6
  • Latest
Petrol is no longer available here.. Diesel is not even available!

ಇನ್ಮುಂದೆ ಇಲ್ಲಿ ಪೆಟ್ರೋಲ್ ಸಿಗಲ್ಲ.. ಡಿಸೇಲ್ ಸಹ ಲಭ್ಯವಿಲ್ಲ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಇನ್ಮುಂದೆ ಇಲ್ಲಿ ಪೆಟ್ರೋಲ್ ಸಿಗಲ್ಲ.. ಡಿಸೇಲ್ ಸಹ ಲಭ್ಯವಿಲ್ಲ!

AchyutKumar by AchyutKumar
in ಸ್ಥಳೀಯ
Petrol is no longer available here.. Diesel is not even available!

ಅಂಕೋಲಾ-ಯಲ್ಲಾಪುರ ಗಡಿಭಾಗದ ಕೊಡ್ಲಗದ್ದೆ ಕಾಡಿನಲ್ಲಿ ಮಾರಾಟವಾಗುತ್ತಿದ್ದ ಪೆಟ್ರೋಲ್-ಡಿಸೇಲ್ ವ್ಯಾಪಾರಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಅರಣ್ಯದಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಇಂಧನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಕಳೆದ ಅನೇಕ ವರ್ಷಗಳಿಂದ ಕೊಡ್ಲಗದ್ದೆ ಕ್ರಾಸಿನಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಮಾರಾಟ ನಡೆಯುತ್ತಿತ್ತು. ಮಾರುಕಟ್ಟೆ ಬೆಲೆಗಿಂತ 5ರಿಂದ 10ರೂ ಕಡಿಮೆ ಬೆಲೆಯಲ್ಲಿ ಇಲ್ಲಿ ಪೆಟ್ರೋಲ್ ಸಿಗುತ್ತಿತ್ತು. ಇಲ್ಲಿಂದ ಪೆಟ್ರೋಲ್ ಹಾಗೂ ಡಿಸೇಲ್ ಪಡೆದ ಅನೇಕರು ವಿವಿಧ ಹಳ್ಳಿಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದರು.

ಒಂದು ಲೀಟರಿನಿಂದ ಹಿಡಿದು 30-35ಲೀಟರ್’ವರೆಗಿನ ಕ್ಯಾನುಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ನಡೆದಿತ್ತು. ಪೆಟ್ರೋಲ್ ಹಾಗೂ ಡಿಸೇಲ್ ಗುಣಮಟ್ಟವೂ ಚನ್ನಾಗಿತ್ತು. ಇಲ್ಲಿ ಎಂದಿಗೂ ಕಲಬೆರೆಕೆ ಇಂದನ ನೀಡಿದ ದೂರುಗಳಿರಲಿಲ್ಲ. ಹೀಗಾಗಿ ಅನೇಕ ಐಷಾರಾಮಿ ವಾಹನದವರು ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಇಂಧನ ಮಾರಾಟಕ್ಕೆ ಅಗತ್ಯ ಪರವಾನಿಗೆಯನ್ನು ಮಾರಾಟಗಾರರು ಪಡೆದಿರಲಿಲ್ಲ. ಸ್ಪೋಟಕ ವಸ್ತುಗಳಾದ ಪೆಟ್ರೋಲ್ ಹಾಗೂ ಡಿಸೇಲ್’ನ್ನು ಸುರಕ್ಷಿತವಾಗಿರಿಸಿಕೊಂಡಿರಲಿಲ್ಲ.

Advertisement. Scroll to continue reading.

ಈ ಹಿನ್ನಲೆ ಅಂಕೋಲಾದ ಪಿಎಸ್‌ಐ ಅಶೋಕ ಧರೆಪ್ಪನವರ್ ಕೊಡ್ಲಗದ್ದೆ ಕ್ರಾಸಿಗೆ ಬಂದರು. ಪೊಲೀಸ್ ಸಿಬ್ಬಂದಿ ಮಹಾಬಲೇಶ್ವರ ನಾಯಕ, ಶ್ರೀಕಾಂತ ಕಟಬರ, ಸಲೀಂ ಮೊಕಾಶಿ, ಪುನೀತ ನಾಯ್ಕ ಅಲ್ಲಿನ ಕಾಡಿನಲ್ಲಿ ಹುಡುಕಾಟ ನಡೆಸಿದರು. ಆಗ, ಕೊಡ್ಲಗದ್ದೆಯ ಸುಧಾಕರ ನಾಯ್ಕ ಅವರು ಕಾಡಿನಲ್ಲಿ ಅಡಗಿಸಿಟ್ಟಿದ್ದ 20ಲೀಟರಿನ 5 ಕ್ಯಾನ್ ಡಿಸೇಲ್ ಕಾಣಿಸಿತು. ಇದರೊಂದಿಗೆ 30, 20 ಹಾಗೂ 10 ಲೀಟರಿನ ಒಂದಷ್ಟು ಕ್ಯಾನುಗಳಲ್ಲಿ ಪೆಟ್ರೋಲ್ ತುಂಬಿಕೊoಡಿರುವುದು ಅರಿವಿಗೆ ಬಂದಿತು. 99 ಲೀಟರ್ ಡಿಸೇಲ್ ಹಾಗೂ 407 ಲೀಟರ್ ಪೆಟ್ರೋಲನ್ನು ಪೊಲೀಸರು ಜಪ್ತು ಮಾಡಿದರು.

Advertisement. Scroll to continue reading.

ಇದರೊಂದಿಗೆ ಒಂದೊoದು ಲೀಟರ್ ಬಾಟಲಿಯಲ್ಲಿದ್ದ ಇಂಧನವನ್ನು ಸಹ ವಶಕ್ಕೆಪಡೆದರು. ಖಾಲಿ ಕ್ಯಾನು, ಅಳತೆ ಮಾಪನ, ಪ್ಲಾಸ್ಟಿಕ್ ಲಾಳಕೆ, ಹಸಿರು ಬಣ್ಣದ ಪೈಪುಗಳು ಅಲ್ಲಿ ಪೊಲೀಸರ ಕಣ್ಣಿಗೆ ಬಿದ್ದವು. ಅದನ್ನು ಸಹ ಪೊಲೀಸರು ಠಾಣೆಗೆ ತಂದರು. ಯಾವುದೇ ಪರವಾನಿಗೆಪಡೆಯದೇ ಇಂಧನ ದಾಸ್ತಾನು ಮಾಡಿದಕ್ಕಾಗಿ ಕೊಡ್ಲಗದ್ದೆಯ ಸುಧಾಕರ ನಾಯ್ಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.

Previous Post

ಮರಿ ರೌಡಿಗಳ ಅಟ್ಟಹಾಸ: ಬೀದಿ ಹೆಣವಾದ ರಾಜಕೀಯ ಪುಡಾರಿ!

Next Post

ಅಗ್ನಿ ಅನಾಹುತ: ಹುಲ್ಲು ತುಂಬಿದ ಲಾರಿ ಕರಕಲು!

Next Post
Fire disaster A lorry full of grass is burnt!

ಅಗ್ನಿ ಅನಾಹುತ: ಹುಲ್ಲು ತುಂಬಿದ ಲಾರಿ ಕರಕಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ