6
  • Latest
ಅಕ್ಕ.. ಅಕ್ಕ.. ಎನ್ನುವವರೇ ಅನ್ಯಾಯ ಮಾಡಿದರು!

ಅಕ್ಕ.. ಅಕ್ಕ.. ಎನ್ನುವವರೇ ಅನ್ಯಾಯ ಮಾಡಿದರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಅಕ್ಕ.. ಅಕ್ಕ.. ಎನ್ನುವವರೇ ಅನ್ಯಾಯ ಮಾಡಿದರು!

AchyutKumar by AchyutKumar
March 14, 2025
in ರಾಜಕೀಯ
ಯಲ್ಲಾಪುರ ಪಟ್ಟಣ ಪಂಚಾಯತ ಸಭೆಯಲ್ಲಿ ಸದಸ್ಯೆ ಪುಷ್ಪಾ ನಾಯ್ಕ ಭಾವುಕರಾಗಿ ಭಾಷಣ ಮಾಡಿದರು

ಯಲ್ಲಾಪುರ ಪಟ್ಟಣ ಪಂಚಾಯತ ಸಭೆಯಲ್ಲಿ ಸದಸ್ಯೆ ಪುಷ್ಪಾ ನಾಯ್ಕ ಭಾವುಕರಾಗಿ ಭಾಷಣ ಮಾಡಿದರು

advt advt advt
ADVERTISEMENT

`ಮುಂದಿನಿoದ ಎಲ್ಲರೂ ಅಕ್ಕ.. ಅಕ್ಕ.. ಎನ್ನುತ್ತ ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ, ಬೆನ್ನ ಹಿಂದೆ ನನ್ನ ವಿರುದ್ಧ ಕುತಂತ್ರ ಮಾಡುತ್ತಾರೆ’ ಎಂದು ಯಲ್ಲಾಪುರ ಪ ಪಂ ಸದಸ್ಯೆ ಪುಷ್ಪಾ ನಾಯ್ಕ ಸಾಮಾನ್ಯ ಸಭೆಯಲ್ಲಿ ಕಣ್ಣೀರಾದರು.

ಶುಕ್ರವಾರ ನಡೆದ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ಪುಷ್ಪಾ ನಾಯ್ಕ ಬಹಿರಂಗವಾಗಿ ತಮ್ಮ ನೋವು ತೋಡಿಕೊಂಡರು. `ಕಳೆದ 20 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ಹಣ ಪಡೆದು ಕೆಲಸ ಮಾಡುವ ಹಾಗಿದಿದ್ದರೆ ಈಗಲೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ. ಜನರ ಒಳಿತಿಗಾಗಿ ಅಭಿವೃದ್ಧಿ ಅನುದಾನ ನೀಡಿದರೆ ಕಮಿಶನ್ ಪಡೆದು ಕೆಲಸ ಮಾಡಿದ್ದಾರೆ ಎಂದು ನಮ್ಮವರೇ ಊಹಾಪೋಹ ಹಬ್ಬಿಸುತ್ತಾರೆ’ ಎಂದು ಅಳಲು ತೋಡಿಕೊಂಡರು.

ADVERTISEMENT
ADVERTISEMENT

`ಮತದಾರರ ಮನವಿ ಮೇರೆಗೆ ಸವಣಗೇರಿ ಬಳಿ ರಸ್ತೆ ಅಭಿವೃದ್ಧಿಗೆ 2.5 ಲಕ್ಷ ರೂ ಮಂಜೂರಿ ಮಾಡಲಾಗಿತ್ತು. ಮಂಜೂರಿ ಮಾಡುವ ವೇಳೆ ಯಾರೂ ಇದಕ್ಕೆ ತಕರಾರು ಸಲ್ಲಿಸಲಿಲ್ಲ. ಗುತ್ತಿಗೆದಾರ ಕೆಲಸ ಶುರು ಮಾಡಿದ ನಂತರ ಮುಖ್ಯಮಂತ್ರಿ ಕಚೇರಿಯವರೆಗೆ ದೂರು ಸಲ್ಲಿಸಿ ಸಮಸ್ಯೆ ಮಾಡಲಾಗಿದೆ. ಅಕ್ಕ.. ಅಕ್ಕ ಎಂದು ಕರೆಯುವ ಈ ಜನ ಅಲ್ಲಿ ಹಣ ಮಂಜೂರಿ ಮಾಡುವುದು ಕಾನೂನುಬಾಹಿರ ಎಂದು ಮುಂಚಿತವಾಗಿ ಒಂದು ಮಾತು ತಿಳಿಸಲಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.

`ತಕರಾರು ಸಲ್ಲಿಸುವ ಮೊದಲು ಭೂ ಪರಿವರ್ತನೆ ಆಗದ ಕ್ಷೇತ್ರಕ್ಕೆ ಹಣ ಮಂಜೂರಿ ಮಾಡಬೇಡಿ ಎಂದು ಒಂದು ಮಾತು ಹೇಳಬೇಕಿತ್ತು. ಎದುರಿನಿಂದ ಚನ್ನಾಗಿ ಮಾತನಾಡುವವರು ತೆರೆಮರೆಯಲ್ಲಿ ನಿಂತು ಕೊಂಕು ಮಾಡುವುದನ್ನು ಬಿಡಬೇಕು’ ಎಂದು ಯಾರ ಹೆಸರನ್ನು ತೆಗೆದುಕೊಳ್ಳದೇ ಕಿವಿಮಾತು ಹೇಳಿದರು.

ಇದನ್ನು ಓದಿ: ಪುಷ್ಪಾ ನಾಯ್ಕರ ಬೇಸರಕ್ಕೆ ಕಾರಣವೇನು? ಅರೆಬರೆ ಕೆಲಸದ ಅದ್ವಾನ: ಸರ್ಕಾರಿ ಕೆಲಸಕ್ಕೆ ಖಾಸಗಿ ಅನುದಾನ!

Advertisement. Scroll to continue reading.
Advertisement. Scroll to continue reading.

`ಸವಣಗೇರಿ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಿ ಮಾಡಿದ್ದರಿಂದ ಪ ಪಂ ಅಧಿಕಾರಿಗಳಿಗೆ ಸಹ ತೊಂದರೆಯಾಗಿದೆ. ಕೆಲವರು ಸಾವಿರ ಜನರನ್ನು ಕರೆಯಿಸಿ ಪ್ರತಿಭಟನೆ ನಡೆಸುವುದಾಗಿ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ. ಯಾರಿಗೂ ತೊಂದರೆ ಮಾಡುವ ಉದ್ದೇಶವಿಲ್ಲದ ಕಾರಣ ಆ ಹಣವನ್ನು ಬದಲಿ ಕಾಮಗಾರಿಗೆ ಬಳಸುವಂತೆ ಪತ್ರ ಕೊಡುವೆ’ ಎಂದು ಸಭೆಯಲ್ಲಿ ಅವರು ಸ್ಪಷ್ಠಪಡಿಸಿದರು. ಪುಷ್ಪಾ ನಾಯ್ಕ ಅವರ ಈ ನಿರ್ಣಯವನ್ನು ಅನೇಕರು ಚಪ್ಪಾಳೆ ಮೂಲಕ ಸ್ವಾಗತಿಸಿದರು.

 

ShareSendTweetShare
ADVERTISEMENT
Previous Post

ಕಬ್ಬಿಣದ ಪೈಪ್ ಕಳ್ಳತನ: ಕಾಂಗ್ರೆಸ್ಸಿಗೆ ಪ್ರತಿಯಾಗಿ ಬಿಜೆಪಿ ಪ್ರತಿಭಟನೆ!

Next Post

ಬಡವರ ಮನೆ ವಿಚಾರ: ಆಡಳಿತ ಪಕ್ಷದವರನ್ನು ಮುಜುಗರಕ್ಕೆ ಸಿಲುಕಿಸಿದ ದಿನಕರ ಶೆಟ್ಟಿ!

Next Post
Poor people's housing issue Dinakar Shetty embarrasses the ruling party!

ಬಡವರ ಮನೆ ವಿಚಾರ: ಆಡಳಿತ ಪಕ್ಷದವರನ್ನು ಮುಜುಗರಕ್ಕೆ ಸಿಲುಕಿಸಿದ ದಿನಕರ ಶೆಟ್ಟಿ!

Former TDP member threatened to be killed with a tipper!

ತಾ ಪಂ ಮಾಜಿ ಸದಸ್ಯನಿಗೆ ಟಿಪ್ಪರ್ ಹಾಯಿಸಿ ಕೊಲ್ಲುವ ಬೆದರಿಕೆ!

Learn English online Come here for an English class!

ಆನ್‌ಲೈನ್ ಮೂಲಕ ಆಂಗ್ಲ ಕಲಿಕೆ: ಇಂಗ್ಲೀಷ್ ಕ್ಲಾಸಿಗೆ ಇಲ್ಲಿ ಬನ್ನಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.