6
  • Latest
ಅಕ್ಕ.. ಅಕ್ಕ.. ಎನ್ನುವವರೇ ಅನ್ಯಾಯ ಮಾಡಿದರು!

ಅಕ್ಕ.. ಅಕ್ಕ.. ಎನ್ನುವವರೇ ಅನ್ಯಾಯ ಮಾಡಿದರು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಅಕ್ಕ.. ಅಕ್ಕ.. ಎನ್ನುವವರೇ ಅನ್ಯಾಯ ಮಾಡಿದರು!

AchyutKumar by AchyutKumar
in ರಾಜಕೀಯ
ಅಕ್ಕ.. ಅಕ್ಕ.. ಎನ್ನುವವರೇ ಅನ್ಯಾಯ ಮಾಡಿದರು!

ಯಲ್ಲಾಪುರ ಪಟ್ಟಣ ಪಂಚಾಯತ ಸಭೆಯಲ್ಲಿ ಸದಸ್ಯೆ ಪುಷ್ಪಾ ನಾಯ್ಕ ಭಾವುಕರಾಗಿ ಭಾಷಣ ಮಾಡಿದರು

`ಮುಂದಿನಿoದ ಎಲ್ಲರೂ ಅಕ್ಕ.. ಅಕ್ಕ.. ಎನ್ನುತ್ತ ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ, ಬೆನ್ನ ಹಿಂದೆ ನನ್ನ ವಿರುದ್ಧ ಕುತಂತ್ರ ಮಾಡುತ್ತಾರೆ’ ಎಂದು ಯಲ್ಲಾಪುರ ಪ ಪಂ ಸದಸ್ಯೆ ಪುಷ್ಪಾ ನಾಯ್ಕ ಸಾಮಾನ್ಯ ಸಭೆಯಲ್ಲಿ ಕಣ್ಣೀರಾದರು.

ADVERTISEMENT

ಶುಕ್ರವಾರ ನಡೆದ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ಪುಷ್ಪಾ ನಾಯ್ಕ ಬಹಿರಂಗವಾಗಿ ತಮ್ಮ ನೋವು ತೋಡಿಕೊಂಡರು. `ಕಳೆದ 20 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ಹಣ ಪಡೆದು ಕೆಲಸ ಮಾಡುವ ಹಾಗಿದಿದ್ದರೆ ಈಗಲೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ. ಜನರ ಒಳಿತಿಗಾಗಿ ಅಭಿವೃದ್ಧಿ ಅನುದಾನ ನೀಡಿದರೆ ಕಮಿಶನ್ ಪಡೆದು ಕೆಲಸ ಮಾಡಿದ್ದಾರೆ ಎಂದು ನಮ್ಮವರೇ ಊಹಾಪೋಹ ಹಬ್ಬಿಸುತ್ತಾರೆ’ ಎಂದು ಅಳಲು ತೋಡಿಕೊಂಡರು.

`ಮತದಾರರ ಮನವಿ ಮೇರೆಗೆ ಸವಣಗೇರಿ ಬಳಿ ರಸ್ತೆ ಅಭಿವೃದ್ಧಿಗೆ 2.5 ಲಕ್ಷ ರೂ ಮಂಜೂರಿ ಮಾಡಲಾಗಿತ್ತು. ಮಂಜೂರಿ ಮಾಡುವ ವೇಳೆ ಯಾರೂ ಇದಕ್ಕೆ ತಕರಾರು ಸಲ್ಲಿಸಲಿಲ್ಲ. ಗುತ್ತಿಗೆದಾರ ಕೆಲಸ ಶುರು ಮಾಡಿದ ನಂತರ ಮುಖ್ಯಮಂತ್ರಿ ಕಚೇರಿಯವರೆಗೆ ದೂರು ಸಲ್ಲಿಸಿ ಸಮಸ್ಯೆ ಮಾಡಲಾಗಿದೆ. ಅಕ್ಕ.. ಅಕ್ಕ ಎಂದು ಕರೆಯುವ ಈ ಜನ ಅಲ್ಲಿ ಹಣ ಮಂಜೂರಿ ಮಾಡುವುದು ಕಾನೂನುಬಾಹಿರ ಎಂದು ಮುಂಚಿತವಾಗಿ ಒಂದು ಮಾತು ತಿಳಿಸಲಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.

Advertisement. Scroll to continue reading.

`ತಕರಾರು ಸಲ್ಲಿಸುವ ಮೊದಲು ಭೂ ಪರಿವರ್ತನೆ ಆಗದ ಕ್ಷೇತ್ರಕ್ಕೆ ಹಣ ಮಂಜೂರಿ ಮಾಡಬೇಡಿ ಎಂದು ಒಂದು ಮಾತು ಹೇಳಬೇಕಿತ್ತು. ಎದುರಿನಿಂದ ಚನ್ನಾಗಿ ಮಾತನಾಡುವವರು ತೆರೆಮರೆಯಲ್ಲಿ ನಿಂತು ಕೊಂಕು ಮಾಡುವುದನ್ನು ಬಿಡಬೇಕು’ ಎಂದು ಯಾರ ಹೆಸರನ್ನು ತೆಗೆದುಕೊಳ್ಳದೇ ಕಿವಿಮಾತು ಹೇಳಿದರು.

Advertisement. Scroll to continue reading.

ಇದನ್ನು ಓದಿ: ಪುಷ್ಪಾ ನಾಯ್ಕರ ಬೇಸರಕ್ಕೆ ಕಾರಣವೇನು? ಅರೆಬರೆ ಕೆಲಸದ ಅದ್ವಾನ: ಸರ್ಕಾರಿ ಕೆಲಸಕ್ಕೆ ಖಾಸಗಿ ಅನುದಾನ!

`ಸವಣಗೇರಿ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಿ ಮಾಡಿದ್ದರಿಂದ ಪ ಪಂ ಅಧಿಕಾರಿಗಳಿಗೆ ಸಹ ತೊಂದರೆಯಾಗಿದೆ. ಕೆಲವರು ಸಾವಿರ ಜನರನ್ನು ಕರೆಯಿಸಿ ಪ್ರತಿಭಟನೆ ನಡೆಸುವುದಾಗಿ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ. ಯಾರಿಗೂ ತೊಂದರೆ ಮಾಡುವ ಉದ್ದೇಶವಿಲ್ಲದ ಕಾರಣ ಆ ಹಣವನ್ನು ಬದಲಿ ಕಾಮಗಾರಿಗೆ ಬಳಸುವಂತೆ ಪತ್ರ ಕೊಡುವೆ’ ಎಂದು ಸಭೆಯಲ್ಲಿ ಅವರು ಸ್ಪಷ್ಠಪಡಿಸಿದರು. ಪುಷ್ಪಾ ನಾಯ್ಕ ಅವರ ಈ ನಿರ್ಣಯವನ್ನು ಅನೇಕರು ಚಪ್ಪಾಳೆ ಮೂಲಕ ಸ್ವಾಗತಿಸಿದರು.

 

Previous Post

ಕಬ್ಬಿಣದ ಪೈಪ್ ಕಳ್ಳತನ: ಕಾಂಗ್ರೆಸ್ಸಿಗೆ ಪ್ರತಿಯಾಗಿ ಬಿಜೆಪಿ ಪ್ರತಿಭಟನೆ!

Next Post

ಬಡವರ ಮನೆ ವಿಚಾರ: ಆಡಳಿತ ಪಕ್ಷದವರನ್ನು ಮುಜುಗರಕ್ಕೆ ಸಿಲುಕಿಸಿದ ದಿನಕರ ಶೆಟ್ಟಿ!

Next Post
Poor people's housing issue Dinakar Shetty embarrasses the ruling party!

ಬಡವರ ಮನೆ ವಿಚಾರ: ಆಡಳಿತ ಪಕ್ಷದವರನ್ನು ಮುಜುಗರಕ್ಕೆ ಸಿಲುಕಿಸಿದ ದಿನಕರ ಶೆಟ್ಟಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ