ಮುಂಡಗೋಡಿನ ಕಾತೂರು ಅರಣ್ಯ ವಲಯದಲ್ಲಿ ಅಕ್ರಮ ನಡೆದಿದೆ. ಅತಿಕ್ರಮಣ ತಡೆಗೆ ಬೇಲಿ ನಿರ್ಮಾಣ ವಿಷಯದಲ್ಲಿ ಅಪರಾತಪರವಾಗಿದೆ.
`ಕಾತೂರು ವಲಯದ ಹಲವೆಡೆ 4 ಕೋಟಿ ರೂ ವೆಚ್ಚದಲ್ಲಿ ಕಬ್ಬಿಣದ ಕಂಬದೊAದಿಗೆ ಬೇಲಿ ನಿರ್ಮಿಸಲಾಗಿತ್ತು. ಆದರೆ, ಇದೀಗ ಆ ಬೇಲಿ ಮುರಿದು ಅಲ್ಲಿ ಕಪೌಂಡ್ ನಿರ್ಮಿಸಲಾಗಿದೆ. ದಾಖಲೆಗಳ ಪ್ರಕಾರ 5 ಅಡಿ ಎತ್ತರ, 5 ಹಲಗೆ ಎಂದು ನಮೂದಾಗಿದ್ದು, ಸ್ಥಳದಲ್ಲಿ 3 ಹಲಿಗೆಗಳನ್ನು ಮಾತ್ರ ಅಳವಡಿಸಲಾಗಿದೆ’ ಎಂಬುದು ಹನುಮಂತ ವಡ್ಡರ ಅವರ ದೂರು.
`ಈ ಹಿಂದೆ ನಿರ್ಮಿಸಿದ ಬೇಲಿಯನ್ನು ನಿರ್ಲಕ್ಷಿಸಿ ಹೊಸ ಕಪೌಂಡ್ ನಿರ್ಮಾಣ ಅಗತ್ಯವಿರಲಿಲ್ಲ. ಆ ಬೇಲಿಯನ್ನೂ ಸರಿಯಾಗಿ ನಿರ್ವಹಣೆ ಮಾಡದೇ ಅಲ್ಲಿಯೇ ಕಪೌಂಡ್ ನಿರ್ಮಾಣ ಹೆಸರಿನಲ್ಲಿ ಹಣ ವೆಚ್ಚ ಮಾಡಲಾಗಿದೆ. ಸಿಮೆಂಟ್ ಕಂಬಗಳೊoದಿಗೆ 4 ಲೈನ್ ತಂತಿ ಬೇಲಿ ನಿರ್ಮಿಸಿದ್ದು, ಸಿಮೆಂಟ್ ಗೋಡೆ ಸಹ ಕಳಪೆಯಾಗಿದೆ’ ಎಂದವರು ವಿವರಿಸಿದ್ದಾರೆ.
`ಇಲ್ಲಿನ ಸಾಕಷ್ಟು ಅಕ್ರಮಗಳ ಬಗ್ಗೆ ಸರ್ಕಾರಕ್ಕೆ ದೂರು ಕೊಡಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮವಾಗಿಲ್ಲ. ಹಿರಿಯ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕು’ ಎಂದು ಹನುಮಂತ ವಡ್ಡರ ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.






