6
  • Latest

ಬೋಳು ಕಾಳಿಗೆ ಬಂಪರ್ ಬೆಲೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಬೋಳು ಕಾಳಿಗೆ ಬಂಪರ್ ಬೆಲೆ!

AchyutKumar by AchyutKumar
in ದೇಶ - ವಿದೇಶ

ಅಡುಗೆ, ಔಷಧ ಬಳಕೆಯ ಜೊತೆ ವಿದೇಶದಲ್ಲಿಯೂ ಬೇಡಿಕೆಯಿರುವ ಕಾಳು ಮೆಣಸಿಗೆ ಬಂಪರ್ ಬೆಲೆ ಬಂದಿದೆ. ಕೃಷಿ ಮಾರುಕಟ್ಟೆಯಲ್ಲಿ ಇದೀಗ ಕಾಳು ಮೆಣಸಿನ ಅಭಾವ ಎದುರಾಗಿದೆ. ಹೀಗಾಗಿ ಬೋಳು ಕಾಳು ಕ್ವಿಂಟಲಿಗೆ ಲಕ್ಷ ರೂ ಮೇಲ್ಪಟ್ಟು ಮಾರಾಟವಾಗಿದೆ!

ADVERTISEMENT

ಕಳೆದ ಆರು ತಿಂಗಳಿನಿ0ದ ಕಾಳು ಮೆಣಸಿನ ದರ ಏರಿಕೆಯಾಗುತ್ತಿದ್ದು, ಒಮ್ಮೆ ಇಳಿಕೆ ಕಂಡಿತ್ತು. ಅದಾದ ನಂತರ ಹಂತ ಹಂತವಾಗಿ ಮಾರುಕಟ್ಟೆ ಚೇತರಿಸಿಕೊಳ್ಳಲಾರಂಭಿಸಿತು. ಪ್ರಸ್ತುತ ಕಪ್ಪು ಬಣ್ಣದ ಕಾಳು ಮೆಣಸು 65 ಸಾವಿರದ ಆಸುಪಾಸಿನಲ್ಲಿ ಮಾರಾಟವಾಗಿದೆ. ಶನಿವಾರ ಶಿರಸಿ ಟಿಎಸ್‌ಎಸ್ ಮಾರುಕಟ್ಟೆಯಲ್ಲಿ ಬಿಳಿ ಕಾಳು ಮೆಣಸು 105176ರೂ ದರದಲ್ಲಿ ಮಾರಾಟವಾಗಿದೆ. ಶುಕ್ರವಾರ 106099ರೂ ಕ್ವಿಂಟಾಲ್ ದರದಲ್ಲಿ ಬಿಳಿ ಕಾಳು ಮೆಣಸಿನ ಟೆಂಡರ್ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಜನ ಅಡಿಕೆ ಜೊತೆ ಕಾಳು ಮೆಣಸನ್ನು ಸಹ ಬೆಳೆಯುತ್ತಾರೆ. ಅಡಿಕೆ ಮರಕ್ಕೆ ಕಾಳು ಮೆಣಸು ಹಬ್ಬಿಸಿ ಉಪಆದಾಯ ಪಡೆಯುವವರ ಸಂಖ್ಯೆ ಹೆಚ್ಚಿದೆ. ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕಾಳು ಮೆಣಸು ಬೆಳೆಗಾರರಿದ್ದಾರೆ. ಕಪ್ಪು ಕಾಳು ಮೆಣಸಿಗಿಂತಲೂ ಬಿಳಿ ಕಾಳು ಮೆಣಸಿಗೆ ಮೊದಲಿನಿಂತಲೂ ದರ ವ್ಯತ್ಯಾಸವಿದ್ದು, ಮೊದಲೆಲ್ಲ 10 ಸಾವಿರದ ಆಸುಪಾಸು ವ್ಯತ್ಯಾಸವಿತ್ತು. ಆದರೆ, ಈ ಬಾರಿ ಕಪ್ಪು ಹಾಗೂ ಬಿಳಿ ಕಾಳು ಮೆಣಸಿನ ನಡುವೆ ಕ್ವಿಂಟಲ್’ಗೆ 40 ಸಾವಿರ ರೂ ವ್ಯತ್ಯಾಸವಾಗಿದೆ.

Advertisement. Scroll to continue reading.

ಮೆಣಸಿನ ಬಳ್ಳಿಯಿಂದ ಕಾಳು ಬಿಡಿಸಿದ ನಂತರ ಫಸಲನ್ನು ನೀರಿನಲ್ಲಿ ಕೊಳೆಯಿಸಿ ಸಿಪ್ಪೆ ತೆಗೆಯುವುದು ಬಿಳಿ ಕಾಳು ಮೆಣಸು ಮಾಡುವ ಪದ್ಧತಿ. ಸಿಪ್ಪೆಸಹಿತ ಕಾಳು ಮೆಣಸು ಒಣಗಿದ ನಂತರ ಕಪ್ಪು ಬಣ್ಣ ಪಡೆಯಲಿದ್ದು, ಇಂದಿನ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅದಕ್ಕೆ ಸಹ ಉತ್ತಮ ದರವಿದೆ. ಅದಾಗಿಯೂ ಶ್ರಮಜೀವಿಗಳು ಬಿಳಿ ಕಾಳುಮೆಣಸು ಸಿದ್ಧಪಡಿಸಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

Advertisement. Scroll to continue reading.

ಕೆಲಸದ ಒತ್ತಡ ಅಧಿಕವಿರುವುದರಿಂದ ಕಳೆದ ಕೆಲ ವರ್ಷಗಳಿಂದ ಕಾಳು ಮೆಣಸು ಬೆಳೆಗಾರರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಗೆ ಸಹ ಅಗತ್ಯವಿರುವ ಪ್ರಮಾಣದಲ್ಲಿ ಕಾಳು ಮೆಣಸು ಬರುತ್ತಿಲ್ಲ. ಏಳೆಂಟು ವರ್ಷಗಳಿಂದ ಕಾಳು ಮೆಣಸು ಮಾರಾಟ ಮಾಡದೇ ದಾಸ್ತಾನು ಮಾಡಿಕೊಂಡವರು ಇದೀಗ ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ.

Previous Post

ಡಿವೈಡರ್’ಗೆ ಬಡಿದ ಸ್ಕೂಟಿ: ಕಾಲುವೆಗೆ ಬಿದ್ದು ಸಾವನಪ್ಪಿದ ಹೆಸ್ಕಾಂ ಸಿಬ್ಬಂದಿ!

Next Post

ನಿರ್ಮಲಾ ಬಜೆಟ್ ಜನಪರ: ನಾಗರಿಕನ ಸಂತಸ

Next Post

ನಿರ್ಮಲಾ ಬಜೆಟ್ ಜನಪರ: ನಾಗರಿಕನ ಸಂತಸ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ