6
  • Latest
Inappropriate behavior with female staff Forest Department driver poured petrol on her for questioning her!

ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ: ಪ್ರಶ್ನಿಸಿದಕ್ಕಾಗಿ ಪೆಟ್ರೋಲ್ ಸುರಿದುಕೊಂಡ ಅರಣ್ಯ ಇಲಾಖೆ ಚಾಲಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ: ಪ್ರಶ್ನಿಸಿದಕ್ಕಾಗಿ ಪೆಟ್ರೋಲ್ ಸುರಿದುಕೊಂಡ ಅರಣ್ಯ ಇಲಾಖೆ ಚಾಲಕ!

AchyutKumar by AchyutKumar
in ಸ್ಥಳೀಯ
Inappropriate behavior with female staff Forest Department driver poured petrol on her for questioning her!

ಸರ್ಕಾರಿ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ ವಾಹನ ಚಾಲಕರೊಬ್ಬರು ಈ ಪ್ರಕರಣದ ಆಂತರಿಕ ವಿಚಾರಣೆ ವೇಳೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ರಂಪಾಟ ನಡೆಸಿದ್ದಾರೆ.

ಲಭ್ಯವಿರುವ ಮಾಹಿತಿಗಳ ಪ್ರಕಾರ, ಯಲ್ಲಾಪುರದ ಅರಣ್ಯ ಇಲಾಖೆ ವಸತಿಗೃಹದಲ್ಲಿ ವಾಸವಾಗಿರುವ ಎರಡು ಕುಟುಂಬಗಳ ನಡುವೆ ನಡೆದ ವೈಮನಸ್ಸು ಈ ಅವಾಂತರಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿರುವ ಚಾಲಕ ಅನಂತ ಹಾಗೂ ಅದೇ ಇಲಾಖೆಯಲ್ಲಿ ಕೆಲಸ ಮಾಡುವ ಯಾಸ್ಮಿನಾ (ಇಬ್ಬರ ಹೆಸರು ಬದಲಿಸಿದೆ) ನಡುವೆ ಹೋಳಿ ಹಬ್ಬದ ಅವಧಿಯಲ್ಲಿ ಗಲಾಟೆ ನಡೆದಿತ್ತು. ವಾಹನ ಚಾಲಕ ಅನಂತ ಅವರು ಸರಾಯಿ ನಶೆಯಲ್ಲಿ ಯಾಸ್ಮೀನಾ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದರು.

ಇದರೊಂದಿಗೆ ಕಚೇರಿ ಸಮಯದಲ್ಲಿ ಸಹ ಅನಂತ ಅವರು ಮಹಿಳಾ ನೌಕರರನ್ನು ಕಾಡಿಸುತ್ತಿದ್ದರು. ಇದರಿಂದ ಅಲ್ಲಿನ ಮಹಿಳೆಯರು ಸಹ ಅನಂತ ಅವರ ಉಪಟಳಕ್ಕೆ ಬೇಸತ್ತಿದ್ದರು. ತಮಗಾದ ಕೆಟ್ಟ ಅನುಭವಗಳ ಬಗ್ಗೆ ಯಾಸ್ಮೀನಾ ಅವರು ಇಲಾಖೆಗೆ ದೂರು ನೀಡಿದ್ದರು. ಇಲಾಖೆಯಲ್ಲಿ ಸ್ಥಾಪಿಸಲಾದ ದೂರು ಸಮಿತಿಯಿಂದ ಶನಿವಾರ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಶನಿವಾರ ಹಿರಿಯ ಮಹಿಳಾ ಅಧಿಕಾರಿಯೊಬ್ಬರು ಈ ದೂರಿನ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ರೊಚ್ಚಿಗೆದ್ದ ಅನಂತ ಅವರು ತಮ್ಮ ಮುಂದಿದ್ದ ಯಾಸ್ಮೀನಾ ಅವರು ಮೇಲೆ ಪೆಟ್ರೋಲ್ ಸುರಿಯಲು ಮುಂದಾದರು. ಆಗ, ವಿಚಾರಣಾ ಅಧಿಕಾರಿ ಅಡ್ಡ ಬಂದರು. ಕೂಡಲೇ ಅನಂತ ಅವರು ತಮ್ಮ ಮೇಲೆಯೇ ತಾವು ಪೆಟ್ರೋಲ್ ಸುರಿದುಕೊಂಡು ರಂಪಾಟ ನಡೆಸಿದರು. ಈ ವಿಷಯ ಅರಿತು ಅನೇಕರು ಸ್ಥಳಕ್ಕೆ ಜಮಾಯಿಸಿದರು. ಆತ್ಮಹತ್ಯೆ ಪ್ರಯತ್ನ ಸಹ ಅಪರಾಧ ಆಗಿರುವುದರಿಂದ ಈ ಬಗ್ಗೆ ಇಲಾಖೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದರು.

ಘಟನಾವಳಿಗಳ ಬಗ್ಗೆ ಅರಣ್ಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನ್ಯಾಯಕ್ಕೆ ಒಳಗಾದ ಮಹಿಳೆಯರು ಸಹ ಪೊಲೀಸ್ ದೂರು ನೀಡುವ ಸಾಧ್ಯತೆಗಳಿವೆ. `ಪೊಲೀಸ್ ದೂರು ನೀಡುವಂತೆ ಮಹಿಳೆಗೆ ಸೂಚಿಸಲಾಗಿದೆ. ಮುಂದಿನ ವಿಚಾರಣೆಯನ್ನು ಪೊಲೀಸರು ನೋಡಿಕೊಳ್ಳುತ್ತಾರೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ShareSendTweetShare
Previous Post

ಮುತ್ತೋಟ ಫೈನಾನ್ಸ್: ಕದ್ದ ಚಿನ್ನಕ್ಕೂ ಸಾಲ ಕೊಟ್ಟ ಕಂಪನಿ!

Next Post

ಕಿರವತ್ತಿಯ ವ್ಯಕ್ತಿ ಕುಮಟಾದಲ್ಲಿ ಸಾವು!

Next Post

ಕಿರವತ್ತಿಯ ವ್ಯಕ್ತಿ ಕುಮಟಾದಲ್ಲಿ ಸಾವು!

KA 31 | ಬೆನ್ನಿಗಿದ್ದ ಬ್ಯಾಗಿಗೆ ಸಿಕ್ಕಿಬಿದ್ದ ಬೈಕ್ ಹ್ಯಾಂಡಲ್: ಬೈಕಿನಿಂದ ಬಿದ್ದ ಮೂವರಿಗೂ ಪೆಟ್ಟು!

Long-distance travel becomes more expensive Tolls for highway travelers!

ದೂರದ ಪಯಣ ಇನ್ನಷ್ಟು ದುಬಾರಿ: ಹೆದ್ದಾರಿ ಪ್ರಯಾಣಿಕರಿಗೆ ಸುಂಕದ ಬರೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.