6
  • Latest
A baby who jumped into a well and was destined to survive!

ಬಾವಿಗೆ ಹಾರಿದ ಬಾಳಿ ಬದುಕಬೇಕಿದ್ದ ಕೂಸು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಬಾವಿಗೆ ಹಾರಿದ ಬಾಳಿ ಬದುಕಬೇಕಿದ್ದ ಕೂಸು!

AchyutKumar by AchyutKumar
April 9, 2025
in ರಾಜ್ಯ
A baby who jumped into a well and was destined to survive!
advt advt advt
ADVERTISEMENT

ಪಿಯುಸಿ ಪರೀಕ್ಷೆಯಲ್ಲಿ ಶೇ 62ರ ಸಾಧನೆ ಮಾಡಿದ್ದರೂ ತೃಪ್ತಿಯಾಗದ ದೀಪಿಕಾ ಪೂಜಾರ್ ಬಾವಿಗೆ ಹಾರಿದ್ದಾರೆ. ಪೊಲೀಸರ ಜೊತೆ ಅಗ್ನಿಶಾಮಕ ಸಿಬ್ಬಂದಿ ಸೇರಿ ದೀಪಿಕಾ ಅವರ ಶವವನ್ನು ಬಾವಿಯಿಂದ ಮೇಲೆತ್ತಿದ್ದಾರೆ.

ಬೈಂದೂರಿನ ದೀಪಿಕಾ ಮಂಜುನಾಥ ಪೂಜಾರ್ (18) ಅವರು ಯಲ್ಲಾಪುರ ತಾಲೂಕಿನ ಬಿಸಗೋಡಿನ ಬರಗದ್ದೆಯಲ್ಲಿ ವಾಸವಾಗಿದ್ದರು. ಅವರು ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದರು. ಪರೀಕ್ಷೆ ಎದುರಿಸಿದ ನಂತರ ಹೆಚ್ಚಿನ ಅಂಕ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಫಲಿತಾಂಶ ಪ್ರಕಟವಾದಾಗ ಶೇ 62ರಷ್ಟು ಅಂಕ ದೊರೆತಿರುವುದು ಗೊತ್ತಾಯಿತು. ಇದರಿಂದ ಬೇಸರಗೊಂಡ ದೀಪಿಕಾ ತೋಟದ ಬಾವಿಗೆ ಹಾರಿ ಜೀವ ಬಿಟ್ಟರು.

Advertisement. Scroll to continue reading.
ADVERTISEMENT
ADVERTISEMENT

ಏಪ್ರಿಲ್ 8ರ ಮಧ್ಯಾಹ್ನ 2 ಗಂಟೆಯಿ0ದ ದೀಪಿಕಾ ಕಾಣಿಸುತ್ತಿರಲಿಲ್ಲ. ರಾತ್ರಿ 10 ಗಂಟೆ ವೇಳೆಗೆ ಅವರು ಬಾವಿಗೆ ಹಾರಿರುವುದು ಗೊತ್ತಾಯಿತು. ಶವ ಮೇಲೆತ್ತಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತ್ಯಕ್ರಿಯೆಗಾಗಿ ಬೈಂದೂರಿಗೆ ಕಳುಹಿಸಲಾಯಿತು. ಮಂಜುನಾಥ ಪೂಜಾರ್ ಅವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕೇರಂ ಆಡಲು ಬಂದ ನಾಗರ!

ಕೇರಂ ಬೋರ್ಡಿನ ಅಡಿ ಅಡಗಿದ್ದ ನಾಗರ ಹಾವನ್ನು ಅವರ್ಸಾದ ಮಹೇಶ ನಾಯ್ಕ ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಅಂಕೋಲಾ ತಾಲೂಕಿನ ಪುಜಗೇರಿಯಲ್ಲಿ ಗಾಂವಕರ ಮನೆಗೆ ಹಾವು ಬಂದಿತ್ತು. ಇದರಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಹಾವು ಬಂದ ವಿಷಯವನ್ನು ಊರಿನ ಪ್ರಮುಖರಾದ ರವಿ ಗಾಂವಕರ ಮತ್ತು ರತ್ನಾಕರ ಗಾಂವಕರ ಅವರು ಮಹೇಶ ನಾಯ್ಕರಿಗೆ ತಿಳಿಸಿದರು.

ಕೇರಂ ಬೋಡಿನ ಅಡಿಗೆ ಅವಿತಿದ್ದ ಹಾವನ್ನು ಮಹೇಶ ನಾಯ್ಕರು ಉಪಾಯವಾಗಿ ಹಿಡಿದರು. ಹೆಡೆ ಎತ್ತಿ ಬುಸ್ ಎಂದ ಹಾವನ್ನು ಅವರು ಹಂತ ಹಂತವಾಗಿ ಪಳಗಿಸಿ ಸಮಾಧಾನ ಮಾಡಿದರು. ಹಾವನ್ನು ಚೀಲದಲ್ಲಿ ತುಂಬಿದ ಮಹೇಶ ನಾಯ್ಕರು ಅದನ್ನು ಕಾಡಿಗೆ ಬಿಟ್ಟರು.


ಗೋವಾ ಪ್ರವಾಸಿಗರಿಗೆ ಹೊಸ ನಿಯಮ!

ಗೋವಾ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಅಲ್ಲಿನ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಪ್ರವಾಸಿಗರು ರಸ್ತೆ ಪಕ್ಕ ಅಡುಗೆ ಮಾಡಿ ಊಟ ಮಾಡುವುದನ್ನು ನಿಷೇಧಿಸಲಾಗಿದ್ದು, ಅಲ್ಲಿನ ಖಾಸಗಿ ಹೊಟೇಲ್ ಅಭಿವೃದ್ಧಿಗೆ ಸರ್ಕಾರವೇ ಆಸಕ್ತಿವಹಿಸಿದೆ.

ಇದಕ್ಕಾಗಿ ಗೋವಾ ಪ್ರವೇಶದಲ್ಲಿಯೇ ವಾಹನ ತಪಾಸಣೆ ನಡೆಸಲಾಗುತ್ತದೆ. ವಾಹನದಲ್ಲಿ ಸಿಲೆಂಡರ್, ಊಟದ ಸಾಮಗ್ರಿ ಸಿಕ್ಕರೆ ಅದನ್ನು ಜಪ್ತು ಮಾಡುವುದಾಗಿ ಸರ್ಕಾರ ಆದೇಶಿಸಿದೆ. ಅದಾಗಿಯೂ, ರಸ್ತೆ ಪಕ್ಕ ಅಡುಗೆ ಮಾಡಿ ಊಟ ಮಾಡುವುದು ಕಂಡರೆ ಜೈಲಿಗೆ ಹಾಕುವುದಾಗಿ ಎಚ್ಚರಿಸಲಾಗುತ್ತಿದೆ.

Advertisement. Scroll to continue reading.

ಪ್ರವಾಸೋದ್ಯಮ ವಿಷಯದಲ್ಲಿ ಗೋವಾಗೆ ವಿಶೇಷ ಹೆಸರಿದೆ. ದೇಶ-ವಿದೇಶಗಳ ಜನ ಅಲ್ಲಿಗೆ ಆಗಮಿಸುತ್ತಾರೆ. ಕಾರು-ಬೈಕಿನಲ್ಲಿ ಬರುವ ಅನೇಕರು ತಾವೇ ಅಡುಗೆ ತಯಾರಿಸಿಕೊಂಡು ಊಟ ಮಾಡುತ್ತಿದ್ದು, ಇದಕ್ಕೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ. ಪ್ರವಾಸಿಗರು ರಸ್ತೆ ಬದಿಯಲ್ಲಿ ಅಡುಗೆ ತಯಾರಿಸಿ ಊಟ ಮಾಡಬಾರದು ಎಂದು ಗೋವಾ ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ.

ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಈ ನಿಯಮ ಜಾರಿಗೆ ತಂದಿರುವುದಾಗಿ ಹೇಳಿದರೂ, ಅಲ್ಲಿನ ಹೊಟೇಲ್ ಹಾಗೂ ರೆಸಾರ್ಟ ಲಾಭಿ ಇಲ್ಲಿ ಎದ್ದು ತೋರುತ್ತಿದೆ. ಹೊಟೇಲ್ ಊಟ ಋಚಿಸದಿದ್ದರೂ ಗೋವಾಗೆ ಬಂದವರು ಇದೀಗ ಹೊಟೇಲ್ ಮೊರೆ ಹೋಗುವುದು ಅನಿವಾರ್ಯವಾಗಿದೆ.

ತಮ್ಮ ಊರಿನ ಆಹಾರ ಪದ್ಧತಿಯನ್ನು ಅನುಸರಿಸಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಅಡುಗೆ ಮಾಡಿ ಊಟ ಮಾಡುವವರಿಗೆ ಇದರಿಂದ ಸಮಸ್ಯೆಯಾಗಿದೆ. ರಸ್ತೆ ಬದಿ ವಾಹನ ನಿಲ್ಲಿಸಿ ಅಡುಗೆ ಮಾಡುವುದು ಕಂಡರೆ ಆ ವಾಹನವನ್ನು ವಶಕ್ಕೆ ಪಡೆಯುವುದಾಗಿ ಪೊಲೀಸರು ಎಚ್ಚರಿಸುತ್ತಿದ್ದಾರೆ.

ShareSendTweetShare
ADVERTISEMENT
Previous Post

ಮನೆ ನಂ ನೀಡಲು ಲಂಚ: 15 ಸಾವಿರ ಪಡೆದವನಿಗೆ 4 ವರ್ಷ ಜೈಲು!

Next Post

ಅಕ್ರಮ ಗಣಿಗಾರಿಕೆ: ಪತ್ರ ವ್ಯವಹಾರದಲ್ಲಿಯೇ ಪ್ರಕರಣ ಮುಗಿಸುವ ಸರ್ಕಾರ!

Next Post
Illegal mining Government to settle case through correspondence!

ಅಕ್ರಮ ಗಣಿಗಾರಿಕೆ: ಪತ್ರ ವ್ಯವಹಾರದಲ್ಲಿಯೇ ಪ್ರಕರಣ ಮುಗಿಸುವ ಸರ್ಕಾರ!

Karwar soldier dies in the line of duty!

ಕರ್ತವ್ಯದ ವೇಳೆ ಪ್ರಾಣಬಿಟ್ಟ ಕಾರವಾರದ ಸೈನಿಕ!

Suspicions surround the fisherman's body!

ಮೀನುಗಾರನ ಶವದ ಸುತ್ತ ಅನುಮಾನಗಳ ಹುತ್ತ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.