ಮನೆಗೆ ಬೀಗ ಹಾಕಿ ಹೊರ ಹೋಗಿದ್ದ ಪಕೀರಪ್ಪ ಶ್ರೀಗಿರಿ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಮನೆಯಲ್ಲಿದ್ದ ಒಡವೆ ಹಾಗೂ ಹಣ ಕದ್ದು ಪರಾರಿಯಾಗಿದ್ದಾರೆ.
ಮುಂಡಗೋಡ ಗಣೇಶಪುರದ ಪಕೀರಪ್ಪ ಶ್ರೀಗಿರಿ ಅವರು ಜನವರಿ 7ರಂದು ಮನೆಗೆ ಬೀಗ ಹಾಕಿ ಹೋಗಿದ್ದರು. ಮರುದಿನ ಮನೆಗೆ ಮರಳಿದಾಗ 1.25 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿವೆ. ಇದರೊಂದಿಗೆ 25 ಸಾವಿರ ರೂ ಹಣವನ್ನು ಕಳ್ಳರು ದೋಚಿದ್ದಾರೆ.
ಮನೆ ಬೀಗ ಮುರಿದ ಕಳ್ಳರು ಬೆಡ್ ರೂಂ ಪ್ರವೇಶಿಸಿ ಅಲ್ಲಿನ ಟ್ರಜರಿಯಲ್ಲಿದ್ದ ಚಿನ್ನದ ಸರ, ಉಂಗುರವನ್ನು ಲಪಟಾಯಿಸಿದ್ದಾರೆ. ಮನೆಯಲ್ಲಿ ಕಳ್ಳತನವಾದ ಎಲ್ಲಾ ವಸ್ತುಗಳನ್ನು ಪರಿಶೀಲಿಸಿ, ಪಟ್ಟಿ ಮಾಡಿಕೊಂಡ ನಂತರ ಪಕೀರಪ್ಪ ಅವರು ಪೊಲೀಸ್ ದೂರು ನೀಡಿದ್ದಾರೆ.





