6
  • Latest

ಬೆಟ್ಟಕ್ಕೆ ಹೋಗುವಾಗ ಹುಷಾರು: ಈ ರೋಗ ಬಂದರೆ ಔಷಧಿಯೇ ಇಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಬೆಟ್ಟಕ್ಕೆ ಹೋಗುವಾಗ ಹುಷಾರು: ಈ ರೋಗ ಬಂದರೆ ಔಷಧಿಯೇ ಇಲ್ಲ!

AchyutKumar by AchyutKumar
February 12, 2025
in ರಾಜ್ಯ
advt advt advt
ADVERTISEMENT

ತಲೆ ನೋವು, ಸೊಂಟ ನೋವು, ವಿಪರೀತ ಜ್ವರದ ಜೊತೆ ನಿಶಕ್ತಿ, ರಕ್ತಸ್ರಾವಕ್ಕೂ ಕಾರಣವಾಗಬಲ್ಲ ಮಂಗನ ಕಾಯಿಲೆಗೆ ಈವರೆಗೂ ಔಷಧ ತಯಾರಾಗಿಲ್ಲ. ಈ ಹಿನ್ನಲೆ ಬೆಟ್ಟದ ಉಣ್ಣೆಗಳಿಂದ ಹರಡುವ ಈ ರೋಗದ ಬಗ್ಗೆ ಮುನ್ನಚ್ಚರಿಕೆವಹಿಸುವುದು ಮಾತ್ರ ಮದ್ದು!

`ಶಿವಮೊಗ್ಗ ಜಿಲ್ಲೆಯ ಸೊರಬದ ಕ್ಯಾಸನೂರು ಬಳಿ 1956ರಲ್ಲಿ ಮಂಗನ ಕಾಯಿಲೆ ಮೊದಲು ಕಾಣಿಸಿಕೊಂಡಿತು. ಕಾಡಿನಲ್ಲಿ ಮಂಗಗಳು ಸಾವನಪ್ಪುವುದು ಈ ರೋಗ ಹರಡುವಿಕೆಯ ಮೊದಲ ಮುನ್ಸೂಚನೆ. ಪ್ಲಾವಿ ವೈರಸ್ ಎಂಬ ವೈರಾಣು ಹೊಂದಿದ ಉಣ್ಣೆಗಳು ಕಚ್ಚುವುದರಿಂದ ಈ ರೋಗ ಮನುಷ್ಯನಿಗೆ ಬರುತ್ತದೆ. ಹೀಗಾಗಿ ಉಣ್ಣೆ ಕಚ್ಚಿಸಿಕೊಳ್ಳುವುದರಿಂದ ರಕ್ಷಣೆ ಪಡೆಯುವುದು ಉತ್ತಮ’ ಎಂದು ಯಲ್ಲಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ ನರೇಂದ್ರ ಪವಾರ್ ಹೇಳಿದ್ದಾರೆ.

ADVERTISEMENT
ADVERTISEMENT

ಯಲ್ಲಾಪುರ ತಹಶೀಲ್ದಾರ್ ಯಲ್ಲಪ್ಪ ಗೋಣನನ್ನವರ್ ಅಧ್ಯಕ್ಷತೆಯಲ್ಲಿ ಖಾಸಗಿ ವೈದ್ಯರ ಕಾರ್ಯಾಗಾರ ನಡೆದಿದ್ದು, ಈ ವೇಳೆ ಆರೋಗ್ಯ ಸಿಬ್ಬಂದಿಗೆ ಡಾ ನರೇಂದ್ರ ಪವಾರ್ ಅವರು ಅರಿವು ಮೂಡಿಸಿದರು. `ಮಂಗನ ಕಾಯಿಲೆ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ’ ಎಂದವರು ಸ್ಪಷ್ಟಪಡಿಸಿದರು. `ಮಂಗನ ಕಾಯಿಲೆಗೆ ಒಳಗಾದವರಿಗೆ ಸತತ 8-10 ದಿನದವರೆಗೆ ನಿರಂತರ ಜ್ವರವಿರುತ್ತದೆ. ಜ್ವರ ಬಂದ ಎರಡು ವಾರದ ನಂತರ ಮುಗು, ಬಾಯಿ ಹಾಗೂ ಗುದದ್ವಾರದಿಂದ ರಕ್ತಸ್ರಾವದ ಸಾಧ್ಯತೆಗಳಿವೆ. ಕೈಕಾಲು ನೋವು, ನಿಶಕ್ತತೆ, ಕಣ್ಣು ಕೆಂಪಾಗುವುದು ಸಾಮಾನ್ಯ’ ಎಂದವರು ವಿವರಿಸಿದರು.

Advertisement. Scroll to continue reading.
Advertisement. Scroll to continue reading.

`ಕಾಡಿಗೆ ಹೋಗುವ ಮುನ್ನ ಡೇಪೋ ತೈಲವನ್ನು ಕೈ-ಕಾಲುಗಳಿಗೆ ಲೇಪಿಸಿಕೊಳ್ಳಬೇಕು. ಮೈ ತುಂಬ ಬಟ್ಟೆ ಧರಿಸಿ ಸಂಚರಿಸಬೇಕು. ಕಾಡಿನಿಂದ ಮರಳಿದ ನಂತರ ಸೋಪು ಬಳಸಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಬಟ್ಟೆಗಳನ್ನು ಸಹ ಬಿಸಿ ನೀರಿನಿಂದ ತೊಳೆಯಬೇಕು. ಮನೆ ಸುತ್ತಲಿನ ಪ್ರದೇಶ ಸ್ವಚ್ಛವಾಗಿರಿಸಿಕೊಳ್ಳುವುದರ ಜೊತೆ ಮಂಗ ಸಾವನಪ್ಪಿರುವುದು ಗೊತ್ತಾದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು’ ಎಂದು ಅವರು ಮುನ್ನಚ್ಚರಿಕಾ ವಿಧಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದರು.

`ಮಂಗನ ಕಾಯಿಲೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹರಡುತ್ತದೆ. ಹೀಗಾಗಿ ಇಂಥ ನಿರ್ಧಿಷ್ಟ ಸ್ಥಳದಲ್ಲಿಯೇ ಕಾಯಿಲೆ ಬಂದಿದೆ ಎಂದು ಹೇಳುವುದು ಕಷ್ಟ. ಈ ಕಾಯಿಲೆಗೆ ನಿರ್ದಿಷ್ಟವಾದ ಔಷಧಿ ಸಹ ಇಲ್ಲ. ಹೀಗಾಗಿ ಜನ ಮುನ್ನಚ್ಚರಿಕೆವಹಿಸುವುದರ ಜೊತೆ ಆರೋಗ್ಯ ಇಲಾಖೆ ಹಾಗೂ ಆಶಾ ಸಿಬ್ಬಂದಿ ಜೊತೆಯೂ ಜನ ನಿರಂತರ ಸಂಪರ್ಕದಲ್ಲಿರಬೇಕು’ ಎಂದವರು ಕರೆ ನೀಡಿದರು.

ShareSendTweetShare
ADVERTISEMENT
Previous Post

ನಿವೃತ್ತಿಗೆ ಮೂರು ತಿಂಗಳ ಮೊದಲು ಸಿಕ್ಕಿಬಿದ್ದ: ಈ ಶಿಕ್ಷಕ ಅತಿ ದೊಡ್ಡ ಕಾಮುಕ!

Next Post

ಶರಾವತಿ ಸೇತುವೆಗೆ ಮತ್ತೊಂದು ಬಲಿ!

Next Post

ಶರಾವತಿ ಸೇತುವೆಗೆ ಮತ್ತೊಂದು ಬಲಿ!

ನೇಣಿಗೆ ಶರಣಾದ ಹೆಸ್ಕಾಂ ಸಿಬ್ಬಂದಿ: ಕಾರಣ ಇನ್ನೂ ನಿಗೂಢ!

ಹೆಬ್ಬರಳಿಗೆ ಕಚ್ಚಿದ ಹಾವು: ಮೂರು ಆಸ್ಪತ್ರೆ ಸುತ್ತಾಡಿದರೂ ಬದುಕದ ರೈತ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.