ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರಿಗೆ ಹಾವು ಕಚ್ಚಿದೆ. ಮೂರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿದರೂ ಅವರು ಬದುಕಲಿಲ್ಲ.
ಹಳಿಯಾಳ ತಾಲೂಕಿನ ಮುರ್ಕವಾಡದಲ್ಲಿನ ಶಿವಾಜಿ ದವಳಿ (64) ಫೆ 11ರಂದು ಗದ್ದೆ ಕೆಲಸ ಮಾಡುತ್ತಿದ್ದರು. ಅಲ್ಲಿ ಕಂಟೆ ಕಡಿಯುತ್ತಿರುವಾಗ ಅವರ ಕೈಗೆ ಪುಟ್ಟದೊಂದು ಹಾವು ಕಚ್ಚಿತು. ಬಲಗೈ ಹೆಬ್ಬರಳಿನಿಂದ ರಕ್ತ ಬರಲು ಶುರುವಾಯಿತು.
ತಕ್ಷಣ ಅವರನ್ನು ಅಲ್ಲಿದ್ದವರು ಮುರ್ಕವಾಡ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದರು. ಮುಂದೆ ಅಲ್ಲಿಂದ ಹಳಿಯಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರ ಶಿಫಾರಸ್ಸಿನ ಮೇರೆಗೆ ಧಾರವಾಡ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತು. ಆದರೆ, ಧಾರವಾಡ ಆಸ್ಪತ್ರೆ ವೈದ್ಯರು ಶಿವಾಜಿ ದವಳಿ ಅವರ ಸಾವಿನ ಘೋಷಣೆ ಮಾಡಿದರು.
ಧಾರವಾಡ ಆಸ್ಪತ್ರೆಯ ಶವಾಗಾರದಲ್ಲಿ ಶಿವಾಜಿ ದವಳಿ ಅವರ ಶವವಿದ್ದು, ಸಂಬAಧಿ ಶಾಂತರಾಮ ಕರ್ಲಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ಪ್ರಕರಣ ದಾಖಲಾದ ನಂತರ ಆಸ್ಪತ್ರೆಯವರು ಶವ ಬಿಟ್ಟುಕೊಟ್ಟರು.




