ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ `ಶಿವಯೋಗಿ ಸಿದ್ದರಾಮೇಶ್ವರ ಜಯಂತಿ’ಯನ್ನು ಬೋವಿ ಮುಖಂಡರು ಪಟ್ಟು ಹಿಡಿದು ಗ್ರಾಮೀಣ ಭಾಗದಲ್ಲಿ ಆಚರಣೆ ಮಾಡಿದ್ದಾರೆ. ನೂರಾರು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸವನ್ನು ಆಹ್ವಾದಿಸಿದ್ದಾರೆ. ಆ ಮೂಲಕ ಶಿವಯೋಗಿ ಸಿದ್ದರಾಮೇಶ್ವರ ಅವರ ತತ್ವ-ಸಿದ್ದಾಂತಗಳ ಪ್ರಚಾರ ನಡೆದಿದೆ.
2013ರಿಂದ ಸರ್ಕಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸುತ್ತಿದೆ. ಪ್ರತಿ ವರ್ಷ ತಹಶೀಲ್ದಾರ್ ಕಚೇರಿಯಲ್ಲಿ ಕೆಲವೇ ಕೆಲವು ನಾಯಕರು ಹಾಗೂ ಅಧಿಕಾರಿಗಳು ಭಾಗವಹಿಸಿ ಈ ಜಯಂತಿ ಆಚರಿಸುತ್ತಿದ್ದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. `ನಮ್ಮ ಸಮುದಾಯದ ಗುರುವಿನ ಜಯಂತಿಯನ್ನು ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸಬೇಕು’ ಎಂದು ಬೋವಿ ಸಮಾಜದ ಮುಖಂಡರಾದ ಪಕೀರಪ್ಪ ಭೋವಿವಡ್ಡರ, ನಾಗರಾಜ ಬೋವಿವಡ್ಡರ್ ಹಾಗೂ ತಿಮ್ಮಣ್ಣ ಬೋವಿವಡ್ಡರ್ ಒತ್ತಾಯಿಸಿದ್ದರು. ಅಧಿಕಾರಿಗಳ ಮನವೊಲೈಸಿ ಸೋಮವಾರ ಮಂಚಿಕೇರಿಯ ಸಮಾಜ ಮಂದಿರದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಿದರು.
`ಶಿವಯೋಗಿ ಸಿದ್ದರಾಮೇಶ್ವರ ಅವರು ಬೋವಿ ಸಮಾಜದ ಗುರುಗಳಾಗಿದ್ದು, ಕೆರೆ ಕಟ್ಟೆಗಳ ನಿರ್ಮಾಣದಲ್ಲಿ ಅವರ ಕೊಡುಗೆ ಅಪಾರ’ ಎಂದು ಉಪನ್ಯಾಸಕ ವಿನೋದ ಭಟ್ಟ ಅವರು ತಿಳಿಸಿದರು. ಶಾಸಕ ಶಿವರಾಮ ಹೆಬ್ಬಾರ್ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿದರು. ತಹಶೀಲ್ದಾರ್ ಯಲ್ಲಪ್ಪ ಗೋಣೇನವರ್, ಕಂಪ್ಲಿ ಗ್ರಾ ಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್, ಪಕೀರಪ್ಪ ಭೋವಿವಡ್ಡರ, ಶಿವಾನಂದ್ ಭೋವಿವಡ್ಡರ, ದ್ಯಾಮಣ್ಣ ಭೋವಿವಡ್ಡರ, ತಿಮ್ಮಣ್ಣ ಭೋವಿವಡ್ಡರ, ಮಾರುತಿ ಭೋವಿವಡ್ಡರ, ನಾಗರಾಜ ಭೋವಿವಡ್ಡರ ಇತರರು ಇದ್ದರು.





