6
  • Latest
Bhima Sena roars towards the Chief Minister's office!

ಮುಖ್ಯಮಂತ್ರಿ ಕಚೇರಿ ಕಡೆ ಭೀಮಸೇನೆ ಘರ್ಜನೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮುಖ್ಯಮಂತ್ರಿ ಕಚೇರಿ ಕಡೆ ಭೀಮಸೇನೆ ಘರ್ಜನೆ!

AchyutKumar by AchyutKumar
in ರಾಜ್ಯ
Bhima Sena roars towards the Chief Minister's office!

`ಶಿರಸಿಯಲ್ಲಿ ಬಿ ಆರ್ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಸ್ಥಾಪಿಸಬೇಕು’ ಎಂದು ಆಗ್ರಹಿಸಿ ಭೀಮಶಕ್ತಿ ಸಂಘಟನೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತಹಶೀಲ್ದಾರ್ ಕಚೇರಿ ಮೂಲಕ ಆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.

ADVERTISEMENT

ಶಿರಸಿ ಆಡಳಿತ ಸೌಧದ ಮುಂದೆ ಬಿ ಆರ್ ಅಂಬೇಡ್ಕರ್ ಅವರ ಪೂರ್ಣಾಕೃತಿಯ ಕಂಚಿನ ಪ್ರಥಿಮೆ ಸ್ಥಾಪಿಸಬೇಕು’ ಎಂದು ಭೀಮಶಕ್ತಿ ಸಂಘಟನೆಯವರು 2012ರಿಂದ ಹೋರಾಟ ನಡೆಸುತ್ತಿದ್ದಾರೆ. 13 ವರ್ಷಗಳ ಹಿಂದೆಯೂ ಮುಖ್ಯಮಂತ್ರಿ ಕಚೇರಿಗೆ ಸಂಘಟನೆಯವರು ಈ ಬಗ್ಗೆ ಪತ್ರ ರವಾನಿಸಿದ್ದರು. ಆದರೆ, ಈವರೆಗೂ ಅವರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇದನ್ನು ಉಲ್ಲೇಖಿಸಿ ಶನಿವಾರ ಸಂಘಟನೆಯವರು ಮತ್ತೊಂದು ಪತ್ರ ಬರೆದಿದ್ದಾರೆ.

`2025ರ ಏಪ್ರಿಲ್ 14ರ ಅಂಬೇಡ್ಕರ್ ಜಯಂತಿಯ ಒಳಗೆ ಇಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸಬೇಕು’ ಎಂದು ಭೀಮ ಶಕ್ತಿ ಸಂಘಟನೆ ಪ್ರಮುಖರಾದ ಪ್ರಭಾಕರ ಜೋಗಲೇಕರ್, ರಘು ಕಾನಡೆ, ಬಿ ಶಿವಾಜಿ ಬನವಾಸಿ, ಅಶೊಕ ಭಜಂತ್ರಿ ಒತ್ತಾಯಿಸಿದ್ದಾರೆ. ಇದರೊಂದಿಗೆ `ಪ್ರತಿ ವರ್ಷ ಏಪ್ರಿಲ್ 10ರಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ. ಏಪ್ರಿಲ್ 14ರ ಅಂಬೇಡ್ಕರ್ ಜಯಂತಿ ದಿನ ಸಹ ರಜೆಯಿರುವುದರಿಂದ ಮಕ್ಕಳಿಗೆ ಅಂಬೇಡ್ಕರ್ ಅವರ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಆಚರಿಸಿ ಶಾಲಾ-ಕಾಲೇಜಿಗೆ ರಜೆ ಘೋಷಿಸಬೇಕು’ ಎಂದು ಪ್ರಮುಖರಾದ ನಂದಕುಮಾರ ಜೋಗಲೇಕರ್, ಸುಭಾಷ ಮಂಡೂರು, ಚಂದ್ರಕಾoತ ರೇವಣಕರ, ರಾಜೇಶ ದೇಭಾಗ, ಸುಭಾಷ ಕಾನಡೆ ಒತ್ತಾಯಿಸಿದರು.

Advertisement. Scroll to continue reading.

ಇನ್ನೂ `ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಿದರೂ ಶಿರಸಿಯ ಐದು ರಸ್ತೆ ವೃತ್ತಕ್ಕೆ ಅಂಬೇಡ್ಕರ್ ಅವರ ಹೆಸರು ನಾಮಕರಣವಾಗಿಲ್ಲ. ಅನೇಕ ಮನವಿ ಸಲ್ಲಿಸಿದರೂ ಅದಕ್ಕೆ ಉತ್ತರ ಬಂದಿಲ್ಲ. ಶೃದ್ಧಾನಂದಗಲ್ಲಿ ಹಾಗೂ ರಾಜೀವನಗರ ಮಧ್ಯದಲ್ಲಿರುವ ಐದು ರಸ್ತೆ ವೃತ್ತವನ್ನು ಅಂಬೇಡ್ಕರ್ ವೃತ್ತ ಎಂದು ಘೋಷಣೆ ಮಾಡಬೇಕು’ ಎಂದು ಅರ್ಜುನ ಮಿಂಠಿ, ಭುಜಂಗ ಬೋರಕರ, ಜೆ ಕೆ ಆನಂದ, ಕಾಶಿನಾಥ ಕಾನಡೆ ಆಗ್ರಹಿಸಿದರು.

Advertisement. Scroll to continue reading.

`ತಮ್ಮ ಈ ಮೂರು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಆ ಮೂಲಕ ಬಿ ಆರ್ ಅಂಬೇಡ್ಕರ್ ಅವರಿಗೆ ಹೆಚ್ಚಿನ ಗೌರವ ಸಿಗುವಂತೆ ಮಾಡಬೇಕು’ ಎಂದು ಅಕ್ಷಯ ಮಡಗಾಂವಕಾರ್, ನವೀನ ಕಾನಡೆ, ಅಮಿತ ಜೋಗಳಕೆರ್, ರಾಜೇಂದ್ರ ಜೋಗಳೆಕರ್ ಆಗ್ರಹಿಸಿದರು. ಕಳೆದ 13 ವರ್ಷದ ಅವಧಿಯಲ್ಲಿ ಸಲ್ಲಿಸಿದ ಮನವಿ ಪತ್ರಗಳ ದಾಖಲೆಯನ್ನು ಸಹ ಈ ವೇಳೆ ಹಾಜರುಪಡಿಸಿದರು.

Previous Post

ಯುಗಾದಿ ಜೊತೆ ರಂಜಾನ್: ಈ ಎರಡೂ ಹಬ್ಬಕ್ಕೆ ಸರಾಯಿ ಸಿಗಲ್ಲ!

Next Post

ರಂಜಾನ್ ಪೇಟೆ ಸುತ್ತಿದ ಪೊಲೀಸ್ ನಾರಾಯಣ!

Next Post
Bhatkal Market Police Narayan in Ramzan!

ರಂಜಾನ್ ಪೇಟೆ ಸುತ್ತಿದ ಪೊಲೀಸ್ ನಾರಾಯಣ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ