6
  • Latest
Cannabis addiction Strict action against dealers!

ಗಾಂಜಾ ಅಮಲು: ವ್ಯಸವಿ ವಿರುದ್ಧ ಕಠಿಣ ಕ್ರಮ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗಾಂಜಾ ಅಮಲು: ವ್ಯಸವಿ ವಿರುದ್ಧ ಕಠಿಣ ಕ್ರಮ!

AchyutKumar by AchyutKumar
April 19, 2025
in ಸ್ಥಳೀಯ
Cannabis addiction Strict action against dealers!
advt advt advt
ADVERTISEMENT

ಬೀಡಿ-ಸಿಗರೇಟಿನ ಅಮಲು ಸಾಕಾಗದೇ ಶಿರಸಿಯ ವಿರಾಲ್ ಶೆಟ್ಟಿ ಗಾಂಜಾ ಮೊರೆ ಹೋಗಿದ್ದು, ಕಠಿಣ ಕ್ರಮ ಜರುಗಿಸುವ ಮೂಲಕ ಪೊಲೀಸರು ಅವರ ನಶೆ ಇಳಿಸಿದ್ದಾರೆ.

ಶಿರಸಿಯ ನಾರಾಯಣಗುರು ವಿರಾಲ್ ಈಶ್ವರ ಶೆಟ್ಟಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರು. ಪೊಲೀಸರನ್ನು ಕಂಡ ತಕ್ಷಣ ಅವರು ಇನ್ನಷ್ಟು ಭಯಗೊಂಡರು. ಅಮಲಿನಲ್ಲಿದ್ದ ಅವರನ್ನು ಪೊಲೀಸರು ವಶಕ್ಕೆಪಡೆದು ವೈದ್ಯಕೀಯ ಪರೀಕ್ಷೆಗೆ ರವಾನಿಸಿದರು. ಆಗ, ವಿರಾಲ್ ಶೆಟ್ಟಿ ಗಾಂಜಾ ಸೇವಿಸಿರುವುದು ದೃಢವಾಯಿತು.

ADVERTISEMENT
ADVERTISEMENT

ಈ ಹಿನ್ನಲೆ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಗಾಂಜಾ ಸೇವನೆಯ ಅಪಾಯಕಾರಿ ಅಂಶಗಳ ಬಗ್ಗೆ ಮನವರಿಕೆಯನ್ನು ಮಾಡಿದರು. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆ ಪಿಎಸ್‌ಐ ರಾಜಕುಮಾರ ಉಕ್ಕಲಿ, ಸಿಬ್ಬಂದಿ ಮಾಂತೇಶ ಬಾರ್ಕೆರ್, ಪ್ರಸಾದ ಮಡಿವಾಳ, ಮಲ್ಲಿಕಾರ್ಜುನ ಕೊಂಡೊಜಿ, ಮಂಜುನಾಥ ವಾಲಿ, ಹನುಮಂತ ವಾಲಿಕರ್ ಈ ಕಾರ್ಯಾಚರಣೆಯಲ್ಲಿದ್ದರು.

Advertisement. Scroll to continue reading.

ಚಿಕನ್ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ!

ಸಿದ್ದಾಪುರದ ಪಿಎಸ್‌ಐ ಅನೀಲ ಎಂ ಶನಿವಾರ ಎರಡು ಕಡೆ ದಾಳಿ ಮಾಡಿ ಅಕ್ರಮ ಮದ್ಯ ಮಾರಾಟ ತಡೆದಿದ್ದಾರೆ. ಮಣಿಗಾರ ಕರ್ಕಿಹಕ್ಲುವಿನ ನಾಗೇಶ ಕುಡಿಯಾ ಹಾಗೂ ಹೆಗೆಕೊಪ್ಪದ ಗಣೇಶ ಮಡಿವಾಳ ಅವರ ಅಕ್ರಮ ದಂದೆಗೆ ಅವರು ಕಡಿವಾಣ ಹಾಕಿದ್ದಾರೆ.

Advertisement. Scroll to continue reading.

ಕೂಲಿ ಕೆಲಸ ಮಾಡಿಕೊಂಡಿದ್ದ ನಾಗೇಶ ಕುಡಿಯಾ ತಮ್ಮ ಮನೆಯಲ್ಲಿಯೇ ಸರಾಯಿ ದಾಸ್ತಾನು ಮಾಡಿದ್ದರು. ಮನೆಗೆ ಬರುವವರಿಗೆ ಅದನ್ನು ನೀಡಿ ಉಪಚರಿಸುತ್ತಿದ್ದರು. ಇದಕ್ಕಾಗಿ ಮಾರುಕಟ್ಟೆ ಬೆಲೆಗಿಂತಲೂ ಅಧಿಕ ಹಣ ಪಡೆಯುತ್ತಿದ್ದರು. ಇನ್ನೂ ಸಿದ್ದಾಪುರದ ಜಡ್ಡಿ ಕ್ರಾಸಿನ ಬಳಿ ರೇಣುಕಾಂಬಾ ಚಿಕನ್ ಶಾಫ್ ನಡೆಸುತ್ತಿದ್ದ ಗಣೇಶ ಮಡಿವಾಳ ಅಲ್ಲಿ ಸರಾಯಿ ವ್ಯಾಪಾರವನ್ನು ಶುರು ಮಾಡಿದ್ದರು. ಅಲ್ಲಿಯೇ ಕುಳಿತು ಮದ್ಯ ಸೇವನೆಗೆ ಅವರು ಅವಕಾಶ ಮಾಡಿಕೊಟ್ಟಿದ್ದರು. ಈ ಬಗ್ಗೆ ಅರಿತ ಪಿಎಸ್‌ಐ ಅನೀಲ ಎಂ ತಮ್ಮ ಪೊಲೀಸ್ ತಂಡದ ಜೊತೆ ದಾಳಿ ಮಾಡಿದರು. ಅಕ್ರಮ ಮದ್ಯ ಹಾಗೂ ಅದರಿಂದ ಬಂದ ಹಣದ ಜೊತೆ ವಿವಿಧ ಪರಿಕ್ಕರಗಳನ್ನು ವಶಕ್ಕೆ ಪಡೆದರು. ಆ ಇಬ್ಬರ ಮೇಲೆಯೂ ಪ್ರಕರಣ ದಾಖಲಿಸಿದರು.


ವ್ಯಾಪಾರಿಯ ಮನೆಯೇ ಮದ್ಯದ ಆಲಯ!

ಕಾರವಾರದ ಉಮೇಶ ಪೆಡ್ನೇಕರ್ ಅವರ ಮನೆಯಲ್ಲಿ ಗೋವಾ ಮದ್ಯ ದಾಸ್ತಾನು ಮಾಡಿದ್ದು, ಪೊಲೀಸರು ಅದನ್ನು ವಶಕ್ಕೆಪಡೆದಿದ್ದಾರೆ.

ವ್ಯಾಪಾರಿಯಾಗಿರುವ ಉಮೇಶ ಪೆಡ್ನೇಕರ್ ಕಾರವಾರದ ಶಿರವಾಡದಲ್ಲಿ ವಾಸವಾಗಿದ್ದಾರೆ. ಇಂಡಸ್ಟಿಯಲ್ ಏರಿಯಾದಲ್ಲಿರುವ ಅವರ ಮನೆಯಲ್ಲಿ ಅವರು ಗೋವಾದ ಬಗೆ ಬಗೆಯ ಸರಾಯಿ ದಾಸ್ತಾನು ಮಾಡಿದ್ದರು. ಅದನ್ನು ಮಾರಾಟ ಮಾಡಿ ಅಧಿಕ ಲಾಭಪಡೆಯಲು ಉಮೇಶ ಪೆಡ್ನೇಕರ್ ಯೋಚಿಸಿದ್ದರು. ಆದರೆ, ಪೊಲೀಸರು ಅದಕ್ಕೆ ಅಡ್ಡಿಪಡಿಸಿದ್ದಾರೆ.

ಕಾರವಾರ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಯು ಎಚ್ ಸಾತೇನಹಳ್ಳಿ ಶನಿವಾರ ಶಿರವಾಡಕ್ಕೆ ಹೋಗಿದ್ದರು. ಉಮೇಶ ಪೆಡ್ನೇಕರ್ ಅವರ ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿಪಡೆದ ಅವರು ಅಲ್ಲಿ ದಾಳಿ ಮಾಡಿದರು. ಗೋವಾ ರಾಜ್ಯದ ಸರಾಯಿ ಬಾಟಲಿ ಹಾಗೂ ಬಿಯರ್ ಟಿನ್’ಗಳನ್ನು ಅವರು ಅಲ್ಲಿ ಪತ್ತೆ ಮಾಡಿದರು. ಪೊಲೀಸ್ ದಾಳಿ ವಿಷಯ ಅರಿತ ಉಮೇಶ ಪೆಡ್ನೇಕರ್ ಓಡಿ ಪರಾರಿಯಾದರು. ಉಮೇಶ ಪೆಡ್ನೇಕರ್ ಅವರ ಮನೆಯಲ್ಲಿದ್ದ 5ಸಾವಿರ ರೂಪಾಯಿಗೂ ಅಧಿಕ ಮೌಲ್ಯದ ಸರಾಯಿ ಬಾಟಲಿಯನ್ನು ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿದರು.

ShareSendTweetShare
ADVERTISEMENT
Previous Post

ಗ್ಯಾರಂಟಿ ಲೆಕ್ಕ: ಪುಕ್ಕಟ್ಟೆ ಭಾಗ್ಯ ಬೇಡವೆಂದ 1970 ಜನ!

Next Post

KSRTC | ಈ ಬಸ್ಸಿನಲ್ಲಿ ಅರ್ದ ಕೆಜಿ ಮೆಣಸು ಒಯ್ಯುವುದು ಗಂಭೀರ ಅಪರಾಧ!

Next Post
KSRTC | Carrying half a kg of pepper in this bus is a serious offence!

KSRTC | ಈ ಬಸ್ಸಿನಲ್ಲಿ ಅರ್ದ ಕೆಜಿ ಮೆಣಸು ಒಯ್ಯುವುದು ಗಂಭೀರ ಅಪರಾಧ!

The laughter of young rowdies A political scandal that has taken the streets!

ಮರಿ ರೌಡಿಗಳ ಅಟ್ಟಹಾಸ: ಬೀದಿ ಹೆಣವಾದ ರಾಜಕೀಯ ಪುಡಾರಿ!

Petrol is no longer available here.. Diesel is not even available!

ಇನ್ಮುಂದೆ ಇಲ್ಲಿ ಪೆಟ್ರೋಲ್ ಸಿಗಲ್ಲ.. ಡಿಸೇಲ್ ಸಹ ಲಭ್ಯವಿಲ್ಲ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.