ಅಘನಾಶಿನಿ ಆರತಿ ಯಶಸ್ವಿಗೊಳಿಸಿದ ಕುಮಟಾದ ಯುವಾ ಬಿಗ್ರೆಡ್ ತಂಡದವರು ಗೋಕರ್ಣಕ್ಕೆ ತೆರಳಿ ಸಾಗರ ಆರತಿ ಕಾರ್ಯಕ್ರಮ ನಡೆಸಿದ್ದಾರೆ. ಬುಧವಾರ ರಾತ್ರಿ ಸಮುದ್ರ ತಡಿಯಲ್ಲಿ ನಡೆದ ದೀಪ ಆರಾಧನೆ ನೆರೆದಿದ್ದವರ ಗಮನಸೆಳೆಯಿತು.
ಮಹಾಬಲೇಶ್ವರ ದೇವಾಲಯದ ಶಿವರಾತ್ರಿ ಮಹೋತ್ಸವದ ಅಂಗವಗಿ ಮಹಾಶಿವರಾತ್ರಿ ದಿನ ಸಾಗರ ಆರತಿ ನಡೆಸಲಾಯಿತು. ದೇವಾಲಯದಲ್ಲಿನ ಪೂಜೆ ಬಳಿಕ ಅಲ್ಲಿ ಬೆಳಗಿದ ದೀಪವನ್ನು ಮುಖ್ಯ ಕಡಲತೀರಕ್ಕೆ ತರಲಾಯಿತು. ವಾದ್ಯಘೋಷಗಳೊಂದಿಗೆ ದೀಪ-ಆರತಿ ಸಮುದ್ರಕ್ಕೆ ಬಂದವು.
ಕಡಲತೀರದಲ್ಲಿರುವ ಶಂಕರಾಚಾರ್ಯರ ಮೂರ್ತಿಗೆ ವಂದಿಸಿದ ನಂತರ ಸಾಗರ ಆರತಿ ಕಾರ್ಯಕ್ರಮ ಶುರುವಾಯಿತು. ದೇವಾಲಯದ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷರೂ ಆದ ಕಾರವಾರ ಜಿಲ್ಲಾ ನ್ಯಾಯಾಲಯದ ನ್ಯಾಧೀಶರಾದ ವಿಜಯಕುಮಾರ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಮಟಾ ಯುವಾ ಬ್ರೀಗೇಡ್ ತಂಡದವರು ಪಷ್ಪಾರ್ಚನೆಯೊಂದಿಗೆ ಸಮುದ್ರ ರಾಜನಿಗೆ ಆಕರ್ಷಕ ಆರತಿ ಬೆಳಗಿ ವಂದಿಸಿದರು.
`ಪ್ಲಾಸ್ಟಿಕ್ ಸೇರಿ ಇನ್ನಿತರ ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯದೇ ಕಡಲನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಸಮುದ್ರವನ್ನು ಪೂಜನೀಯ ಭಾವನೆಯಿಂದ ನೋಡುವುದಕ್ಕಾಗಿ ಕಳೆದ ಮೂರು ವರ್ಷಗಳಿಮದ ಕಡಲ ಆರತಿ ನಡೆಯುತ್ತಿದೆ’ ಎಂದು ಯುವಾ ಬ್ರೀಗಡ್ನ ಅಣ್ಣಪ್ಪ ನಾಯ್ಕ ವಿವರಿಸಿದರು.




