ಹೋಲ್ಸೆಲ್ ವ್ಯಾಪಾರದಿಂದ ಉತ್ತಮ ಆದಾಯವಿದ್ದರೂ ಹೆಚ್ಚಿನ ಕಾಸು ಸಂಪಾದಿಸುವ ಆಸೆಗೆ ಬಿದ್ದು ಮಟ್ಕಾ ಆಡಿಸುತ್ತಿದ್ದ ಪ್ರಶಾಂತ ಆಚಾರಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಶಿರಸಿ ಗಣೇಶ ನಗರದ ಪ್ರಶಾಂತ ಆಚಾರಿ ಅಲ್ಲಿನ ಹೈಸ್ಕೂಲ್ ಹತ್ತಿರ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಶಿರಸಿ ಚರ್ಚರಸ್ತೆಯ ಕಮ್ಯುನಿಟಿ ಹಾಲಿನ ಬಳಿ ಅವರು ಮಟ್ಕಾ ಆಡಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.
ಫೆಬ್ರವರಿ 1ರಂದು ರಾತ್ರಿ ಅವರು ಜನರನ್ನು ಒಟ್ಟುಗೂಡಿಸಿ ಆಮೀಷ ಒಡ್ಡುತ್ತಿದ್ದರು. `ಮಟ್ಕಾ ಆಡಿ ಹಣ ಗೆಲ್ಲಿ’ ಎಂದು ಪ್ರಚಾರ ನಡೆಸಿ ಜನರಿಂದ ಹಣ ಸಂಗ್ರಹಿಸಿದ್ದರು. ಹೀಗೆ ಅಕ್ರಮವಾಗಿ ಸಂಗ್ರಹಿಸಿದ 1190ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.




