6
  • Latest

ಭೂ ಕುಸಿತ | ಕಲ್ಬಂಡೆ ಸದ್ದಿಗೆ ಬೆಚ್ಚಿಬಿದ್ದ ಕೊಡ್ಲಗದ್ದೆ ಜನ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಭೂ ಕುಸಿತ | ಕಲ್ಬಂಡೆ ಸದ್ದಿಗೆ ಬೆಚ್ಚಿಬಿದ್ದ ಕೊಡ್ಲಗದ್ದೆ ಜನ!

AchyutKumar by AchyutKumar
in ಸ್ಥಳೀಯ

ಶತ ಶತಮಾನಗಳಿಂದ ಒಂದಕ್ಕೊoದು ಅಂಟಿಕೊoಡಿದ್ದ ಭಾರೀ ಪ್ರಮಾಣದ ಕಲ್ಬಂಡೆಗಳು ಬುಧವಾರ ಬೆಳಗ್ಗೆ ದಿಢೀರ್ ಆಗಿ ನೆಲಕ್ಕೆ ಉರುಳಿದೆ. ದೊಡ್ಡ ದೊಡ್ಡ ಗಾತ್ರದ ಐದಾರು ಬಂಡೆಗಳು ಉರುಳಿ ಬಿದ್ದ ಸದ್ದಿಗೆ ಕೊಡ್ಲಗದ್ದೆ ಊರು ಬೆಚ್ಚಿಬಿದ್ದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ-ಯಲ್ಲಾಪುರದ ಗಡಿಭಾಗ ಕೊಡ್ಲಗದ್ದೆ. 20 ಕುಟುಂಬದವರ ಸಾಮೂಹಿಕ ಸೊಪ್ಪಿನ ಬೆಟ್ಟ ಪ್ರದೇಶದಲ್ಲಿ ಹಿಂದಿನಿoದಲೂ ಕಲ್ಪಂಡೆಗಳಿದ್ದವು. ಈ ಪೈಕಿ ಐದಾರು ಬಂಡೆಗಳು ಬುಧವಾರ ಬೆಳಗ್ಗೆ 9 ಗಂಟೆಗೆ ಅಂದಾಜು 50 ಅಡಿ ಎತ್ತರದಿಂದ ಅವು ನೆಲಕ್ಕುರುಳಿದವು. ಇನ್ನೂ ಒಂದು ಎಕರೆ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಒಂಟಿ ಬಂಡೆಯಿದ್ದು, ಅದು ಸಹ ಉರುಳಿ ಬೀಳುವ ಆತಂಕ ಎದುರಾಗಿದೆ.

ಬಂಡೆಗಳು ಉರುಳಿ ಬಿದ್ದಿದ್ದರಿಂದ ಸರಾಗವಾಗಿ ಹರಿಯುತ್ತಿದ್ದ ನೀರಿನ ಕಾಲುವೆ ಮುಚ್ಚಿ ಹೋಗಿದೆ. ಹೀಗಾಗಿ ವಿಶ್ವನಾಥ ಹೆಬ್ಬಾರ್ ಅವರ ತೋಟಕ್ಕೆ ನೀರು ಹೋಗುತ್ತಿಲ್ಲ. ಬಂಡೆ ಬಿದ್ದ ಪ್ರದೇಶದಲ್ಲಿಯೇ ಕಾಲುವೆ ನೀರು ಉಕ್ಕಿ ಹರಿಯುತ್ತಿದ್ದು, ವಿಶ್ವೇಶ್ವರ ಸುಬ್ರಾಯ ಗಾಂವ್ಕರ್ ಜೋಗಿಮನೆ ಅವರ ತೋಟ ಜಲಾವೃತವಾಗುತ್ತಿದೆ. ಭಾರೀ ಪ್ರಮಾಣದ ಕಲ್ಲಿನ ಬಂಡೆಗಳು ವಿಶ್ವೇಶ್ವರ ಸುಬ್ರಾಯ ಗಾಂವ್ಕರ್ ಅವರ ಮಾಲ್ಕಿ ಭೂಮಿಯಲ್ಲಿ ಬಿದ್ದಿದ್ದರಿಂದ ಅಡಿಕೆ-ತೆಂಗಿನ ಮರಗಳಿಗೂ ಅಲ್ಪ ಪ್ರಮಾಣದ ಹಾನಿಯಾಗಿದೆ.

ಮೊದಲ ಬಾರಿ ಬಂಡೆ ನೆಲಕ್ಕೆ ಉರುಳಿದ ಮುಕ್ಕಾಲು ತಾಸಿನ ನಂತರ ಮತ್ತೊಂದು ಬೃಹತ್ ಬಂಡೆ ತೋಟದ ಕಡೆ ಬಂದು ಬಿದ್ದಿದೆ. ಹಂತ ಹಂತವಾಗಿ ಬಂಡೆಗಳು ನೆಲಕ್ಕೆ ಉರುಳುತ್ತಿರುವುದರಿಂದ ಜನರ ಆತಂಕ ಹೆಚ್ಚಾಗಿದೆ. ಅಲ್ಲಿ ಎಲ್ಲಿಯೂ ದೊಡ್ಡ ಯಂತ್ರಗಳು ಕೆಲಸ ಮಾಡುತ್ತಿಲ್ಲ. ಭೂ ಕಂಪನದ ಅನುಭವ ಸಹ ಆಗಿಲ್ಲ. ಏಕಾಏಕಿ ಬಂಡೆಗಳು ಉರುಳಿ ಬಿದ್ದಿರುವುದು ಊರಿನವರ ಅಚ್ಚರಿಗೆ ಕಾರಣವಾಗಿದೆ.

ಇನ್ನೂ, ಮಂಗಳವಾರ ಸಂಜೆ 5 ಗಂಟೆಯವರೆಗೂ ಕಾರ್ಮಿಕರು ಇದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಗ್ಗೆ ಕಾರ್ಮಿಕರು ಕೆಲಸಕ್ಕೆ ತೆರಳುವ ಪೂರ್ವದಲ್ಲಿ ಬಂಡೆಗಳು ಅಪ್ಪಳಿಸಿದ್ದರಿಂದ ಭಾರೀ ಪ್ರಮಾಣದ ಅನಾಹುತ ತಪ್ಪಿದೆ. ಬಂಡೆಗಳು ಉರುಳಿ ಬಿದ್ದಿರುವ ಫೋಟೋ-ಮಾಹಿತಿಯನ್ನು ಅಲ್ಲಿನವರು ಕಂದಾಯ ಇಲಾಖೆಗೆ ಕಳುಹಿಸಿದ್ದಾರೆ.

ಆದರೆ, ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದ ಹಿನ್ನಲೆ ಕಂದಾಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಅರಣ್ಯ ಇಲಾಖೆಯ ಕೆಳ ಹಂತದ ನೌಕರರು ಆಗಮಿಸಿ ಫೋಟೋ ಪಡೆದು ಹೋಗಿದ್ದಾರೆ. ನೆಲಕ್ಕೆ ಅಪ್ಪಳಿಸಿದ ಬಂಡೆಗಳನ್ನು ತೆರವು ಮಾಡಿ, ಅನಾಹುತ ನಡೆಯದಂತೆ ಮುನ್ನಚ್ಚರಿಕೆವಹಿಸಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.

ShareSendTweetShare
Previous Post

ಸುಕ್ರಿ ಗೌಡರ ಆರೋಗ್ಯದಲ್ಲಿ ಏರುಪೇರು: ಶಾಸಕ ಸತೀಶ್ ಸೈಲ್ ಚಿಕಿತ್ಸೆಗೆ ನೆರವು

Next Post

ನಿವೃತ್ತಿಗೆ ಮೂರು ತಿಂಗಳ ಮೊದಲು ಸಿಕ್ಕಿಬಿದ್ದ: ಈ ಶಿಕ್ಷಕ ಅತಿ ದೊಡ್ಡ ಕಾಮುಕ!

Next Post

ನಿವೃತ್ತಿಗೆ ಮೂರು ತಿಂಗಳ ಮೊದಲು ಸಿಕ್ಕಿಬಿದ್ದ: ಈ ಶಿಕ್ಷಕ ಅತಿ ದೊಡ್ಡ ಕಾಮುಕ!

ಬೆಟ್ಟಕ್ಕೆ ಹೋಗುವಾಗ ಹುಷಾರು: ಈ ರೋಗ ಬಂದರೆ ಔಷಧಿಯೇ ಇಲ್ಲ!

ಶರಾವತಿ ಸೇತುವೆಗೆ ಮತ್ತೊಂದು ಬಲಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.