ಶ್ರೀಕ್ಷೇತ್ರ ಉಳುವಿಯಲ್ಲಿ ಜಾತ್ರೆ ಶುರುವಾಗಿದೆ. ಸಾವಿರಾರು ಸಂಖ್ಯೆಯ ಎತ್ತಿನಗಾಡಿಗಳು ಉಳವಿ ಕಡೆ ಬರುತ್ತಿದೆ. ಸರಾಯಿ ಸೇವಿಸಿದ ಎರಡು ಎತ್ತುಗಳು ಉಳವಿಯಲ್ಲಿ ಸಾವನಪ್ಪಿದೆ.
ಉಳುವಿ ಜಾತ್ರೆಗೆ ಚಕ್ಕಡಿ ಗಾಡಿ ಹೊಡೆದುಕೊಂಡು ಬಂದ ವ್ಯಕ್ತಿಯೊಬ್ಬ ಎತ್ತು ಜೋರಾಗಿ ಚಲಿಸುತ್ತಿಲ್ಲ ಎಂಬ ಕಾರಣಕ್ಕೆ ಅವುಗಳಿಗೆ ವಿದ್ಯುತ್ ಶಾಕ್ ನೀಡಿ ವಿಕೃತಿ ಮೆರೆದಿದ್ದಾನೆ. ಅದಾದ ನಂತರ ಎರಡು ಎತ್ತುಗಳಿಗೆ ವಿಪರೀತ ಸರಾಯಿ ಕುಡಿಸಿ ಚಿತ್ರಹಿಂಸೆ ನೀಡಿದ್ದಾನೆ. ಅದರ ಪರಿಣಾಮ ಜಾತ್ರೆಗೆ ಬಂದ ಎತ್ತುಗಳೆರಡು ಅಲ್ಲಿಯೇ ಸಾವನಪ್ಪಿದೆ.
ಇನ್ನೂ ಉಳವಿ-ಪೋಟೋಲಿ ರಸ್ತೆ ಮೂಲಕ ಚಕ್ಕಡಿ ಗಾಡಿಗಳು ಬರುತ್ತಿವೆ. ಇಲ್ಲಿನ ಸಂಚರ ದಟ್ಟಣೆ ಅಧಿಕವಾಗಿದೆ. ಚಕ್ಕಡಿ ಗಾಡಿಗಳ ಅವಾಂತರಕ್ಕೆ ಸಿಲುಕಿ ಕೆಲ ಬೈಕ್ ಹಾಗೂ ಕಾರುಗಳು ಜಖಂ ಆಗಿದೆ. ಇದರಿಂದಾಗಿ ಚಕ್ಕಡಿ ಗಾಡಿ ಹಾಗೂ ವಾಹನ ಮಾಲಕರ ಜೊತೆ ಆಗಾಗ ವಾಗ್ವಾದಗಳು ನಡೆಯುತ್ತಿದೆ.
ಚಕ್ಕಡಿ ಗಾಡಿಗಳನ್ನು ಬಸವಣ್ಣನ ಭಕ್ತಿಗೆಂದು ತರಲಾಗುತ್ತದೆ. ಆದರೆ, ಎತ್ತುಗಳಿಗೆ ಚಿತ್ರ ಹಿಂಸೆ ನೀಡುವುದು ಮಾತ್ರ ನಿಂತಿಲ್ಲ. ಬಾರಕೋಲಿನಿಂದ ಅತಿಯಾಗಿ ಹೊಡೆಯುವುದು, ಎತ್ತುಗಳಿಗೆ ಆಹಾರ ನೀಡದಿರುವುದು ಸಾಮಾನ್ಯವಾಗಿ ಕಾಣಿಸುತ್ತಿದೆ.




