6
  • Latest
Mundagod Mudsali Manjunath's third wife killed!

ಮುಂಡಗೋಡ: ಮುಡಸಾಲಿ ಮಂಜುನಾಥನ ಕೊಂದ ಮೂರನೇ ಪತ್ನಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮುಂಡಗೋಡ: ಮುಡಸಾಲಿ ಮಂಜುನಾಥನ ಕೊಂದ ಮೂರನೇ ಪತ್ನಿ!

AchyutKumar by AchyutKumar
in ರಾಜ್ಯ
Mundagod Mudsali Manjunath's third wife killed!

ಮನೆಗೆ ಸಿಸಿ ಕ್ಯಾಮರಾ ಹಾಕಿಸಿದ ವಿಷಯವಾಗಿ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮೂಡಸಾಲಿ ಮಂಜುನಾಥ ಅವರು ತಮ್ಮ ಮೂರನೇ ಪತ್ನಿ ಮಧು ಎಂಬಾತರಿoದ ಕೊಲೆಯಾಗಿದ್ದಾರೆ!

ಮುಂಡಗೋಡಿನ ಮೂಡಸಾಲಿಯ ಮಂಜುನಾಥ ಜಾದವ್ ಅವರು ಬಂಕಾಪುರದ ಬಳಿ ಬೈಕಿನಿಂದ ಬಿದ್ದು ಸಾವನಪ್ಪಿದ ರೀತಿ ಪತ್ತೆಯಾಗಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಮಂಜುನಾಥ ಅವರ ಕೊಲೆ ಮಾಡಿ, ಬಂಕಾಪುರದಲ್ಲಿ ಅಪಘಾತದ ಕಥೆ ಕಟ್ಟಿರುವ ವಿಷಯ ಅರಿವಿಗೆ ಬಂದಿತು. ಮಂಜುನಾಥ ಅವರ ಪತ್ನಿ ಮಧು ಜೊತೆ ಮಕ್ಕಳಾದ ವಿನಯ ಹಾಗೂ ವಿಕಾಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಜುನಾಥ ಜಾದವ್ ಹಾಗೂ ಮಧು ನಡುವೆ ಅನೈತಿಕ ಸಂಬoಧವಿತ್ತು. ಈ ವಿಷಯ ಎಲ್ಲಡೆ ಹರಡಿದ ನಂತರ ಅನೇಕರು ಸೇರಿ ಅವರಿಬ್ಬರ ಮದುವೆ ಮಾಡಿಸಿದ್ದರು. ಅದಾದ ನಂತರ ಮಂಜುನಾಥ ಜಾದವ್ ತಮ್ಮ ತೋಟ ಮಾರಾಟ ಮಾಡಿ ಮಧು ಅವರಿಗೆ ಬ್ಯುಟಿ ಪಾರ್ಲರ್ ಹಾಕಿ ಕೊಟ್ಟಿದ್ದರು. ಆದರೆ, ಪತ್ನಿ ನಡವಳಿಕೆ ಬಗ್ಗೆ ಅನುಮಾನಗೊಂಡ ಮಂಜುನಾಥ ಜಾದವ್, ಮಧು ಮನೆಗೆ ಸಿಸಿ ಕ್ಯಾಮರಾ ಹಾಕಿಸಿದ್ದರು. ಇದೇ ವಿಷಯವಾಗಿ ಅವರಿಬ್ಬರ ನಡುವೆ ವೈಮನಸ್ಸು ಕಾಣಿಸಿಕೊಂಡಿತ್ತು.

ಶನಿವಾರ ಕೊನೆಯದಾಗಿ ಮಂಜುನಾಥ ಜಾದವ್ ತಮ್ಮ ಮೂರನೇ ಪತ್ನಿ ಮಧು ಮನೆಗೆ ಹೋಗಿದ್ದರು. ಅದಾದ ನಂತರ ಮಂಜುನಾಥರ ಕೊಲೆ ನಡೆದಿದ್ದು, ಬಂಕಾಪುರದ ಹೊರ ವಲಯದಲ್ಲಿ ಅವರ ಶವ ಬಿದ್ದ ಬೈಕಿನ ಜೊತೆ ಸಿಕ್ಕಿತ್ತು. ಕೊಲೆ ಆರೋಪಿತರು ಅಪಘಾತದಲ್ಲಿ ಮಂಜುನಾಥ ಜಾದವ್ ಸಾವನಪ್ಪಿದ ಬಗ್ಗೆ ಬಿಂಬಿಸುವ ಪ್ರಯತ್ನ ನಡೆಸಿದ್ದರು.

ಆದರೆ, ಪೊಲೀಸರಿಗೆ ಈ ಸಾವಿನಲ್ಲಿ ಅನುಮಾನ ಕಾಣಿಸಿತು. ವಿಚಾರಣೆ ನಡೆಸಿದಾಗ ಮಧು ಸತ್ಯ ಒಪ್ಪಿಕೊಂಡರು. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ShareSendTweetShare
Previous Post

ಚುರುಕು ವ್ಯಕ್ತಿತ್ವದ ಶಿರಸ್ತೇದಾರನಿಗೆ ರಾಜ್ಯ ಸಂಘಟನೆ ಜವಾಬ್ದಾರಿ!

Next Post

ಚಂದ್ಗುಳಿ: ಗಂಟೆ ಗಣಪನ ದೇಗುಲದಲ್ಲಿ ನಿತ್ಯವೂ ಪ್ರಸಾದ ಭೋಜನ!

Next Post
Chandguli: Prasad is served daily at the Ganesha temple!

ಚಂದ್ಗುಳಿ: ಗಂಟೆ ಗಣಪನ ದೇಗುಲದಲ್ಲಿ ನಿತ್ಯವೂ ಪ್ರಸಾದ ಭೋಜನ!

ಏಡಿ ಶಿಕಾರಿಗೆ ಹೋದವ ಮನೆಗೆ ಮರಳಿದ್ದು ಶವವಾಗಿ!

ಕರ್ತವ್ಯದ ವೇಳೆ ಕುಡಿತ: ASI ಅಮಾನತು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.