ಕೊಟ್ಟಿಗೆಯಲ್ಲಿ ಕಟ್ಟಿದ್ದ ಏಳು ಜಾನುವಾರುಗಳಿಗೆ ಏಕಾಏಕಿ ಬೆಂಕಿ ತಗುಲಿದ್ದು, ಅವೆಲ್ಲವೂ ಅಲ್ಲಿಯೇ ಅಸುನೀಗಿವೆ.
ಸಿದ್ದಾಪುರದ ಚಂದ್ರಘಟಕಿಯಲ್ಲಿ ಮಹೇಶ ಹೆಗಡೆ ಎಂಬಾತರು ಹೈನುಗಾರಿಕೆ ನಡೆಸುತ್ತಿದ್ದರು. ಅವರ ಕೊಟ್ಟಿಯಲ್ಲಿ ಸೋಮವಾರ ವಿದ್ಯುತ್ ಅವಘಡ ನಡೆದಿದ್ದು, ಬೆಂಕಿ ಹೊತ್ತಿ ಉರಿದಿದೆ. ಅದರ ಪರಿಣಾಮ ಅಲ್ಲಿ ಕಟ್ಟಿದ್ದ ಜಾನುವಾರುಗಳ ಸಜೀವ ದಹನವಾಗಿದೆ.
ಅಂದಾಜು 3 ಲಕ್ಷ ರೂ ಮೌಲ್ಯದ ಜಾನುವಾರುಗಳು ಇದಾಗಿದ್ದು, ಕೊಟ್ಟಿಗೆ ಸಹ ಸುಟ್ಟು ಕರಕಲಾಗಿದೆ. ಕೊಟ್ಟಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ಹುಲ್ಲು, ಆ ಭಾಗದ ಸಿಸಿ ಕ್ಯಾಮರಾ ಎಲ್ಲವೂ ಸುಟ್ಟು ಬೂದಿಯಾಗಿದೆ. ತಹಶೀಲ್ದಾರ್ ಎಂ ಆರ್ ಕುಲಕರ್ಣಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




