6
  • Latest
Permission to conduct Matka: Jail for policeman who extended his hand for 22 thousand!

ಮಟ್ಕಾ ನಡೆಸಲು ಅನುಮತಿ: 22 ಸಾವಿರಕ್ಕೆ ಕೈ ಚಾಚಿದ ಪೊಲೀಸಪ್ಪನಿಗೆ ಜೈಲು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಟ್ಕಾ ನಡೆಸಲು ಅನುಮತಿ: 22 ಸಾವಿರಕ್ಕೆ ಕೈ ಚಾಚಿದ ಪೊಲೀಸಪ್ಪನಿಗೆ ಜೈಲು!

AchyutKumar by AchyutKumar
April 17, 2025
in ಸ್ಥಳೀಯ
Permission to conduct Matka: Jail for policeman who extended his hand for 22 thousand!
advt advt advt
ADVERTISEMENT

ಕಾನೂನುಬಾಹಿರ ಮಟ್ಕಾ ತಡೆಯುವುದನ್ನು ಬಿಟ್ಟು ಮಟ್ಕಾ ಆಡಿಸುವವರ ಬಳಿ ಎರಡು ವಾರಕ್ಕೆ 22 ಸಾವಿರ ರೂ ಲಂಚ ಬೇಡಿದ ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಭಟ್ಕಳ ಶಾಖೆಯ ಪಿಎಲ್‌ಡಿ ಬ್ಯಾಂಕಿನ ಪಿಗ್ಮಿ ಎಜೆಂಟರಾಗಿ ಹೊನ್ನಾವರದಲ್ಲಿ ಚಂದ್ರಹಾಸ ನಾಯ್ಕ ಅವರು ಕೆಲಸ ಮಾಡುತ್ತಿದ್ದರು. ಅನಿವಾರ್ಯತೆಗೆ ಸಿಲುಕಿದ ಅವರು ಪಿಗ್ಮಿ ಹಣದ ಜೊತೆ ಮಟ್ಕಾ ಹಣವನ್ನು ಸಂಗ್ರಹಿಸುತ್ತಿದ್ದರು. ಗೂಡಂಗಡಿಗಳ ಮೂಲಕ ಮಟ್ಕಾ ಹಣ ಸಂಗ್ರಹಿಸಿ ಅದನ್ನು ತಲುಪಿಸಬೇಕಾದವರಿಗೆ ತಲುಪಿಸುವ ಮಟ್ಕಾ ಬುಕ್ಕಿಯಾಗಿ ಚಂದ್ರಹಾಸ ನಾಯ್ಕ ಕೆಲಸ ಮಾಡುತ್ತಿದ್ದರು. 2017ರಲ್ಲಿ ಈ ವಿಷಯ ಅರಿತ ಹೊನ್ನಾವರ ಸಿಪಿಐ ಕಚೇರಿಯ ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ `ಪ್ರತಿ ಎರಡು ವಾರಕ್ಕೆ 22 ಸಾವಿರ ರೂ ತಮಗೆ ನೀಡಬೇಕು’ ಎಂದು ಚಂದ್ರಹಾಸ ನಾಯ್ಕರ ಬಳಿ ತಾಕೀತು ಮಾಡಿದ್ದರು. `ಹೊನ್ನಾವರ ಸಿಪಿಐ ಅವರಿಗೆ ಹಣ ಕೊಡಬೇಕು’ ಎಂದು ಮುರುಳೀಧರ ನಾಯ್ಕ ನಂಬಿಸಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಇದಕ್ಕೆ ಚಂದ್ರಹಾಸ ನಾಯ್ಕ ಸಹ ಒಪ್ಪಿದ್ದರು. `ಸೋಮವಾರ ಹಣ ಕೊಡುವೆ’ ಎಂದು ಚಂದ್ರಹಾಸ ನಾಯ್ಕ ಮಾತು ಕೊಟ್ಟಿದ್ದರು. ಆದರೆ, ಇದಕ್ಕೆ ಮುರುಳೀಧರ ನಾಯ್ಕ ಒಪ್ಪಿಗೆ ಸೂಚಿಸಿರಲಿಲ್ಲ. `ಕೂಡಲೇ ಹಣ ಕೊಡಬೇಕು’ ಎಂದು ದುಂಬಾಲು ಬಿದ್ದಿದ್ದರು. ಪದೇ ಪದೇ ಫೋನ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಅದರಂತೆ, 2017ರ ನವೆಂಬರ್ 18ರಂದು 22 ಸಾವಿರ ರೂ ಹಣವನ್ನು ವಸೂಲಿ ಮಾಡಿದ್ದರು. ಈ ವೇಳೆ ಭ್ರಷ್ಟಾಚಾರ ನಿಗ್ರಹದಳದವರು ದಾಳಿ ನಡೆಸಿ, ಆ ಹಣವನ್ನು ವಶಕ್ಕೆ ಪಡೆದಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯವೂ 68 ದಾಖಲೆಗಳನ್ನು ಗಮನಿಸಿತು.

ಲೋಕಾಯುಕ್ತರ ಪರವಾಗಿ ಎಲ್ ಎಂ ಪ್ರಭು ಅವರು ವಾದ ಮಂಡಿಸಿದರು. ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ ಲಂಚಪಡೆದಿರುವುದನ್ನು ಅವರು ಸಾಭೀತು ಮಾಡಿದರು. ಈ ಪ್ರಕರಣದ ವಾದ ಆಲಿಸಿದ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ಮುರುಳೀಧರ ನಾಯ್ಕ ಅವರು ನೀಡಿದ ಮುಚ್ಚಳಿಕೆಯನ್ನು ಒಪ್ಪಲಿಲ್ಲ. ಮುರುಳೀಧರ ನಾಯ್ಕ ಅವರ ಜಾಮೀನು ಸಹ ರದ್ದುಪಡಿಸಿ ಜೈಲು ಶಿಕ್ಷೆ ಪ್ರಕಟಿಸಿದರು. ಮುರುಳೀಧರ ನಾಯ್ಕ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ ನ್ಯಾಯಾಲಯ 1ವರ್ಷದ 6 ತಿಂಗಳ ಶಿಕ್ಷೆ ವಿಧಿಸಿತು. ಜೊತೆಗೆ 10 ಸಾವಿರ ರೂ ದಂಡ ಪಾವತಿಸಬೇಕು ಎಂದು ಸಹ ಆದೇಶಿತು. ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿಯಾಗಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಮುರುಳೀಧರ ನಾಯ್ಕ ಅವರಿಗೆ ಸೂಚಿಸಿತು.

ShareSendTweetShare
ADVERTISEMENT
Previous Post

ಅರಬ್ಬಿ ಅಲೆ: ಸಮುದ್ರಕ್ಕೆ ಬಿದ್ದ ಮೀನುಗಾರ ಸಾವು!

Next Post

ಹಾಲಿನ ವಾಹನದಲ್ಲಿ ಹಸು ಸಾಗಾಟ: ಉಸಿರುಗಟ್ಟಿ ಸಾವನಪ್ಪಿದ ಐದು ಜಾನುವಾರು!

Next Post
Cows being transported in a milk truck Five cattle suffocated to death!

ಹಾಲಿನ ವಾಹನದಲ್ಲಿ ಹಸು ಸಾಗಾಟ: ಉಸಿರುಗಟ್ಟಿ ಸಾವನಪ್ಪಿದ ಐದು ಜಾನುವಾರು!

ಮಾಂಸಕ್ಕಾಗಿ ಗರ್ಭಿಣಿ ಹಸುವನ್ನು ಕಡಿದ ದುರುಳರು ಹೊಟ್ಟೆಯಲ್ಲಿದ್ದ ಕರುವನ್ನು ಬಗೆದು ಬಿಸಾಡಿದ್ದಾರೆ. ಭಟ್ಕಳದ ಹೆಬಳೆ ವೆಂಕಟಾಪುರ ನದಿ ಅಂಚಿನಲ್ಲಿ ಗೋಣಿ ಚೀಲದಲ್ಲಿ ಸುತ್ತಿದ ಹಸುವಿನ ಕರು ಪತ್ತೆಯಾಗಿದೆ. ಬೀದಿ ನಾಯಿ ಗೋಣಿ ಚೀಲ ಎಳೆಯುತ್ತಿರುವಾಗ ಆಕಳ ಕರು ಹೊರ ಬಂದಿದೆ. ಹೀಗಾಗಿ ದುರುಳರ ಕೃತ್ಯ ಬಯಲಾಗಿದೆ. ನದಿ ಅಂಚಿನಲ್ಲಿ ಕರು ಸಾವನಪ್ಪಿರುವ ಸುದ್ದಿ ತಿಳಿದು ಗುರುವಾರ ಪೊಲೀಸರು ಭೇಟಿ ನೀಡಿದರು. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದರು. ಜನವರಿ ತಿಂಗಳಿನಲ್ಲಿ ಹೊನ್ನಾವರದಲ್ಲಿ ಸಹ ಗರ್ಭಿಣಿ ಹಸುವನ್ನು ದುರುಳರು ಕೊಂದಿದ್ದರು. ಮೇವಿಗೆ ತೆರಳಿದ ಜಾನುವಾರನ್ನು ಕೊಂದು ಮದುವೆ ಊಟಕ್ಕೆ ಮಾಂಸ ಕಳುಹಿಸುವ ತಯಾರಿ ನಡೆಸಿದ್ದರು. ಈ ಪ್ರಕರಣ ರಾಜ್ಯದ ಎಲ್ಲಡೆ ಸುದ್ದಿ ಮಾಡಿದ್ದು, ಪೊಲೀಸರು ಆರೋಪಿತರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೆ ಇದೀಗ ಭಟ್ಕಳದಲ್ಲಿ ಮತ್ತೊಂದು ಗೋ ಹತ್ಯೆ ಬೆಳಕಿಗೆ ಬಂದಿದೆ. ಇಲ್ಲಿಯೂ ಗರ್ಭಿಣಿ ಹಸುವನ್ನು ಕೊಂದ ಬಗ್ಗೆ ವ್ಯಾಪಕ ಆಕ್ರೋಶವ್ಯಕ್ತವಾಗಿದೆ. `ತಪ್ಪಿತಸ್ಥರನ್ನು ಹುಡುಕಿ ಕಾನೂನು ಕ್ರಮ ಜರುಗಿಸಬೇಕು' ಎಂದು ಜನ ಒತ್ತಾಯಿಸುತ್ತಿದ್ದಾರೆ.

ಆ ದುರುಳರಿಗೆ ಗರ್ಭಿಣಿ ಹಸುವೇ ಟಾರ್ಗೇಟ್!

Water thorn for playing children!

ಆಡುವ ಮಕ್ಕಳಿಗೆ ಜಲ ಕಂಟಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.