6
  • Latest
Poor people's housing issue Dinakar Shetty embarrasses the ruling party!

ಬಡವರ ಮನೆ ವಿಚಾರ: ಆಡಳಿತ ಪಕ್ಷದವರನ್ನು ಮುಜುಗರಕ್ಕೆ ಸಿಲುಕಿಸಿದ ದಿನಕರ ಶೆಟ್ಟಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಬಡವರ ಮನೆ ವಿಚಾರ: ಆಡಳಿತ ಪಕ್ಷದವರನ್ನು ಮುಜುಗರಕ್ಕೆ ಸಿಲುಕಿಸಿದ ದಿನಕರ ಶೆಟ್ಟಿ!

AchyutKumar by AchyutKumar
in ವಿಡಿಯೋ
Poor people's housing issue Dinakar Shetty embarrasses the ruling party!

`ಬಸವ ವಸತಿ ಯೋಜನೆ ಅಡಿ ಮಂಜೂರಾದ ಮನೆಗಳಿಗೆ ಐದು ವರ್ಷವಾದರೂ ಸರಿಯಾಗಿ ಹಣ ಬಿಡುಗಡೆಯಾಗಿಲ್ಲ. ಈ ಸರ್ಕಾರವನ್ನು ಎಲ್ಲರೂ ದಿವಾಳಿ ಸರ್ಕಾರ ಎಂದು ವ್ಯಂಗ್ಯವಾಡುತ್ತಿದ್ದಾರೆ’ ಎಂದು ಕುಮಟಾ-ಹೊನ್ನಾವರ ಕ್ಷೇತ್ರ ಶಾಸಕ ದಿನಕರ ಶೆಟ್ಟಿ ಅಧಿವೇಶನದಲ್ಲಿ ಹೇಳಿದ್ದಾರೆ. ಅವರು ಪ್ರಸ್ತಾಪಿಸಿದ ಈ ವಿಷಯ ಸದನದಲ್ಲಿ ಭಾರೀ ಪ್ರಮಾಣದ ಚರ್ಚೆಗೆ ಒಳಗಾಗಿದ್ದು, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಅದು ಫಲ ನೀಡದ ಕಾರಣ ಆಡಳಿತ ಪಕ್ಷದವರು ಮುಜುಗರ ಅನುಭವಿಸಿದರು.

`2020-21ರ ಸಾಲಿನಲ್ಲಿ ಬಸವ ವಸತಿ ಯೋಜನೆ ಅಡಿ ಕುಮಟಾ-ಹೊನ್ನಾವರ ಕ್ಷೇತ್ರಕ್ಕೆ 2250ಮನೆಗಳು ಮಂಜೂರಿಯಾಗಿತ್ತು. ಕೆಲವರಿಗೆ ಮಾತ್ರ ಒಂದು ಕಂತಿನ ಹಣ ಬಂದಿದೆ. ಉಳಿದ ಹಣದ ಬಗ್ಗೆ ಯಾರಿಗೂ ಸ್ಪಷ್ಠನೆ ಇಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾರನ್ನು ಪ್ರಶ್ನಿಸಬೇಕು? ಎಂಬ ಬಗ್ಗೆಯೂ ಗೊತ್ತಾಗುತ್ತಿಲ್ಲ’ ಎನ್ನುತ್ತ ದಿನಕರ ಶೆಟ್ಟಿ ಸದನದ ಗಮನಸೆಳೆದರು. ಈ ನಡುವೆ ಸದನದಲ್ಲಿ `ದಿವಾಳಿ ಸರ್ಕಾರ’ ಎಂಬ ಧ್ವನಿ ಕೇಳಿಸಿದ್ದು, ಅದಕ್ಕೆ ಮತ್ತೆ ಧ್ವನಿಗೂಡಿಸಿದ ದಿನಕರ ಶೆಟ್ಟಿ `ಎಲ್ಲರೂ ಈ ಸರ್ಕಾರವನ್ನು ದಿವಾಳಿ ಸರ್ಕಾರ ಎನ್ನುತ್ತಿದ್ದಾರೆ. ಆದರೆ, ನಾನು ಹಾಗೇ ಹೇಳಿಲ್ಲ’ ಎನ್ನುತ್ತ ಸಮಜಾಯಿಶಿ ನೀಡಿದರು.

`ಮನೆಗೆ ಸಿಗುವ ಹಣ ಬಾರದ ಕಾರಣ ಬಡವರಿಗೆ ಹಾಗೂ ಹಿಂದುಳಿದವರಿಗೆ ಅನ್ಯಾಯವಾಗುತ್ತಿದೆ. 2020-21ರಲ್ಲಿ ಘೋಷಿಸಿದ ಹಣ ಪಾವತಿಸಿ ಇದೀಗ ಹೊಸ ಮನೆಗಳ ಮಂಜೂರಿ ಆಗಬೇಕಿತ್ತು. ಬಸವ ವಸತಿ ಯೋಜನೆ ಪಂಚ ವಾರ್ಷಿಕ ಯೋಜನೆಗಿಂತಲೂ ನಿಧಾನವಾಗಿದೆ’ ಎಂಬ ಕುರಿತು ಚರ್ಚೆ ನಡೆಯಿತು. `ಈ ಸರ್ಕಾರದಿಂದ ಅನೇಕರಿಗೆ ಅನ್ಯಾಯವಾಗಿದೆ’ ಎಂದು ದಿನಕರ ಶೆಟ್ಟಿ ಮುಂದುವರೆದು ಮಾತನಾಡಿದರು. `ಈ ಸರ್ಕಾರಕ್ಕೆ ಬಡವರ ಬಗ್ಗೆ ಕಳಕಳಿಯಿಲ್ಲ. ಹೀಗಾಗಿ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ. ನಾಲ್ಕು ವರ್ಷಗಳ ಕಾಲ ಹೀಗೆ ಬಾಕಿಯಿರಿಸಿಕೊಳ್ಳುವುದು ಸರಿಯಲ್ಲ’ ಎಂದು ಬೇಸರವ್ಯಕ್ತಪಡಿಸಿದರು. `ರಾಜ್ಯದ ಆರ್ಥಿಕತೆ ಹಾಗೂ ಭಾಗ್ಯಗಳ ಬಗ್ಗೆ ಗಮನವಿರಲಿ’ ಎಂದು ದಿನಕರ ಶೆಟ್ಟಿ ಸದನದಲ್ಲಿ ಸಲಹೆಯನ್ನು ನೀಡಿದರು.

`ಕುಮಟಾ ಹೊನ್ನಾವರ ಕ್ಷೇತ್ರಕ್ಕೆ 2250ಮನೆಗಳು ಮಂಜೂರಿಯಾಗಿದ್ದು ಸತ್ಯ. 1.20 ಲಕ್ಷ ಸರ್ಕಾರ ಸಬ್ಸಿಡಿ ನೀಡಬೇಕಿದ್ದು, ತಲಾ 30 ಸಾವಿರ ರೂಪಾಯಿಯಂತೆ ನಾಲ್ಕು ಕಂತುಗಳಲ್ಲಿ ಹಣ ನೀಡುತ್ತದೆ. 835 ಮನೆ ಮುಕ್ತಾಯವಾಗಿದ್ದು, 986 ಮನೆಗಳು ನಿರ್ಮಾಣ ಹಂತದಲ್ಲಿವೆ. 117 ಮನೆಗಳ ನಿರ್ಮಾಣ ಇನ್ನೂ ಆಗಬೇಕಿದೆ. 25 ಮನೆ ಕೆಲಸ ತಾತ್ಕಾಲಿಕವಾಗಿ ನಿಂತಿದೆ. 80 ಮನೆಗಳು ರದ್ದಾಗಿದೆ. ಫಲಾನುಭವಿಗಳಿಗೆ ಒಟ್ಟು 27 ಕೋಟಿ ರೂ ಜಮಾ ಆಗಬೇಕಿದ್ದು, ಈ ಪೈಕಿ 12 ಕೋಟಿ ರೂ ಜಮಾ ಆಗಿದೆ. ಉಳಿದ ಹಣ ಬಿಡುಗಡೆಗಾಗಿ ಆರ್ಥಿಕ ಇಲಾಖೆ ಒಪ್ಪಿಗೆಗೆ ಕಳುಹಿಸಲಾಗಿದೆ’ ಎಂದು ವಸತಿ ಸಚಿವರ ಪರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಉತ್ತರಿಸಿದರು. ಸದನದಲ್ಲಿ ಓದಲಾಯಿತು. `ನಮ್ಮ ಸರ್ಕಾರ ಹಣ ಬಿಡುಗಡೆಗೆ ಬದ್ಧ. ಹಣ ಕೊಡಬೇಕು. ಕೊಡುತ್ತೇವೆ’ ಎಂದು ಸರ್ಕಾರದ ಪ್ರತಿನಿಧಿಗಳು ಸ್ಪಷ್ಠಪಡಿಸಿದರು.
ಶಾಸಕ ದಿನಕರ ಶೆಟ್ಟಿ ಮಾತು ಹಾಗೂ ಈ ಬಗ್ಗೆ ನಡೆದ ಚರ್ಚೆಯ ವಿಡಿಯೋ ಇಲ್ಲಿ ನೋಡಿ..

ShareSendTweetShare
Previous Post

ಅಕ್ಕ.. ಅಕ್ಕ.. ಎನ್ನುವವರೇ ಅನ್ಯಾಯ ಮಾಡಿದರು!

Next Post

ತಾ ಪಂ ಮಾಜಿ ಸದಸ್ಯನಿಗೆ ಟಿಪ್ಪರ್ ಹಾಯಿಸಿ ಕೊಲ್ಲುವ ಬೆದರಿಕೆ!

Next Post
Former TDP member threatened to be killed with a tipper!

ತಾ ಪಂ ಮಾಜಿ ಸದಸ್ಯನಿಗೆ ಟಿಪ್ಪರ್ ಹಾಯಿಸಿ ಕೊಲ್ಲುವ ಬೆದರಿಕೆ!

Learn English online Come here for an English class!

ಆನ್‌ಲೈನ್ ಮೂಲಕ ಆಂಗ್ಲ ಕಲಿಕೆ: ಇಂಗ್ಲೀಷ್ ಕ್ಲಾಸಿಗೆ ಇಲ್ಲಿ ಬನ್ನಿ!

Members' uproar at the general meeting Officials' refusal to resolve the problem!

ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಬ್ಬರ: ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ನಕಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.