6
  • Latest
Suspicions surround the fisherman's body!

ಮೀನುಗಾರನ ಶವದ ಸುತ್ತ ಅನುಮಾನಗಳ ಹುತ್ತ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಮೀನುಗಾರನ ಶವದ ಸುತ್ತ ಅನುಮಾನಗಳ ಹುತ್ತ!

AchyutKumar by AchyutKumar
April 10, 2025
in ದೇಶ - ವಿದೇಶ
Suspicions surround the fisherman's body!
advt advt advt
ADVERTISEMENT

ಮೀನುಗಾರಿಕೆಗಾಗಿ ಗೋವಾ ಕಡೆ ಹೊರಟಿದ್ದ ಬೇಲೆಹಿತ್ತಲದ ಅನಂತ ಅಂಬಿಗ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಬೋಟಿನ ಮಿಶನ್ ಅಡಿ ಅನಂತ ಅಂಬಿಗ ಅವರ ಶವ ಸಿಕ್ಕಿದೆ. ಶವ ಕೊಳೆತಿರುವುದನ್ನು ನೋಡಿ ನಾಲ್ಕು ದಿನದ ಹಿಂದೆ ಅನಂತ ಅಂಬಿಗ ಸಾವನಪ್ಪಿರುವ ಬಗ್ಗೆ ಶಂಕಿಸಲಾಗಿದ್ದು, ಬೋಟಿನ ಯಂತ್ರದ ಅಡಿ ಸಾವನಪ್ಪಿದರೂ ಆ ಬಗ್ಗೆ ಉಳಿದವರಿಗೆ ಹೇಗೆ ಅರಿವಾಗಿಲ್ಲ? ಎಂಬ ಪ್ರಶ್ನೆ ಉದ್ಬವಿಸಿದೆ.

`ಆ ಬೋಟಿನ ಮಾಲಕ ಬರುವವರೆಗೂ ದೋಣಿಯಿಂದ ಶವ ತೆಗೆಯುವುದಿಲ್ಲ’ ಎಂದು ಮೀನುಗಾರರು ಪಟ್ಟು ಹಿಡಿದಿದ್ದಾರೆ. ಗೋವಾದ ಬೋಟ್ ಮಾಲಕ ಅನೇಕರಿಗೆ ಅನ್ಯಾಯ ಮಾಡಿದ ಆರೋಪಗಳಿವೆ. ಸಂಜೆಯವರೆಗೂ ಮೀನುಗಾರರು ಪ್ರತಿಭಟನೆ ನಡೆಸಿದ್ದು, `ಬಡ ಮೀನುಗಾರನಿಗೆ ಯೋಗ್ಯ ಪರಿಹಾರ ನೀಡಬೇಕು’ ಎಂದು ಅಲ್ಲಿನವರು ಒತ್ತಾಯಿಸಿದ್ದಾರೆ. ಜೊತೆಗೆ `ಈ ಸಾವಿನ ನೈಜ ಕಾರಣ ಹೊರಬರಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT
ADVERTISEMENT

ಮೀನುಗಾರರಿಗೆ ಅನೇಕ ರಾಜಕೀಯ ಮುಖಂಡರು ಬೆಂಬಲವ್ಯಕ್ತಪಡಿಸಿದ್ದಾರೆ. ಪ್ರಮುಖರಾದ ಉಮಾಕಾಂತ ಹೊಸ್ಕಟ್ಟ, ಸೂರಜ್ ನಾಯಕ ಸೋನಿ, ಪ್ರದೀಪ ನಾಯಕ ದೇವರಭಾವಿ, ಆನಂದ ಕವರಿ, ರಾಜಗೋಪಾಲ ಅಡಿಗುರೂಜಿ, ಮೋಹನ ನಾಯಕ, ಮಂಜುನಾಥ ಜನ್ನು ಇನ್ನಿತರರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಪ್ರತಿಭಟನಾಕಾರರ ಕೂಗಿಗೆ ಗೋವಾದ ಬೋಟ್ ಮಾಲಕ ಆಗಮಿಸಿದ್ದು, ಪ್ರತಿಭಟನಾಕಾರರನ್ನು ಪೊಲೀಸ್ ಠಾಣೆಗೆ ಕರೆದರು. ಅದಕ್ಕೆ ಮೀನುಗಾರರು ಒಪ್ಪಲಿಲ್ಲ.

Advertisement. Scroll to continue reading.
Advertisement. Scroll to continue reading.

`ಬೆಳಗ್ಗೆಯಿಂದ ಶವದ ಮುಂದೆ ಕಾಯುತ್ತಿದ್ದೇವೆ. ಬೋಟ್ ಮಾಲಕ ಇಲ್ಲಿಯೇ ಬರಲಿ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಕೊನೆಗೆ ಕೆಲ ಮುಖಂಡರು ಪ್ರತಿಭಟನಾಕಾರರ ಮನವೊಲೈಸಿ ಪೊಲೀಸ್ ಠಾಣೆಯಲ್ಲಿ ಮಾತುಕಥೆ ನಡೆಸಿದರು. ಈ ವೇಳೆ ಅನೇಕರು ಬೋಟ್ ಮಾಲಕನ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಈ ಹಿಂದೆ ಅನೇಕ ಮೀನುಗಾರರನ್ನು ಬೋಟ್ ಮಾಲಕ ಕೆಲಸಕ್ಕೆ ಕರೆಯಿಸಿಕೊಂಡಿದ್ದು, ದುಡಿತಕ್ಕೆ ತಕ್ಕ ವೇತನ ನೀಡದೇ ವಂಚಿಸಿದ ಬಗ್ಗೆ ಜನ ದೂರಿದರು. `ಆ ಪ್ರಕರಣವನ್ನು ಬಗೆಹರಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಇನ್ನೂ ಮೊದಲು ಆ ಬೋಟು ಹೊನ್ನಾವರಕ್ಕೆ ಹೋಗಿದ್ದು, ಅಲ್ಲಿನವರು `ಸಾವನಪ್ಪಿದ ವ್ಯಕ್ತಿ ಗೋಕರ್ಣ ವ್ಯಾಪ್ತಿಯವ’ ಎಂದು ಹೇಳಿದ್ದಾರೆ. ಹೀಗಾಗಿ ಆ ಬೋಟಿನಲ್ಲಿಯೇ ಶವ ಹಾಕಿಕೊಂಡು ಗೋಕರ್ಣದ ಕಡೆ ಬರಲಾಗಿದೆ. ತದಡಿ ಬಂದರಿನಲ್ಲಿ ಬೋಟು ನಿಲ್ಲಿಸಿರುವುದನ್ನು ಅರಿತು ಮೀನುಗಾರರು ಅಲ್ಲಿ ಜಮಾಯಿಸಿದರು. ಈ ಸಾವಿನ ಬಗ್ಗೆ ಅನುಮಾನವಿರುವುದಾಗಿ ಅನಂತ ಅಂಬಿಗ ಅವರ ಸಹೋದರ ವಸಂತ ಅಂಬಿಗ ದೂರಿದ್ದಾರೆ.

ShareSendTweetShare
ADVERTISEMENT
Previous Post

ಕರ್ತವ್ಯದ ವೇಳೆ ಪ್ರಾಣಬಿಟ್ಟ ಕಾರವಾರದ ಸೈನಿಕ!

Next Post

ಜನಾಕ್ರೋಶ ಯಾತ್ರೆ: ಯಲ್ಲಾಪುರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ!

Next Post
Janakrosha Yatra: BJP shows strength in Yellapur!

ಜನಾಕ್ರೋಶ ಯಾತ್ರೆ: ಯಲ್ಲಾಪುರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ!

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಮರಕ್ಕೆ ಗುದ್ದಿದ ಬೈಕು: ನಿವೃತ್ತ ಬ್ಯಾಂಕ್ ನೌಕರ ಸಾವು!

Forest Rights Preparations to plant trees even in areas with GPS!

ಅರಣ್ಯ ಹಕ್ಕು: GPS ಆದ ಕ್ಷೇತ್ರದಲ್ಲಿಯೂ ಗಿಡ ನೆಡುವ ತಯಾರಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.