ಹೊನ್ನಾವರದ ಗುಣವಂತೆ ಬಳಿ ಗುರುವಾರ ಮಧ್ಯಾಹ್ನ ಅಗ್ನಿ ದುರಂತವೊoದು ನಡೆದಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಗುಜುರಿ ಅಂಗಡಿ ಹೊತ್ತಿ ಉರಿದಿದೆ. ಇದರೊಂದಿಗೆ ಹೆದ್ದಾರಿ ಅಂಚಿನಲ್ಲಿ ನಿಂತಿದ್ದ ಲಾರಿಯೂ ಅಗ್ನಿಗೆ ಆಹುತಿಯಾಗಿದೆ.
ಕೆರೆಮನೆ ಬಳಿಯ ರಾಷ್ಟಿಯ ಹೆದ್ದಾರಿ 66ರ ಅಂಚಿನಲ್ಲಿ ಮೊದಲಿನಿಂದಲೂ ಗುಜುರಿ ಅಂಗಡಿಯಿದ್ದು, ಅಲ್ಲಿ ಕಬ್ಬಿಣ-ಪ್ಲಾಸ್ಟಿಕ್ ರಾಶಿ ಹಾಕಲಾಗಿತ್ತು. ವಿದ್ಯುತ್ ಅವಘಡದಿಂದಾಗಿ ಆ ಗುಜುರಿ ಅಂಗಡಿಗೆ ಬೆಂಕಿ ತಗುಲಿತು. ಕ್ಷಣಮಾತ್ರದಲ್ಲಿಯೇ ಅಂಗಡಿ ಪೂರ್ತಿಯಾಗಿ ಹೊತ್ತಿ ಉರಿಯಿತು. ಈ ವೇಳೆ ಅಂಗಡಿಯಲ್ಲಿ ಯಾರೂ ಇರಲಿಲ್ಲ.
ಗುಜುರಿ ಅಂಗಡಿಗೆ ತಾಗಿ ಲಾರಿಯೊಂದನ್ನು ನಿಲ್ಲಿಸಲಾಗಿದ್ದು, ಆ ಲಾರಿಗೂ ಬೆಂಕಿಯ ಜ್ವಾಲೆ ವ್ಯಾಪಿಸಿತು. ಪರಿಣಾಮ ಲಾರಿ ಸಹ ಬೆಂಕಿಯಿAದ ಹೊತ್ತಿ ಉರಿಯಲು ಶುರು ಮಾಡಿತು. ಈ ಮಾರ್ಗದ ಹೆದ್ದಾರಿಯಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತಿದ್ದವು. ದಟ್ಟ ಹೊಗೆಯನ್ನು ನೋಡಿದ ವಾಹನ ಸವಾರರು ಈ ಬಗ್ಗೆ ಅಗ್ನಿಶಾಮಕದಳಕ್ಕೆ ಫೋನ್ ಮಾಡಿದರು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
ದೊಡ್ಡ ಪ್ರಮಾಣದಲ್ಲಿ ಬೆಂಕಿ ಆವರಿಸಿದ ಪರಿಣಾಮ ಅಕ್ಕ-ಪಕ್ಕದ ಪ್ರದೇಶದಲ್ಲಿಯೂ ಬಿಸಿ ಗಾಳಿ ಬೀಸುತ್ತಿದೆ. ಭಟ್ಕಳ ಹಾಗೂ ಕುಮಟಾದಿಂದಲೂ ಅಗ್ನಿಶಾಮಕ ವಾಹನ ಕರೆಯಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆದ್ದಾರಿ ಪಕ್ಕ ಬೆಂಕಿ ಅನಾಹುತ ನಡೆದಿದ್ದರಿಂದ ಸಾಕಷ್ಟು ಮುನ್ನಚ್ಚರಿಕೆವಹಿಸಲಾಗಿದೆ. ಗ್ಯಾಸ್ ಟ್ಯಾಂಕರ್ ಸೇರಿ ಅಪಾಯಕಾರಿ ವಾಹನಗಳು ಸಮೀಪ ತೆರಳದಂತೆ ಎಚ್ಚರವಹಿಸಲಾಗಿದೆ.




