6
  • Latest
A small town saved by a big forest!

ದೊಡ್ಡ ಕಾಡು ರಕ್ಷಿಸಿದ ಸಣ್ಣ ಊರು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ದೊಡ್ಡ ಕಾಡು ರಕ್ಷಿಸಿದ ಸಣ್ಣ ಊರು!

AchyutKumar by AchyutKumar
in ಲೇಖನ
A small town saved by a big forest!

ನೂರಾರು ವರ್ಷಗಳಿಂದ ಆ ಊರಿನಲ್ಲಿ ಒಂದೇ ಒಂದು ಮರ ಕಳ್ಳತನ ನಡೆದಿಲ್ಲ. ಅರಣ್ಯ ಪ್ರದೇಶ ಅತಿಕ್ರಮಣವಾಗಿಲ್ಲ. ಹೀಗಾಗಿ ದಟ್ಟ ಕಾಡಿನ ಜೀವ ವೈವಿಧ್ಯಕ್ಕೆ ಈವರೆಗೂ ತೊಂದರೆ ಆಗಿಲ್ಲ!

ADVERTISEMENT

ಉತ್ತರ ಕನ್ನಡದ ಕುಮಟಾ ತಾಲೂಕಿನ ಹಳಕಾರ ಗ್ರಾಮ ನಾಡಿಗೆ ಮಾದರಿ. ಅಲ್ಲಿನ 219 ಎಕರೆ ಪ್ರದೇಶ ರಕ್ಷಣೆಗಾಗಿ ಊರಿನ ಜನ ಸಮಿತಿ ರಚಿಸಿಕೊಂಡು ಕಾವಲು ಕಾಯುತ್ತಾರೆ. ಕಾಡನ್ನು ದೇವರು ಎಂದು ಪೂಜಿಸುವ ಅಲ್ಲಿನವರು ಗಿಡ-ಮರಗಳಿಗೆ ಕಿಂಚಿತ್ತು ನೋವಾಗುವದನ್ನು ಸಹಿಸುವುದಿಲ್ಲ.

ಪ್ರಕೃತಿ ಸೇವೆ ಮಾಡುವುದು ಹಳಕಾರ ಗ್ರಾಮದವರಿಗೆ ಪರಂಪರಾಗತವಾಗಿ ಬಂದ ಸಂಪ್ರದಾಯ. ಹಿರಿಯರು ಹೇಳಿದ ದಾರಿಯಲ್ಲಿ ಈಗಿನ ತಲೆಮಾರಿನವರು ಜೀವಿಸುತ್ತಿದ್ದು, ಅವರಿಗೆ ವನ ದೇವಿಯ ಬಗ್ಗೆ ಅಪಾರ ನಂಬಿಕೆ. ಹೀಗಾಗಿ ಹಳಕಾರಿನ ಜನ ಶತಮಾನಗಳ ಹಿಂದಿನಿoದಲೂ ಕಾಡನ್ನು ದೇವರಂತೆ ಆರಾಧಿಸುತ್ತ ಬಂದಿದ್ದಾರೆ. ದಾಖಲೆಗಳ ಪ್ರಕಾರ 1920ರಿಂದ ಈ ಊರಿನಲ್ಲಿ ಒಂದೇ ಒಂದು ಅಡಿ ಅರಣ್ಯ ಭೂಮಿ ಸಹ ಅತಿಕ್ರಮಣವಾಗಿಲ್ಲ!

Advertisement. Scroll to continue reading.

ಹಳಕಾರ ಗ್ರಾಮ ಒಟ್ಟು 475 ಎಕರೆ ವಿಸ್ತೀರ್ಣವಿದೆ. ಅದರಲ್ಲಿ 219 ಎಕರೆ ದಟ್ಟ ಅರಣ್ಯ ಪ್ರದೇಶ. ಆ ಅರಣ್ಯವೇ ಊರಿನವರ ಉಸಿರು. ಹೀಗಾಗಿ ಒಂದೇ ಒಂದು ಗಿಡ-ಮರ, ಪ್ರಾಣಿ ಪಕ್ಷಿಗಳಿಗೆ ಸಹ ಅಲ್ಲಿನವರು ನೋವುಂಟು ಮಾಡುವುದಿಲ್ಲ. ಬೇರೆಯವರು ಕಾಡಿಗೆ ಪ್ರವೇಶಿಸಿ ಪರಿಸರ ಹಾಳು ಮಾಡಲು ಸಹ ಬಿಡುವುದಿಲ್ಲ. ಆ ಕಾಡಿನಿಂದ ಹಳಕಾರ ಊರಿನವರಿಗೆ ಆದಾಯವಿಲ್ಲ. ಅದಾಗಿಯೂ ಅಲ್ಲಿನವರಿಗೆ ಕಾಡಿನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ.

Advertisement. Scroll to continue reading.

ಸಂಪತ್ಬರಿತವಾದ ಸಸ್ಯಕಾಶಿ, ನೈಸರ್ಗಿಕವಾಗಿ ಬೆಳೆದ ಗಿಡ ಮೂಲೆಕೆಗಳು, ಯಥೇಚ್ಚವಾಗಿರುವ ಜೀವ ಸಂಕುಲ ಊರಿನ ಹಿರಿಮೆ ಹೆಚ್ಚಿಸಿದೆ. ಈ ಕಾರಣದಿಂದಲೇ ಆ ಊರು ದೇಶ-ವಿದೇಶಿಗರ ಗಮನ ಸೆಳೆಯುತ್ತಿದೆ. ಈ ಮೊದಲು ಒಟ್ಟು 265 ಏಕರೆ ಅರಣ್ಯ ಭೂಮಿ ಗ್ರಾಮದಲ್ಲಿತ್ತು. ಆ ಪೈಕಿ 46 ಏಕರೆ ಜಮೀನು ರೈಲು ಯೋಜನೆಗೆ ಹೋಯಿತು. ಹೀಗಾಗಿ, 219 ಎಕರೆ ಪ್ರದೇಶದಲ್ಲಿ ಅರಣ್ಯ ಉಳಿದಿದ್ದು, ಕಾಡಿನಲ್ಲಿನ ಒಣ ಎಲೆ ಸಂಗ್ರಹಕ್ಕೆ ಸಹ ಇಲ್ಲಿ ಊರಿನವರ ಒಪ್ಪಿಗೆ ಕಡ್ಡಾಯ.

ಹಳಕಾರ ಗ್ರಾಮದಲ್ಲಿ ರೈತರು, ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ಹೆಚ್ಚಿಗೆ ಓದಿದವರ ಸಂಖ್ಯೆ ಕಡಿಮೆಯಿದ್ದರೂ ಅಪಾರವಾದ ಕಾಡು ಜ್ಞಾನ ಹೊಂದಿದವರು ಎಲ್ಲಾ ಮನೆಯಲ್ಲಿಯೂ ಮಾತಿಗೆ ಸಿಗುತ್ತಾರೆ. ಪ್ರತಿ ವರ್ಷ ಊರಿನವರೆಲ್ಲ ಸೇರಿ ಇಲ್ಲಿನ 10 ಒಣ ಮರ ಕಟಾವು ಮಾಡುತ್ತಾರೆ. ಅದೇ ಜಾಗದ ಸುತ್ತ 100ಕ್ಕೂ ಅಧಿಕ ಗಿಡಗಳನ್ನು ನೆಡುತ್ತಾರೆ. `ಈ ಕಾಡು ನಮ್ಮದು. ಕಾಡಿನಲ್ಲಿರುವ ಗಿಡ-ಮರಗಳು ನಮ್ಮ ಮಕ್ಕಳು’ ಎಂದು ಊರಿನವರು ಭಾವಿಸಿದ್ದಾರೆ.

Previous Post

ಅಂದರ್ ಬಾಹರ್ | ದಿನವೂ ದುಡಿದು ತಿನ್ನುವ ಅವರಿಗೆ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಮೋಹ!

Next Post

ಬಿಜೆಪಿ ಅಧ್ಯಕ್ಷನ ಅಪ್ಪ ಕಾಂಗ್ರೆಸ್ ಫಲಾನುಭವಿ!

Next Post
BJP President's father is a Congress beneficiary!

ಬಿಜೆಪಿ ಅಧ್ಯಕ್ಷನ ಅಪ್ಪ ಕಾಂಗ್ರೆಸ್ ಫಲಾನುಭವಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ