6
  • Latest

ಅಕ್ರಮ ಮೀನು ಮಾರಾಟಕ್ಕೆ ಜನಪ್ರತಿನಿಧಿ ಬೆಂಬಲ: ಅಪರಾತಪರ ಪ್ರಶ್ನಿಸಿದವನಿಗೆ ಅಪಪ್ರಚಾರದ ಪ್ರಶಸ್ತಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಕ್ರಮ ಮೀನು ಮಾರಾಟಕ್ಕೆ ಜನಪ್ರತಿನಿಧಿ ಬೆಂಬಲ: ಅಪರಾತಪರ ಪ್ರಶ್ನಿಸಿದವನಿಗೆ ಅಪಪ್ರಚಾರದ ಪ್ರಶಸ್ತಿ!

AchyutKumar by AchyutKumar
February 13, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರದ ಬೀದಿ ಬೀದಿಗಳನ್ನು ಅತಿಕ್ರಮಿಸಿ ಮೀನು ಮಾರಾಟ ನಡೆಯುತ್ತಿದ್ದು, ಇದಕ್ಕೆ ಪ ಪಂ ಸದಸ್ಯ ಸತೀಶ ನಾಯ್ಕ ಹೆಸರು ತಳಕು ಹಾಕಿಕೊಂಡಿದೆ. ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ಅವರೇ ಪ ಪಂ ಸದಸ್ಯ ಸತೀಶ ನಾಯ್ಕ ಹೆಸರು ಹೇಳಿದ ಬಗ್ಗೆ `ವಿಜಯ ಕರ್ನಾಟಕ’ ವರದಿ ಪ್ರಕಟಿಸಿದ್ದು, `ಅಕ್ರಮ ಮೀನು ಮಾರಾಟಕ್ಕೆ ಹಾಗೂ ತನಗೆ ಯಾವುದೇ ಸಂಬoಧವಿಲ್ಲ’ ಎಂದು ಸತೀಶ ನಾಯ್ಕ ಹೇಳಿದ್ದಾರೆ.

ಫೆ 11ರಂದು ಯಲ್ಲಾಪುರ ಪಟ್ಟಣ ಪಂಚಾಯತ ಕಚೇರಿಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅಕ್ರಮ ಮೀನು ಮಾರಾಟದ ವಿರುದ್ಧ ಹಲವು ಸದಸ್ಯರು ಧ್ವನಿ ಎತ್ತಿದ್ದರು. ಮೀನು ಮಾರಾಟಕ್ಕೆ ತಡೆ ಒಡ್ಡದೇ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನಲೆ ಅಕ್ರಮ ಮೀನು ಮಾರಾಟಗಾರರನ್ನು ಪ ಪಂ ಅಧಿಕಾರಿಗಳು ಒಕ್ಕಲೆಬ್ಬಿಸಿ, ನಂತರ ಸಭೆ ನಡೆಸಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಈ ವೇಳೆ ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ `ಬೀದಿ ಬೀದಿಯಲ್ಲಿ ಮೀನು ಮಾರಾಟ ಮಾಡುವವರಿಗೆ ಜನಪ್ರತಿನಿಧಿಗಳ ಬೆಂಬಲವಿದೆ’ ಎಂಬ ಹೇಳಿಕೆ ನೀಡಿದ್ದರು. `ಯಾರ ಬೆಂಬಲವಿದೆ?’ ಎಂದು ಉಳಿದ ಸದಸ್ಯರು ಪ್ರಶ್ನಿಸಿದಾಗ `ಮಂಜುನಾಥ ನಗರ ಸದಸ್ಯ ಸತೀಶ ನಾಯ್ಕ ಅವರು ಮೀನು ಮಾರಾಟಗಾರರನ್ನು ಬೆಂಬಲಿಸುತ್ತಿದ್ದಾರೆ’ ಎಂದು ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ತಿಳಿಸಿದ ಬಗ್ಗೆ ವಿಜಯ ಕರ್ನಾಟಕ ಯಥಾವತ್ತು ವರದಿ ಪ್ರಕಟಿಸಿತ್ತು.

Advertisement. Scroll to continue reading.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ ನಾಯ್ಕ `ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದ ಕಾರಣ ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದೆ. ನಾನು ಸಭೆಯಲ್ಲಿ ಇಲ್ಲದಿರುವ ವೇಳೆ ನನ್ನ ಹೆಸರು ಬಳಸಿಕೊಂಡಿದ್ದಾರೆ. ದಾತ್ರಿನಗರದಲ್ಲಿ ಮೂಲಭೂತ ಸೌಕರ್ಯ ಒದಗಿಸದೇ ವಸತಿ ನಿವೇಶನ ಹಸ್ತಾಂತರ, ಬೇಕಾಬಿಟ್ಟಿಯಾಗಿ ನಮೂನೆ-3 ವಿತರಣೆ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ ಕಾರಣ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆದಿದೆ’ ಎಂದವರು ಹೇಳಿದ್ದಾರೆ. `ಯಾವುದೇ ಕಾರಣಕ್ಕೂ ಹೋರಾಟಗಳನ್ನು ಹಿಂಪಡೆಯುವುದಿಲ್ಲ. ಅಕ್ರಮ ಲೇಔಟ್ ಹಸ್ತಾಂತರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದು ನಿಶ್ಚಿತ’ ಎಂದವರು ಎಚ್ಚರಿಕೆ ನೀಡಿದ್ದಾರೆ.

ShareSendTweetShare
ADVERTISEMENT
Previous Post

ಪದ್ಮಶ್ರೀ ಸುಕ್ರಿ ಗೌಡ ಇನ್ನೂ ಪರಲೋಕವಾಸಿ!

Next Post

ಗ್ರಾಮ ಆಡಳಿತಾಧಿಕಾರಿ | ಹುದ್ದೆ ದೊಡ್ಡದು.. ಸೌಕರ್ಯ ಚಿಕ್ಕದು!

Next Post

ಗ್ರಾಮ ಆಡಳಿತಾಧಿಕಾರಿ | ಹುದ್ದೆ ದೊಡ್ಡದು.. ಸೌಕರ್ಯ ಚಿಕ್ಕದು!

ಅಕ್ರಮ ಬಯಲಿಗೆಳೆಯಲು ಹೋದವ ಅಮಾನತು!

Commercial port Police protection for the work company!

ವಾಣಿಜ್ಯ ಬಂದರು: ಕಾಮಗಾರಿ ಕಂಪನಿಗೆ ಪೊಲೀಸರ ಶ್ರೀರಕ್ಷೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.