6
  • Latest
Uttara Kannada | No suitable candidate for Anganwadi centers!

ಉತ್ತರ ಕನ್ನಡ | ಅಂಗನವಾಡಿ ಕೇಂದ್ರಗಳಿಗೆ ಇಲ್ಲ ಯೋಗ್ಯ ಅಭ್ಯರ್ಥಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಉತ್ತರ ಕನ್ನಡ | ಅಂಗನವಾಡಿ ಕೇಂದ್ರಗಳಿಗೆ ಇಲ್ಲ ಯೋಗ್ಯ ಅಭ್ಯರ್ಥಿ!

AchyutKumar by AchyutKumar
March 10, 2025
in ರಾಜ್ಯ
Uttara Kannada | No suitable candidate for Anganwadi centers!
advt advt advt
ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ 10 ಸಾವಿರ ಹಾಗೂ ಸಹಾಯಕರಿಗೆ 6 ಸಾವಿರ ರೂ ವೇತನ ನೀಡುತ್ತಿದೆ. ಅವರವರ ಅನುಭವ ಆಧಾರದ ಮೇಲೆ ವೇತನವೂ ಏರಿಕೆಯಾಗುತ್ತದೆ. ಜೊತೆಗೆ ವಾಸಸ್ಥಳದಿಂದ 3ಕಿಮೀ ವ್ಯಾಪ್ತಿಯೊಳಗೆ ಉದ್ಯೋಗ ಒದಗಿಸಲಾಗುತ್ತದೆ. ಅದಾಗಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಂಗನವಾಡಿಗಳಲ್ಲಿ 491 ಹುದ್ದೆಗಳು ಖಾಲಿ ಉಳಿದಿವೆ!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕೇಂದ್ರಗಳ ಹೊಣೆ ಹೊತ್ತಿದೆ. ಶಿಶು ಅಭಿವೃದ್ಧಿ ಯೋಜನಾ ವಿಭಾಗದ ಮೂಲಕ ಎಲ್ಲಡೆ ಅಂಗನವಾಡಿಗಳನ್ನು ನಿರ್ವಹಿಸುತ್ತದೆ. ಮಕ್ಕಳ ಪೌಷ್ಠಿಕತೆ, ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಒತ್ತು ನೀಡಲಾಗುತ್ತಿದೆ. ಆದರೆ, ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಲು ಅಭ್ಯರ್ಥಿಗಳೇ ಇಲ್ಲ!

Advertisement. Scroll to continue reading.
ADVERTISEMENT
ADVERTISEMENT

ಊರಿನಲ್ಲಿರುವ 6 ವರ್ಷದ ಒಳಗಿನ ಮಕ್ಕಳ ಸಂಪೂರ್ಣ ಜವಾಬ್ದಾರಿ ಅಂಗನವಾಡಿ ಕೇಂದ್ರದವರದ್ದಾಗಿರುತ್ತದೆ. ಇದರೊಂದಿಗೆ ಗರ್ಭಿಣಿ ಹಾಗೂ ಬಾಣಂತಿಯರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದು ಹಾಗೂ ಅವರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವುದು ಅಂಗನವಾಡಿ ಕೇಂದ್ರದ ಮುಖ್ಯ ಜವಾಬ್ದಾರಿ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕರ ನೇಮಕಾತಿ ಸರ್ಕಾರಕ್ಕೆ ಅನಿವಾರ್ಯವೂ ಹೌದು. ಆದರೆ, ಸಾಕಷ್ಟು ಬಾರಿ ಪ್ರಕಟಣೆ ನೀಡಿದರೂ ಹಲವು ಅಂಗನವಾಡಿ ಕೇಂದ್ರಗಳಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ.

ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ 115 ಅಂಗನವಾಡಿ ಕಾರ್ಯಕರ್ತೆ ಹಾಗೂ 376 ಅಂಗನವಾಡಿ ಸಹಾಯಕಿ ಹುದ್ದೆ ಖಾಲಿಯಿದೆ. ಅಂಕೋಲಾ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 4, ಅಂಗನವಾಡಿ ಸಹಾಯಕಿ 21, ಭಟ್ಕಳ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 9, ಅಂಗನವಾಡಿ ಸಹಾಯಕಿ 21, ದಾಂಡೇಲಿ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 4, ಅಂಗನವಾಡಿ ಸಹಾಯಕಿ 16 ಹುದ್ದೆಗಳಿಗೆ ಅಭ್ಯರ್ಥಿಗಳಿಲ್ಲ. ಹೊನ್ನಾವರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 4, ಅಂಗನವಾಡಿ ಸಹಾಯಕಿ 44 , ಕಾರವಾರ ತಾಲೂಕಿನಲ್ಲಿ ಕಾರ್ಯಕರ್ತೆ 3, ಅಂಗನವಾಡಿ ಸಹಾಯಕಿ 17, ಕುಮಟಾ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 5, ಅಂಗನವಾಡಿ ಸಹಾಯಕಿ 37, ಮುಂಡಗೋಡ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 9, ಅಂಗನವಾಡಿ ಸಹಾಯಕಿ 39 ಹುದ್ದೆಗಳು ಖಾಲಿಯಿವೆ.

Advertisement. Scroll to continue reading.

ಸಿದ್ದಾಪುರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 12, ಅಂಗನವಾಡಿ ಸಹಾಯಕಿ 32, ಶಿರಸಿ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 24, ಅಂಗನವಾಡಿ ಸಹಾಯಕಿ 69, ಜೋಯಿಡಾ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 20, ಅಂಗನವಾಡಿ ಸಹಾಯಕಿ 34, ಯಲ್ಲಾಪುರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 8, ಅಂಗನವಾಡಿ ಸಹಾಯಕಿ 23, ಹಳಿಯಾಳ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 13, ಅಂಗನವಾಡಿ ಸಹಾಯಕಿ 23 ಹುದ್ದೆಗಳಿಗೆ ಯೋಗ್ಯರ ಹುಡುಕಾಟ ನಡೆದಿದೆ.

ಈ ಬಾರಿ ಏಪ್ರಿಲ್ 7ರ ಒಳಗಾಗಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸೂಚನೆ ರವಾನಿಸಲಾಗಿದೆ. ಆಸಕ್ತರು https://karnemakaone.kar.nic.in/abcd/ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದಾಗಿಯೂ ಆನ್ ಲೈನ್ ಬಗ್ಗೆ ಮಾಹಿತಿ ಇಲ್ಲದವರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಭೇಟಿ ಮಾಡಿಯೂ ಅರ್ಜಿ ಸಲ್ಲಿಸುವ ಅವಕಾಶವಿದೆ.

ShareSendTweetShare
ADVERTISEMENT
Previous Post

ಬೈಕಿಗೆ ಗುದ್ದಿದ ಲಾರಿ: ಬಾಳಿ ಬದುಕಬೇಕಿದ್ದವನ ಜೀವನ ಅಂತ್ಯ!

Next Post

ಎಲ್ಲರನ್ನು ಬಿಟ್ಟು ಎಲ್ಲಿ ಹಾರಿದ ಈ ಹನುಮಂತ?

Next Post
ಎಲ್ಲರನ್ನು ಬಿಟ್ಟು ಎಲ್ಲಿ ಹಾರಿದ ಈ ಹನುಮಂತ?

ಎಲ್ಲರನ್ನು ಬಿಟ್ಟು ಎಲ್ಲಿ ಹಾರಿದ ಈ ಹನುಮಂತ?

DC interested in empowering Anganwadis: Nutritional treatment for malnourished children!

ಈ ಊರುಗಳಲ್ಲಿ ಇನ್ನೂ 5 ದಿನ ನಿಷೇಧಾಜ್ಞೆ!

Explain the reason for the student's death.. Punish the culprits immediately!

ವಿದ್ಯಾರ್ಥಿನಿ ಸಾವಿಗೆ ಕಾರಣ ತಿಳಿಸಿ.. ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.