6
  • Latest

ಸೈನಿಕರನ್ನು ಕೆಣಕಿದ ಶಿರಸಿ ನಗರಸಭೆ: ಅಧಿಕಾರಿಗಳ ತಪ್ಪಿಗೆ ಕ್ಷಮೆ ಯಾಚಿಸಿದ ಅಧ್ಯಕ್ಷೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸೈನಿಕರನ್ನು ಕೆಣಕಿದ ಶಿರಸಿ ನಗರಸಭೆ: ಅಧಿಕಾರಿಗಳ ತಪ್ಪಿಗೆ ಕ್ಷಮೆ ಯಾಚಿಸಿದ ಅಧ್ಯಕ್ಷೆ!

AchyutKumar by AchyutKumar
February 12, 2025
in ಸ್ಥಳೀಯ
advt advt advt
ADVERTISEMENT

ಮಾಜಿ ಸೈನಿಕರ ಕಚೇರಿ ನಡೆಸಲು ನೀಡಲಾಗಿದ್ದ ಕೊಠಡಿಯ ಬೀಗ ಒಡೆಯುವ ಮೂಲಕ ನಗರಸಭೆ ಅಧಿಕಾರಿಗಳು ಉದ್ದಟತನ ಪ್ರದರ್ಶಿಸಿದ್ದಾರೆ. ಈ ವಿಷಯ ಅರಿವಿಗೆ ಬಂದ ನಂತರ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಬಹಿರಂಗವಾಗಿ ಕ್ಷಮಾಪಣೆ ಕೇಳುವ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ.

ಗಣಪತಿ ನಾಯ್ಕ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಗರಸಭೆಯಿಂದ ಮಾಜಿ ಸೈನಿಕರಿಗಾಗಿ ಕೊಠಡಿ ನೀಡಿದ್ದರು. ಸೈನಿಕರು ದೇಶಕ್ಕೆ ಸಲ್ಲಿಸಿದ ಸೇವೆ ಸ್ಮರಿಸಿ ಅವರಿಗೆ ಕಚೇರಿ ನಡೆಸಲು ಗೌರವಾರ್ಥವಾಗಿ ಕೊಠಡಿ ನೀಡಲಾಗಿತ್ತು. ಎರಡು ವರ್ಷಗಳಿಂದ ಶಾಸಕರ ಮಾದರಿ ಶಾಲೆಯ ಬಳಿಯ ಶೌಚಾಲಯದ ಸನೀಹ ಚಿಕ್ಕ ಕೋಣೆಯಲ್ಲಿ ಮಾಜಿ ಸೈನಿಕರ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ, ಇದನ್ನು ಸಹಿಸದ ನಗರಸಭೆ ಅಧಿಕಾರಿಗಳು ಮಂಗಳವಾರ ಮಾಜಿ ಸೈನಿಕರ ಗಮನಕ್ಕೆ ತಾರದೇ ಆ ಕೊಠಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಈ ಕಚೇರಿಯನ್ನು ನಗರಸಭೆಯವರು ತಾತ್ಕಾಲಿಕವಾಗಿಯೇ ಮಾಜಿ ಸೈನಿಕರಿಗೆ ನೀಡಿದ್ದರು. ಯಾವುದೇ ಹೆಚ್ಚುವರಿ ಷರತ್ತು ಸಹ ವಿಧಿಸಿರಲಿಲ್ಲ. ಹೀಗಾಗಿ ಸೈನಿಕರು ತಮ್ಮ ಕಚೇರಿ ಕಡತಗಳ ಜೊತೆ ಕೆಲ ದಾಖಲೆಗಳನ್ನು ಇರಿಸಿಕೊಂಡಿದ್ದರು. ಆದರೆ, ನಗರಸಭೆಯವರು ಮಾಜಿ ಸೈನಿಕರಿಗೆ ಗೊತ್ತಾಗದಂತೆ ಅಲ್ಲಿಗೆ ತೆರಳಿ ಆ ಕಚೇರಿಯ ಬೀಗ ಒಡೆದರು. ಪ್ರಶ್ನಿಸಿದಾಗ `ಬೀಗದ ಖರ್ಚು ಕೊಡುತ್ತೇವೆ’ ಎಂದು ಹಾರಿಕೆ ಉತ್ತರ ನೀಡಿದರು.

`ನಗರಸಭೆಯವರೇ ಈ ಹಿಂದೆ ಗೌರವಯುತವಾಗಿ ಕೊಠಡಿ ಕೊಟ್ಟಿದ್ದರು. ಅದನ್ನು ಮರಳಿಸುವಂತೆ ಕೇಳಿದ್ದರೆ ಗೌರವಯುತವಾಗಿ ಮರಳಿಸುತ್ತಿದ್ದೇವು. ಮಾಜಿ ಸೈನಿಕರಿಗೆ ಅವಮಾನ ಮಾಡುವ ಉದ್ದೇಶದಿಂದ ಬೀಗ ಒಡೆಯಲಾಗಿದೆ’ ಎಂದು ಕೆಲವರು ಬೇಸರವ್ಯಕ್ತಪಡಿಸಿದರು. ಈ ವಿಷಯ ಅರಿವಿಗೆ ಬಂದ ನಂತರ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಪ್ರಕರಣವನ್ನು ವಿಚಾರಿಸಿದರು. ಅದಾದ ನಂತರ ಮಾಜಿ ಸೈನಿಕರಿಗೆ ನಗರಸಭೆಯಿಂದ ಆದ ಅವಮಾನಕ್ಕಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಿದರು. ಅಧಿಕಾರಿಗಳು ಮಾಡಿದ ತಪ್ಪಿಗೆ ಅಧ್ಯಕ್ಷೆ ಕ್ಷಮೆ ಕೋರುವ ಮೂಲಕ ಅವರು ದೊಡ್ಡವರೆನಿಸಿದರು.

ShareSendTweetShare
ADVERTISEMENT
Previous Post

ಸರಾಯಿ ಸೇವನೆ: ಜಾತ್ರೆಗೆ ಬಂದು ಮುಕ್ತಿಪಡೆದ ಜೋಡೆತ್ತು!

Next Post

ಅಪಘಾತ | ರೋಗಿ ಚಿಕಿತ್ಸೆಗೆ ಒಪ್ಪದ ದೊಡ್ಡ ಆಸ್ಪತ್ರೆ: ಗಾಯಾಳು ಸಾವು!

Next Post

ಅಪಘಾತ | ರೋಗಿ ಚಿಕಿತ್ಸೆಗೆ ಒಪ್ಪದ ದೊಡ್ಡ ಆಸ್ಪತ್ರೆ: ಗಾಯಾಳು ಸಾವು!

ಡಬ್ಬಾ ಡಾಬಾಗಳಲ್ಲಿ ಮದ್ಯ ಮಾರಾಟ: ಪದೇ ಪದೇ ಅಪಘಾತಕ್ಕೆ ಇದು ಕಾರಣ!

ಪಾರ್ವತಿ ಹೊಟೇಲಿನಲ್ಲಿ ನಶೆಯ ತೀರ್ಥ: ಡಬ್ಬಾ ಡಾಬಾ ಮೇಲೆ ಪೊಲೀಸರ ದಾಳಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.