ಕೆಲವೇ ದಿನಗಳಲ್ಲಿ ನಿವೃತ್ತರಾಗುತ್ತಿದ್ದ ಹೆಸ್ಕಾಂ ಸಿಬ್ಬಂದಿ ಬಾಬು ನಾಯ್ಕ (59) ನೇಣಿಗೆ ಶರಣಾಗಿದ್ದಾರೆ. ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.
ಅಂಕೋಲಾ ತಾಲೂಕಿನ ಬಾವಿಕೇರಿಯವರಾಗಿದ್ದ ಬಾಬು ನಾಯ್ಕ ಅವರು ಗೋಕರ್ಣ – ಬರ್ಗಿ ವ್ಯಾಪ್ತಿಯಲ್ಲಿ ಲೈನ್ಮೆನ್ ಆಗಿದ್ದರು. ವಿದ್ಯುತ್ ಸಮಸ್ಯೆಗಳಿಗೆ ಅವರು ಸದಾ ಸ್ಪಂದಿಸುತ್ತಿದ್ದರು. ಫೆ 11ರಂದು ಅವರು ನೇಣಿಗೆ ಶರಣಾಗಿದ್ದಾರೆ.
ಕುರಿಗದ್ದೆ ಅರಣ್ಯ ಪ್ರದೇಶಕ್ಕೆ ತೆರಳಿದ ಅವರು ಅಲ್ಲಿನ ಕಾಡು ಗಿಡಕ್ಕೆ ಕುಣಿಕೆ ಹಾಕಿಕೊಂಡು ಸಾವನಪ್ಪಿದ್ದಾರೆ. ವೈಯಕ್ತಿಕ ಕಾರಣದಿಂದ ಅವರು ಆತ್ಮಹತ್ಯೆಯ ಹಾದಿ ತುಳಿದ ಬಗ್ಗೆ ಅವರ ಸಂಬAಧಿ ರವಿ ನಾಯ್ಕ ಪೊಲೀಸರಿಗೆ ವರದಿ ಒಪ್ಪಿಸಿದರು. ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




