ಮುಂಡಗೋಡದ ಮಾರುತಿ ಹರಿಜನ ಅವರು ಬೆಳೆ ರಕ್ಷಣೆಗೆ ಬಳಸಿದ ವಿದ್ಯುತ್ ಬಸವರಾಜ ಹರಿಜನ ಅವರ ಸಾವಿಗೆ ಕಾರಣವಾಗಿದೆ.
ಮುಂಡಗೋಡಿನ ಓಣಿಕೇರಿಯ ಮಾರುತಿ ಹರಿಜನ ಅವರು ತಮ್ಮ ಹೊಲದಲ್ಲಿ ಗೋವಿನ ಜೋಳ ಬೆಳೆದಿದ್ದರು. ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವುದಕ್ಕಾಗಿ ಅವರು ಬೇಲಿ ನಿರ್ಮಿಸಿದ್ದರು. ಅದಾಗಿಯೂ ಕಾಡು ಪ್ರಾಣಿಗಳು ಆಗಮಿಸುತ್ತಿದ್ದರಿಂದ ಆ ಬೇಲಿಗೆ ವಿದ್ಯುತ್ ಸಂಪರ್ಕ ನೀಡಿದ್ದರು.
ಹಾನಗಲ್ಲಿನ ಬಸವರಾಜ ಹರಿಜನ (22) ಹಾಗೂ ಹರೀಶ ಹರಿಜನ ಎಂಬಾತರು ಈ ವಿಷಯ ಅರಿವಿಲ್ಲದೇ ವಿದ್ಯುತ್ ಬೇಲಿ ಸ್ಪರ್ಶಿಸಿದರು. ಪರಿಣಾಮ ಬಸವರಾಜ ಹರಿಜನ ಸಾವನಪ್ಪಿದರು. ಹರೀಶ ಹರಿಜನ ಸಹ ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡರು. ಹರೀಶ ಹರಿಜನ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಲಾಯಿತು.
ಈ ವಿಷಯದ ಬಗ್ಗೆ ಸಮಾಜದ ಮುಖಂಡರಲ್ಲಿ ಹಾನಗಲ್ ಬಾಳಂಬಿಯ ಸುಭಾಷ ಹರಿಜನ ಚರ್ಚಿಸಿದರು. ಅದಾದ ನಂತರ ಮುಂಡಗೋಡಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.







