6
  • Latest
Political colour to the Kiravatti riots: Holi hodapetu becomes a weapon for the BJP!

ಕಿರವತ್ತಿ ಗಲಾಟೆಗೆ ರಾಜಕೀಯ ಬಣ್ಣ: ಬಿಜೆಪಿಗೆ ಅಸ್ತ್ರವಾದ ಹೋಳಿ ಹೊಡಪೆಟ್ಟು!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಕಿರವತ್ತಿ ಗಲಾಟೆಗೆ ರಾಜಕೀಯ ಬಣ್ಣ: ಬಿಜೆಪಿಗೆ ಅಸ್ತ್ರವಾದ ಹೋಳಿ ಹೊಡಪೆಟ್ಟು!

AchyutKumar by AchyutKumar
in ರಾಜಕೀಯ
Political colour to the Kiravatti riots: Holi hodapetu becomes a weapon for the BJP!
advt advt advt
ADVERTISEMENT

ಹೋಳಿ ಹಬ್ಬದ ದಿನ ಕಿರವತ್ತಿಯಲ್ಲಿ ನಡೆದ ಹೊಡೆದಾಟದ ವಿಷಯವನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ಹೊಡೆದಾಟ ಪ್ರಕರಣ ರಾಜಿಯಲ್ಲಿ ಅಂತ್ಯವಾಗಿ ಐದು ದಿನದ ನಂತರ ಬಿಜೆಪಿ ಆ ವಿಷಯವನ್ನು ಮತ್ತೆ ಕೆದಕಿದ್ದು, ಬಿಜೆಪಿಗರ ಹೇಳಿಕೆಯನ್ನು ಕಾಂಗ್ರೆಸ್ಸಿಗರು ಗಂಭೀರವಾಗಿ ಪರಿಗಣಿಸಿದರೆ ಈ ಪ್ರಕರಣ ಹೊಸ ಸ್ವರೂಪ ಪಡೆದು ಇನ್ನಷ್ಟು ಕೋಲಾಹಲ ಸೃಷ್ಠಿಸುವ ಸಾಧ್ಯತೆಗಳಿದೆ.

ಕಿರವತ್ತಿಯಲ್ಲಿ ಹೋಳಿ ಹಬ್ಬದ ವೇಳೆ ಜೋರಾಗಿ ಡಿಜೆ ಸದ್ದು ಮಾಡಿದ್ದರಿಂದ ಗಲಾಟೆ ನಡೆದಿತ್ತು. ಕೆಲವರು ಪೊಲೀಸರ ಮೇಲೆ ಕೈ ಮಾಡಿದ್ದಾರೆ ಎಂಬ ಆರೋಪವ್ಯಕ್ತವಾಗಿತ್ತು. ಇದಕ್ಕೆ ಪ್ರತಿಯಾಗಿ ಪೊಲೀಸರು ಸಹ ಲಾಠಿ ಬೀಸಿ, ವ್ಯಕ್ತಿಯೊಬ್ಬರ ಕಾಲು ಮುರಿದ ಬಗ್ಗೆ ಊಹಾಪೋಹಗಳು ವ್ಯಕ್ತವಾಗಿದ್ದವು. ಪೊಲೀಸರ ಕ್ರಮ ಖಂಡಿಸಿ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ ಬಳಿ ನೂರಾರು ಜನ ಆಗಮಿಸಿ ತಡರಾತ್ರಿಯವರೆಗೂ ಪ್ರತಿಭಟಿಸಿದ್ದರು. ಕೊನೆಗೆ ಶಾಸಕ ಶಿವರಾಮ ಹೆಬ್ಬಾರ್ ಮಧ್ಯಸ್ಥಿಕೆಯಲ್ಲಿ ಈ ಪ್ರಕರಣ ರಾಜಿಯಲ್ಲಿ ಅಂತ್ಯವಾಗಿತ್ತು. ಆ ದಿನ ಪ್ರತಿಭಟನಾಕಾರರನ್ನು ಬಿಜೆಪಿಗರು ಬೆಂಬಲಿಸಿರಲಿಲ್ಲ. ಬಿಜೆಪಿ ಬಹಿರಂಗವಾಗಿ ಪೊಲೀಸರಿಗೆ ಬೆನ್ನಿಗೂ ನಿಂತಿರಲಿಲ್ಲ. ಅದಾಗಿಯೂ, ಆ ವೇಳೆ ತಟಸ್ಥ ನಿಲುವು ಪ್ರದರ್ಶಿಸಿದ್ದ ಬಿಜೆಪಿ ಇದೀಗ ಅದೇ ವಿಷಯವಾಗಿ ಧ್ವನಿ ಎತ್ತಿದೆ.

Advertisement. Scroll to continue reading.
ADVERTISEMENT
ADVERTISEMENT

ಗುರುವಾರ ಯಲ್ಲಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ದೂರಿದ್ದಾರೆ. `ಬೆಂಗಳೂರು, ಮಂಗಳೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಯುತ್ತಿತ್ತು. ಅದು ಇದೀಗ ಯಲ್ಲಾಪುರದ ಕಿರವತ್ತಿಯವರೆಗೆ ಬಂದು ತಲುಪಿದೆ’ ಎಂದು ಅವರು ಹೇಳಿದ್ದಾರೆ. `ಕಿರವತ್ತಿಯಲ್ಲಿ ನಡೆದ ಹೋಳಿ ಹಬ್ಬದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ಅನಧಿಕೃತ ಮೂಲದಿಂದ ಎಲ್ಲರಿಗೂ ತಿಳಿದಿದೆ. ಆದರೆ ಅಧಿಕೃತವಾಗಿ ಯಾರ ಮೇಲೂ ಕ್ರಮ ಆಗಿಲ್ಲ. ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲ. ಇನ್ನು ಜನ ಸಾಮಾನ್ಯರ ಸ್ಥಿತಿ ಏನು? ಎಂದು ಅವರು ಪ್ರಶ್ನಿಸಿದ್ದಾರೆ. ಆ ಮೂಲಕ ಈ ಹಿಂದೆ ಆ ಭಾಗದಲ್ಲಿ ನಡೆದ ಹೊಡೆದಾಟ ಪ್ರಕರಣವನ್ನು ಮತ್ತೆ ನೆನಪಿಸಿಕೊಟ್ಟಿದ್ದಾರೆ.

Advertisement. Scroll to continue reading.

ಇದನ್ನು ಓದಿ: ಹೋಳಿ ಹಬ್ಬದ ದಿನ ನಡೆದಿದ್ದೇನು? ಹೊಡೆದಾಟದ ಪ್ರಕರಣ ರಾಜಿಯಾಗಿದ್ದು ಹೇಗೆ? ಪೊಲೀಸರಿಗೆ ಧಿಕ್ಕಾರ.. ಶಾಸಕರಿಗೆ ಜೈಕಾರ!

ಇದರೊಂದಿಗೆ ಬಿಜೆಪಿಯ ಸಾಧನೆಯನ್ನು ಕೊಂಡಾಡಿದ ಹರಿಪ್ರಕಾಶ ಕೋಣೆಮನೆ, ಕಾಂಗ್ರೆಸ್ ಸರ್ಕಾರ ಮುಸ್ಲಿಂ ಗುತ್ತಿಗೆದಾರರಿಗೆ ಶೇ 4ರ ಮೀಸಲಾತಿ ಕೊಡುವುದನ್ನು ವಿರೋಧಿಸಿದರು. `ಸಂವಿಧಾನದಲ್ಲಿ ಈಗ ನೀಡಲಾದ ಮೀಸಲಾತಿ ಕಸಿದು ಮುಸ್ಲೀಂ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಈ ನಿರ್ಣಯದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ’ ಎಂದರು. `ಸಹಕಾರಿ ಸಂಘಗಳ ಮೂಲಕ ರೈತರಿಗೆ ಸ್ಥಿರಾಸ್ತಿಯ ಮೇಲೆ ಪ್ರತಿಜ್ಞಾ ಪತ್ರ ನೀಡಿ ಭೋಜಾ ಹಾಕುವ ವ್ಯವಸ್ಥೆ ನಿಲ್ಲಿಸಲಾಗಿದೆ. ತಂತ್ರಾoಶದಲ್ಲಿ ಬದಲಾವಣೆ ತರಲಾಗಿದೆ. ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿ, ನಂತರ ಸಾಲ ಪಡೆಯಬೇಕು. ಈ ಅವ್ಯವಸ್ಥೆಯನ್ನು ದೂರ ಮಾಡದಿದ್ದರೆ ಆ ಬಗ್ಗೆಯೂ ಪ್ರತಿಭಟನೆ ನಡೆಸಲಾಗುತ್ತದೆ’ ಎಂದರು.

ದಿಶಾ ಸಮಿತಿ ಸದಸ್ಯ ಉಮೇಶ ಭಾಗ್ವತ ಮಾತನಾಡಿ `ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ತಾಲೂಕಿಗೆ 1176 ಮನೆಗಳು ಮಂಜೂರಿಯಾಗಿವೆ. ಅರ್ಹ ಫಲಾನುಭವಿಗಳ ಸರ್ವೆ ನಡೆಸಿ, ಅವರಿಗೆ ಮನೆ ಮಂಜೂರಾಗುವoತೆ ಮಾಡಲಾಗುತ್ತದೆ’ ಎಂದರು. ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ `ಪ.ಪಂ ವ್ಯಾಪ್ತಿಯಲ್ಲಿ ಜಿ+2 ಯೋಜನೆಯಡಿ 500ಕ್ಕೂ ಹೆಚ್ಚು ಮನೆ ನಿರ್ಮಾಣವಾಗಿದೆ. ಅವರಿಂದ ತಲಾ 50 ಸಾವಿರ ಹಣ ಪಡೆದಿದ್ದರೂ ಮನೆ ಹಂಚಿಕೆ ನಡೆದಿಲ್ಲ. ಯಲ್ಲಾಪುರ ಗ್ರಾಮದೇವಿ ಜಾತ್ರೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಪ ಪಂ ಕಾಂಗ್ರೆಸ್ ಸದಸ್ಯರೇ ಧ್ವನಿ ಎತ್ತಿದ್ದು, ಹದಗೆಟ್ಟಿರುವ ಪಟ್ಟಣ ಪಂಚಾಯಿತಿ ದುರಾಡಳಿತದ ವಿರುದ್ಧ ಶಾಸಕರು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ವಿಠ್ಠು ಶೆಳಕೆ, ಶ್ರೀಕಾಂತ ಹೆಬ್ಬಾರ, ಕೆ ಟಿ ಹೆಗಡೆ, ರವಿ ದೇವಡಿಗ, ಗುರು ಭಟ್ಟ ಜಂಬೆಸಾಲ, ರಜತ ಬದ್ದಿ ಇತರರಿದ್ದರು.

ShareSendTweetShare
ADVERTISEMENT
Previous Post

ಉಂಚಳ್ಳಿ ಸೊಸೈಟಿ ಅಕ್ರಮ: ಅಧ್ಯಕ್ಷ-ಉಪಾಧ್ಯಕ್ಷರ ಜೊತೆ ಸಾಲಗಾರರ ಮೇಲೆಯೂ ತನಿಖೆಯ ತೂಗುಗತ್ತಿ!

Next Post

ಜೂಜಾಟ ಕೊನೆಯಾಗಿಲ್ಲ.. ಪೊಲೀಸರಿಗೆ ನಿದ್ದೆಯಿಲ್ಲ..!

Next Post
Gambling in the name of Friends Club: 17 people sentenced to prison!

ಜೂಜಾಟ ಕೊನೆಯಾಗಿಲ್ಲ.. ಪೊಲೀಸರಿಗೆ ನಿದ್ದೆಯಿಲ್ಲ..!

The price of peppercorns has come down: This is the strength of Uttara Kannada MPs!

ಕಾಳು ಮೆಣಸಿಗೆ ಬಂತು ಕಿಮ್ಮತ್ತು: ಇದುವೇ ಉತ್ತರ ಕನ್ನಡ ಸಂಸದರ ತಾಕತ್ತು!

Forest rights Where has the government failed

ಅರಣ್ಯ ಹಕ್ಕು: ಸರ್ಕಾರ ಎಡವಿದ್ದಾದರೂ ಎಲ್ಲಿ?

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.