ್ಯದಿಂದ ವರ್ತಿಸುವಂತೆ ತಿಳಿಸಬೇಕು’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಒತ್ತಾಯಿಸಿದರು.
ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಕ್ತ ಚರ್ಚೆಗೆ ಅವಕಾಶ ನಿರಾಕರಿಸಿದಾಗ ಆಕ್ರೋಶವ್ಯಕ್ತವಾಯಿತು. ಅರಣ್ಯವಾಸಿಗಳ ಕ್ಷಮ-ಕ್ಷಮ ಮುಕ್ತವಾಗಿ ಚರ್ಚಿಸಬೇಕು ಮತ್ತು ಅರಣ್ಯವಾಸಿಗಳ ಸಮಸ್ಯೆಗಳಿಗೆ ಸೂಕ್ತ ಉತ್ತರಿಸಬೇಕು ಎಂದು ಅತಿಕ್ರಮಣದಾರರು ಪಟ್ಟು ಹಿಡಿದರು.
ಡಿಎಫ್ಓ ಅಜ್ಜಯ್ಯ, ಡಿವೈಎಸ್ಪಿ ಗಣೇಶ ಕೆ ಎಲ್, ಎಸಿಎಫ್ ಎಸ್ ಎಸ್ ನಿಂಗಾಣಿ, ಎಸಿಎಫ್ ಹರೀಶ ಜಾನ್ಮನೆ, ಎಸಿಎಫ ಲೋಕೇಶ ಹೊನ್ನಾವರ, ಸಿಪಿಐ ಸೀತರಾಮ, ಆರ್ಎಫ್ಓ ಶಿವಾನಂದ ನಿಂಗಾಣಿ, ಪಿಎಸ್ಐ ರತ್ನಾ ಉಪಸ್ಥಿತರಿದ್ದರು.
ಹೋರಾಟಗಾರರ ವೇದಿಕೆ ಪರವಾಗಿ ರಮಾನಂದ ನಾಯ್ಕ ಅಚವೆ ಅಂಕೋಲಾ, ಇಬ್ರಾಹಿಂ ಗೌಡಳ್ಳಿ, ಮಂಜುನಾಥ ಮರಾಠಿ ಕುಮಟ, ಭೀಮಶಿ ವಾಲ್ಮಿಕೀ ಯಲ್ಲಾಪುರ, ಶಿವಾನಂದ ಜೋಗಿ ಮುಂಡಗೋಡ, ಮಹೇಶ ನಾಯ್ಕ ಸಾಲ್ಕೋಡ, ಕಿರಣ ಮರಾಠಿ, ನೆಹರು ನಾಯ್ಕ, ಶಂಕರ ಕೊಡಿಯಾ ಉಪಸ್ಥಿತರಿದ್ದರು.





