ಆದರ್ಶ ಪೊಲೀಸ್ ಅಧಿಕಾರಿಗಳ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಶ್ರೀಧರ್ ಎಸ್ ಆರ್ ಅವರು ಮತ್ತೆ ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದಾರೆ.
ಸದ್ಯ ಕುಮಟಾ ವ್ಯಾಪ್ತಿಯ ಗೋಕರ್ಣ ಸಿಪಿಐ ಆಗಿ ಅವರು ನೇಮಕವಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಶ್ರೀಧರ ಅವರು ಸೇವೆ ಸಲ್ಲಿಸಿದ್ದಾರೆ. ಮಾನವೀಯ ವ್ಯಕ್ತಿತ್ವದ ಅವರು ಜನಸ್ನೇಹಿ ಪೊಲೀಸ್ ಆಗಿ ಗುರುತಿಸಿಕೊಂಡಿದ್ದಾರೆ.
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಅನುಭವ ಹೊಂದಿರುವ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿದ್ದರು. ಆ ವೇಳೆ ಗೋಕರ್ಣ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದರಿಂದ ಇಲ್ಲಿನ ಆಗು-ಹೋಗುಗಳ ಬಗ್ಗೆ ಶ್ರೀಧರ್ ಅವರಿಗೆ ಸ್ಪಷ್ಠ ಅರಿವಿದೆ. ಕರಾವಳಿ ಕಾವಲು ಪಡೆಯಲ್ಲಿಯೂ ಶ್ರೀಧರ್ ಅವರು ಕರ್ತವ್ಯ ನಿಭಾಯಿಸಿದ್ದರು.
ಅದಾದ ನಂತರ ಹಾವೇರಿ ಜಿಲ್ಲೆಗೆ ವರ್ಗವಾದ ಅವರು ತಮ್ಮದಲ್ಲದ ತಪ್ಪಿಗೆ ಅಮಾನತು ಆಗಿದ್ದರು. ನಂತರ ಅವರನ್ನು ಚಿಕ್ಕಮಗಳೂರು ಕಡೂರಿನ ಪೊಲೀಸ ತರಬೇತಿ ಶಾಲೆಗೆ ವರ್ಗಾಯಿಸಲಾಗಿತ್ತು. ಇದೀಗ ಅಲ್ಲಿಂದ ಅವರನ್ನು ಗೋಕರ್ಣ ಪೊಲೀಸ್ ಠಾಣೆಯ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.







