6
  • Latest

ಬೋಳು ಕಾಳಿಗೆ ಬಂಪರ್ ಬೆಲೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಬೋಳು ಕಾಳಿಗೆ ಬಂಪರ್ ಬೆಲೆ!

AchyutKumar by AchyutKumar
February 2, 2025
in ದೇಶ - ವಿದೇಶ
advt advt advt
ADVERTISEMENT

ಅಡುಗೆ, ಔಷಧ ಬಳಕೆಯ ಜೊತೆ ವಿದೇಶದಲ್ಲಿಯೂ ಬೇಡಿಕೆಯಿರುವ ಕಾಳು ಮೆಣಸಿಗೆ ಬಂಪರ್ ಬೆಲೆ ಬಂದಿದೆ. ಕೃಷಿ ಮಾರುಕಟ್ಟೆಯಲ್ಲಿ ಇದೀಗ ಕಾಳು ಮೆಣಸಿನ ಅಭಾವ ಎದುರಾಗಿದೆ. ಹೀಗಾಗಿ ಬೋಳು ಕಾಳು ಕ್ವಿಂಟಲಿಗೆ ಲಕ್ಷ ರೂ ಮೇಲ್ಪಟ್ಟು ಮಾರಾಟವಾಗಿದೆ!

ಕಳೆದ ಆರು ತಿಂಗಳಿನಿ0ದ ಕಾಳು ಮೆಣಸಿನ ದರ ಏರಿಕೆಯಾಗುತ್ತಿದ್ದು, ಒಮ್ಮೆ ಇಳಿಕೆ ಕಂಡಿತ್ತು. ಅದಾದ ನಂತರ ಹಂತ ಹಂತವಾಗಿ ಮಾರುಕಟ್ಟೆ ಚೇತರಿಸಿಕೊಳ್ಳಲಾರಂಭಿಸಿತು. ಪ್ರಸ್ತುತ ಕಪ್ಪು ಬಣ್ಣದ ಕಾಳು ಮೆಣಸು 65 ಸಾವಿರದ ಆಸುಪಾಸಿನಲ್ಲಿ ಮಾರಾಟವಾಗಿದೆ. ಶನಿವಾರ ಶಿರಸಿ ಟಿಎಸ್‌ಎಸ್ ಮಾರುಕಟ್ಟೆಯಲ್ಲಿ ಬಿಳಿ ಕಾಳು ಮೆಣಸು 105176ರೂ ದರದಲ್ಲಿ ಮಾರಾಟವಾಗಿದೆ. ಶುಕ್ರವಾರ 106099ರೂ ಕ್ವಿಂಟಾಲ್ ದರದಲ್ಲಿ ಬಿಳಿ ಕಾಳು ಮೆಣಸಿನ ಟೆಂಡರ್ ನಡೆದಿದೆ.

ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಜನ ಅಡಿಕೆ ಜೊತೆ ಕಾಳು ಮೆಣಸನ್ನು ಸಹ ಬೆಳೆಯುತ್ತಾರೆ. ಅಡಿಕೆ ಮರಕ್ಕೆ ಕಾಳು ಮೆಣಸು ಹಬ್ಬಿಸಿ ಉಪಆದಾಯ ಪಡೆಯುವವರ ಸಂಖ್ಯೆ ಹೆಚ್ಚಿದೆ. ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕಾಳು ಮೆಣಸು ಬೆಳೆಗಾರರಿದ್ದಾರೆ. ಕಪ್ಪು ಕಾಳು ಮೆಣಸಿಗಿಂತಲೂ ಬಿಳಿ ಕಾಳು ಮೆಣಸಿಗೆ ಮೊದಲಿನಿಂತಲೂ ದರ ವ್ಯತ್ಯಾಸವಿದ್ದು, ಮೊದಲೆಲ್ಲ 10 ಸಾವಿರದ ಆಸುಪಾಸು ವ್ಯತ್ಯಾಸವಿತ್ತು. ಆದರೆ, ಈ ಬಾರಿ ಕಪ್ಪು ಹಾಗೂ ಬಿಳಿ ಕಾಳು ಮೆಣಸಿನ ನಡುವೆ ಕ್ವಿಂಟಲ್’ಗೆ 40 ಸಾವಿರ ರೂ ವ್ಯತ್ಯಾಸವಾಗಿದೆ.

Advertisement. Scroll to continue reading.
Advertisement. Scroll to continue reading.

ಮೆಣಸಿನ ಬಳ್ಳಿಯಿಂದ ಕಾಳು ಬಿಡಿಸಿದ ನಂತರ ಫಸಲನ್ನು ನೀರಿನಲ್ಲಿ ಕೊಳೆಯಿಸಿ ಸಿಪ್ಪೆ ತೆಗೆಯುವುದು ಬಿಳಿ ಕಾಳು ಮೆಣಸು ಮಾಡುವ ಪದ್ಧತಿ. ಸಿಪ್ಪೆಸಹಿತ ಕಾಳು ಮೆಣಸು ಒಣಗಿದ ನಂತರ ಕಪ್ಪು ಬಣ್ಣ ಪಡೆಯಲಿದ್ದು, ಇಂದಿನ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅದಕ್ಕೆ ಸಹ ಉತ್ತಮ ದರವಿದೆ. ಅದಾಗಿಯೂ ಶ್ರಮಜೀವಿಗಳು ಬಿಳಿ ಕಾಳುಮೆಣಸು ಸಿದ್ಧಪಡಿಸಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಕೆಲಸದ ಒತ್ತಡ ಅಧಿಕವಿರುವುದರಿಂದ ಕಳೆದ ಕೆಲ ವರ್ಷಗಳಿಂದ ಕಾಳು ಮೆಣಸು ಬೆಳೆಗಾರರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಗೆ ಸಹ ಅಗತ್ಯವಿರುವ ಪ್ರಮಾಣದಲ್ಲಿ ಕಾಳು ಮೆಣಸು ಬರುತ್ತಿಲ್ಲ. ಏಳೆಂಟು ವರ್ಷಗಳಿಂದ ಕಾಳು ಮೆಣಸು ಮಾರಾಟ ಮಾಡದೇ ದಾಸ್ತಾನು ಮಾಡಿಕೊಂಡವರು ಇದೀಗ ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ.

ShareSendTweetShare
ADVERTISEMENT
Previous Post

ಡಿವೈಡರ್’ಗೆ ಬಡಿದ ಸ್ಕೂಟಿ: ಕಾಲುವೆಗೆ ಬಿದ್ದು ಸಾವನಪ್ಪಿದ ಹೆಸ್ಕಾಂ ಸಿಬ್ಬಂದಿ!

Next Post

ನಿರ್ಮಲಾ ಬಜೆಟ್ ಜನಪರ: ನಾಗರಿಕನ ಸಂತಸ

Next Post

ನಿರ್ಮಲಾ ಬಜೆಟ್ ಜನಪರ: ನಾಗರಿಕನ ಸಂತಸ

ನಗರ ಅರಣ್ಯ ಅತಿಕ್ರಮಣದಾರರಿಗೆ ಮರದ ಬುಡವೇ ಆಸರೆ!

ಚಾಲಕನಿಲ್ಲದೇ ಚಲಾಯಿಸಿದ ಮಿನಿ ಬಸ್ಸು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.