6
  • Latest

ವಿದೇಶಕ್ಕೆ ಹಾರಿದ ಶಾಸಕ.. ಸ್ಥಳಕ್ಕೆ ದೌಡಾಯಿಸಿದ ಸಂಸದ: ರಾಜಕೀಯೇತರ ಹೋರಾಟಕ್ಕೆ ರಾಜಕಾರಣಿಗಳ ಪ್ರವೇಶ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ವಿದೇಶಕ್ಕೆ ಹಾರಿದ ಶಾಸಕ.. ಸ್ಥಳಕ್ಕೆ ದೌಡಾಯಿಸಿದ ಸಂಸದ: ರಾಜಕೀಯೇತರ ಹೋರಾಟಕ್ಕೆ ರಾಜಕಾರಣಿಗಳ ಪ್ರವೇಶ!

AchyutKumar by AchyutKumar
in ರಾಜಕೀಯ

ಶಿರಸಿ: ಹೈಟೆಕ್ ಆಸ್ಪತ್ರೆ ವಿಚಾರವಾಗಿ ಹೋರಾಟ ನಡೆಸುತ್ತಿರುವ ಅನಂತಮೂರ್ತಿ ಹೆಗಡೆ ಅವರಿಗೆ ಘಟಾನುಘಟಿಗಳ ಬೆಂಬಲ ಸಿಕ್ಕಿದೆ. ಉಪವಾಸನಿರತ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ `ಆಸ್ಪತ್ರೆ ವಿಷಯವಾಗಿ ನಡೆಯುವ ಎಲ್ಲಾ ಹೋರಾಟದಲ್ಲಿಯೂ ನಾನು ಭಾಗಿಯಾಗುವೆ’ ಎಂದು ಘೋಷಿಸಿದರು. `ಸಮಾಜಕ್ಕೆ ಒಳಿತು ಮಾಡುವ ಎಲ್ಲಾ ಹೋರಾಟಗಳಿಗೆ ಬಿಜೆಪಿ ಬೆನ್ನೆಲುಬಾಗಿರುತ್ತದೆ’ ಎಂದು ಅವರು ಪುನರುಚ್ಚರಿಸಿದರು.

ADVERTISEMENT

ಸೋಮವಾರ ಬೆಳಗ್ಗೆ 9 ಗಂಟೆಯಿoದ ಮಧ್ಯಾಹ್ನ 3ಗಂಟೆಯವರೆಗೆ ಅನಂತಮೂರ್ತಿ ಹೆಗಡೆ ತಹಶೀಲ್ದಾರ್ ಕಚೇರಿ ಎದುರು ಉಪವಾಸ ಕೂತಿದ್ದರು. `ಶಿರಸಿಯಲ್ಲಿ ಹೈಟೆಕ್ ಆಸ್ಪತ್ರೆ ಪೂರ್ಣವಾಗುವವರೆಗೂ ಹೋರಾಟ ನಿರಂತರ’ ಎಂದು ಅನಂತಮೂರ್ತಿ ಹೆಗಡೆ ಘೋಷಿಸಿದರು. ಶಾಸಕರು ಊರಿನಲ್ಲಿಲ್ಲದ ಬಗ್ಗೆ ಅಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿಸಿದ್ದು, ಅವರು ಬಂದ ನಂತರ ಮತ್ತೆ ಹೋರಾಟ ಮುಂದುವರೆಸುವ ಬಗ್ಗೆ ಧರಣಿ ನಿರತರು ನಿರ್ಧರಿಸಿದರು.

ನಾನು ಮಾಡಿದ್ದು… ನಾನೇ ಮಾಡಿದ್ದು!
`ನಾನು ಸಭಾಧ್ಯಕ್ಷನಾಗಿದ್ದಾಗ ಇಲ್ಲಿ 250 ಹಾಸಿಗೆ ಹೈಟೆಕ್ ಆಸ್ಪತ್ರೆ ಮಂಜೂರಿ ಮಾಡಿಸಿದ್ದೆ. ಅಗತ್ಯವಿರುವ 185 ಕೋಟಿ ರೂ ಅನುದಾನ ಮಂಜೂರಿ ಮಾಡಿಸಿದ್ದು, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂಮಿ ಪೂಜೆ ಮಾಡಿದ್ದರು. ಆ ವೇಳೆ ವೇಗವಾಗಿ ನಡೆಯುತ್ತಿದ್ದ ಕೆಲಸ ಇದೀಗ ಕಾಂಗ್ರೆಸ್ ಸರ್ಕಾರದ ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದ ನಿಧಾನವಾಗಿದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ದೂರಿದರು.

Advertisement. Scroll to continue reading.

`ಅನೇಕ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಆಸ್ಪತ್ರೆ ವಿಷಯದಲ್ಲಿಯೂ ದೊಡ್ಡ ಅನ್ಯಾಯವಾಗಿದೆ. ನಮ್ಮ ಜಿಲ್ಲೆಯ ಕರಾವಳಿ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ಆಗಬೇಕಿದ್ದು, ಅದಕ್ಕಾಗಿಯೂ ನಾವೆಲ್ಲರೂ ಪ್ರಯತ್ನಿಸೋಣ’ ಎಂದು ಕಾಗೇರಿ ಹೇಳಿದರು. ಬಿಜೆಪಿ ಪ್ರಮುಖರಾದ ರೂಪಾಲಿ ನಾಯ್ಕ, ಹರಿಪ್ರಕಾಶ ಕೋಣೆಮನೆ, ಎನ್ ಎಸ್ ಹೆಗಡೆ ಕರ್ಕಿ, ಶಿವಾನಂದ ನಾಯ್ಕ, ವಿವೇಕಾನಂದ ವೈದ್ಯ, ಎಸ್ ಎಲ್ ಘೋಟ್ನೇಕರ್, ಪ್ರಸಾದ ಹೆಗಡೆ, ಆನಂದ ಸಾಲೇರ್, ತಿಮ್ಮಪ್ಪ ಮಡಿವಾಳ, ಜಿ ಐ.ಹೆಗಡೆ, ಗೋಪಾಲಕೃಷ್ಣ ವೈದ್ಯ ಇತರರು ಪ್ರತಿಭಟನೆಗೆ ಬೆಂಬಲ ನೀಡಿದರು.

Advertisement. Scroll to continue reading.

ವಿದೇಶಕ್ಕೆ ಹಾರಿದ ಶಾಸಕ
ನಟ ಶಿವರಾಜಕುಮಾರ್ ಅವರ ಅನಾರೋಗ್ಯದ ಹಿನ್ನಲೆ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವರಾಜಕುಮಾರ ಅವರ ಸಂಬAಧಿಯಾದ ಭೀಮಣ್ಣ ನಾಯ್ಕ ಅವರು ಮೂರು ದಿನದ ಹಿಂದೆ ವಿದೇಶಕ್ಕೆ ಹೋಗಿದ್ದಾರೆ. ಅದಾಗಿಯೂ `ಹೈಟೆಕ್ ವಿಚಾರದಲ್ಲಿ ಕ್ಷೇತ್ರದ ಶಾಸಕರು ಸತ್ಯ ಹೇಳಬೇಕು. ಮೌನವಾಗಿರುವುದು ಶೋಭೆಯಲ್ಲ’ ಎಂದು ಅನಂತಮೂರ್ತಿ ಹೆಗಡೆ ಹೇಳಿದರು. `ಶಾಸಕರು ಕ್ಷೇತ್ರದಲ್ಲಿರದ ಕಾರಣ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ಮುಂದೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಧರಣಿ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

Previous Post

ರಾಜಕೀಯ ನಾಯಕರ ಚದುರಂಗದ ಆಟ: ಶಾಸಕ-ಅಧ್ಯಕ್ಷರ ನಡುವೆ ಹಣಾಹಣಿ!

Next Post

ಕಾಸಿಗೆ ಕೈ ಒಡ್ಡಿದವರಿಗೆ ಉಚಿತ ಊಟ!

Next Post

ಕಾಸಿಗೆ ಕೈ ಒಡ್ಡಿದವರಿಗೆ ಉಚಿತ ಊಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ