ಭಟ್ಕಳದ ಪ್ರಸಿದ್ಧ ರಂಜಾನ್ ಬಜಾರ್ಗೆ ಭೇಟಿ ನೀಡಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅಲ್ಲಿನ ಮಾರುಕಟ್ಟೆ ಸುತ್ತಾಟ ನಡೆಸಿದ್ದಾರೆ.
ಮುಸ್ಲಿಂ ಮುಖಂಡರೊAದಿಗೆ ಸಮಾಲೋಚನೆ ನಡೆಸಿದ ಅವರು ಪೊಲೀಸ್ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ಮಾಡಿದ್ದಾರೆ. ಭಟ್ಕಳ ಮಜ್ಲಿಸ್-ಎ-ಇಸ್ಲಾ-ಒ-ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ರಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅತಿಕುರ್ ರೆಹಮಾನ್ ಮುನಿರಿ ಮತ್ತು ಭಟ್ಕಳ ಪುರಸಭೆಯ ಉಸ್ತುವಾರಿ ಅಧ್ಯಕ್ಷ ಅಲ್ತಾಫ್ ಖರುರಿ ಮೊದಲಾದವರು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬರಮಾಡಿಕೊಂಡರು.
ಮಾರುಕಟ್ಟೆಯಲ್ಲಿನ ವ್ಯಾಪಾರ, ಅಗತ್ಯವಿರುವ ಕಡೆ ಸಿಸಿ ಕ್ಯಾಮರಾ ಅಳವಡಿಕೆ ಸೇರಿ ಸುರಕ್ಷತೆಯ ಬಗ್ಗೆ ಅಲ್ಲಿನವರು ಮಾಹಿತಿ ನೀಡಿದರು.`ಮಿನಿ ದುಬೈ ಎಂದು ಕರೆಯಿಸಿಕೊಳ್ಳುವ ಭಟ್ಕಳ ಮಾರುಕಟ್ಟೆಯಲ್ಲಿ ಎಲ್ಲಾ ಸಮುದಾಯದವರು ವ್ಯಾಪಾರ ನಡೆಸುತ್ತಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನಚ್ಚರಿಕೆವಹಿಸಲಾಗಿದೆ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹೇಳಿದರು.







