`ಅಕ್ರಮ ರೆಸಾರ್ಟ ನಿರ್ಮಾಣದ ವಿರುದ್ಧ ಸಾಕಷ್ಟು ದೂರು ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ’ ಎಂದು ಕುಮಟಾದ ಈಶ್ವರ ಗೌಡ ದೂರಿದ್ದಾರೆ.
`ಕುಮಟಾ ತಾಲೂಕಿನ ನಾಡಮಾಸ್ಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತ ರೆಸಾರ್ಟ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅದಾಗಿಯೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದವರು ಆರೋಪಿಸಿದರು.
`ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಅನಧಿಕೃತವಾಗಿ ರೆಸಾರ್ಟ್ ನಿರ್ಮಾಣ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಮೀನುಗಾರರಿಗೆ ಇದರಿಂದ ತೊಂದರೆ ಆಗಿದೆ. ಈ ಬಗ್ಗೆ ಕಳೆದ ಸೆಪ್ಟೆಂಬರ್’ನಲ್ಲಿ ಜಿಲ್ಲಾಧಿಕಾರಿಗಳಿಗೆ ಗ್ರಾಮ ಪಂಚಾಯತ್ ಸದಸ್ಯರೆಲ್ಲ ಸೇರಿ ಮನವಿ ನೀಡಿದ್ದೇವೆ. ಜನವರಿಯಲ್ಲಿ ಕುಮಟಾ ಸಹಾಯ ಆಯಕ್ತರ ಗಮನಕ್ಕೂ ತರಲಾಗಿದೆ. ಆದರೂ, ಯಾರೂ ಕ್ರಮ ಜರುಗಿಸಲ್ಲ’ ಎಂದವರು ದೂರಿದರು.
`ಈ ರೆಸಾರ್ಟಗಳಿಗೆ ಗ್ರಾ ಪಂ ಅನುಮತಿ ಇಲ್ಲ. ಪ್ರವಾಸೋದ್ಯಮ ಇಲಾಖೆ ಪರವಾನಿಗೆಯೂ ಪಡೆದಿಲ್ಲ’ ಎಂದವರು ಉತ್ತರಿಸಿದರು. `ಈ ಭಾಗದಲ್ಲಿ 70ಕ್ಕೂ ಅಧಿಕ ರೆಸಾರ್ಟ ಅಕ್ರಮವಾಗಿದೆ. ನಾಲ್ಕು ರೆಸಾರ್ಟ ಮಾತ್ರ ಅಧಿಕೃತವಾಗಿದೆ’ ಎಂದವರು ಹೇಳಿದರು.




