6
  • Latest
KSRTC | Carrying half a kg of pepper in this bus is a serious offence!

KSRTC | ಈ ಬಸ್ಸಿನಲ್ಲಿ ಅರ್ದ ಕೆಜಿ ಮೆಣಸು ಒಯ್ಯುವುದು ಗಂಭೀರ ಅಪರಾಧ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

KSRTC | ಈ ಬಸ್ಸಿನಲ್ಲಿ ಅರ್ದ ಕೆಜಿ ಮೆಣಸು ಒಯ್ಯುವುದು ಗಂಭೀರ ಅಪರಾಧ!

AchyutKumar by AchyutKumar
in ಸ್ಥಳೀಯ
KSRTC | Carrying half a kg of pepper in this bus is a serious offence!

ಯಲ್ಲಾಪುರದಿಂದ ಮಾಗೋಡಿಗೆ ತೆರಳುವ ಬಸ್ಸಿನಲ್ಲಿ ಅರ್ದ ಕೆಜಿ ಒಣ ಮೆಣಸು ಒಯ್ಯುತ್ತಿದ್ದ ಮಹಿಳೆಯರನ್ನು ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಬಸ್ಸಿನಿಂದ ಇಳಿಯಲು ಒಪ್ಪದವರ ಮೈಮುಟ್ಟಿದ ಸಾರಿಗೆ ಸಿಬ್ಬಂದಿ ಮಹಿಳೆಯರನ್ನು ಕೆಳಗೆ ದೂಡಿದ್ದಾರೆ. ಭಾನುವಾರ ಸಂತೆಗೆ ಬಂದಿದ್ದ ಮಹಿಳೆಯರು ಒಣ ಮೆಣಸು ಖರೀದಿಸಿ ಅನ್ಯಾಯಕ್ಕೆ ಒಳಗಾಗಿದ್ದಾರೆ!

ADVERTISEMENT

ಮಾಗೋಡಿನ ಲಲಿತಾ ಭಾಗ್ವತ ಹಾಗೂ ಮಂಗಲಾ ನಾಯ್ಕ ಭಾನುವಾರದ ಸಂತೆಗಾಗಿ ಯಲ್ಲಾಪುರಕ್ಕೆ ಬಂದಿದ್ದರು. ತರಕಾರಿ ಖರೀದಿಸಿದ ನಂತರ ಅವರು ಮಾಗೋಡಿಗೆ ಮರಳುವ ಬಸ್ಸು ಹತ್ತಿದ್ದರು. 11.15ಕ್ಕೆ ಹೊರಡುವ ಬಸ್ಸಿನಲ್ಲಿ ಅವರು ಶಕ್ತಿ ಯೋಜನೆಯ ಟಿಕೆಟ್ ಸಹ ಪಡೆದಿದ್ದರು. ಆದರೆ, ಬಸ್ ನಿರ್ವಾಹಕ ಬಸವರಾಜ್ ಅವರು ಒಣ ಮೆಣಸು ನೋಡಿ ಸಿಡಿಮಿಡಿಗೊಂಡರು.

ಆ ಇಬ್ಬರು ಮಹಿಳೆಯರನ್ನು ಬಸ್ಸಿನಿಂದ ಕೆಳಗಿಳಿಸಿದರು. ಮಂಗಲಾ ನಾಯ್ಕ ಅವರ ಜೊತೆಗಿದ್ದ ಮಗ ರಾಜೇಶ ನಾಯ್ಕ ಅವರ ಟಿಕೆಟ್ ಹಣವನ್ನು ಮರಳಿಸಿ, ಅವರನ್ನು ಬಸ್ಸಿನಿಂದ ಹೊರದಬ್ಬಿದರು. ಸಮಯಕ್ಕೆ ಸರಿಯಾಗಿ ಮನೆಗೆ ಮರಳಲಾಗದ ಮಹಿಳೆಯರು ನಂದೂಳ್ಳಿಯ ನಾಯಕ ನರಸಿಂಹ ಕೋಣೆಮನೆ ಅವರಿಗೆ ಪೋನ್ ಮಾಡಿದರು. ಬಸ್ ನಿಲ್ದಾಣಕ್ಕೆ ದೌಡಾಯಿಸಿದ ನರಸಿಂಹ ಕೋಣೆಮನೆ ಅನ್ಯಾಯಕ್ಕೊಳ್ಳದಾದವರ ಜೊತೆ ಸೇರಿ ಧರಣಿ ಕುಳಿತರು.

Advertisement. Scroll to continue reading.

`ಮಹಿಳೆಯರನ್ನು ಗೌರವಯುತವಾಗಿ ಅವರ ಮನೆಗೆ ಮುಟ್ಟಿಸಿ ಬರಬೇಕು’ ಎಂದು ಪಟ್ಟುಹಿಡಿದರು. ಬಸ್ ನಿಲ್ದಾಣದಲ್ಲಿದ್ದ ಇತರೆ ಪ್ರಯಾಣಿಕರು ಆಗಮಿಸಿ ಪ್ರತಿಭಟನೆಗೆ ಬೆಂಬಲ ನೀಡಿದರು. ಡಿಪೋ ವ್ಯವಸ್ಥಾಪಕ ಸಂತೋಷ ವರ್ಣೆಕರ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲೈಸಲು ಪ್ರಯತ್ನಿಸಿದರು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. `ಕೂಡಲೇ ವಿಶೇಷ ಬಸ್ ಮೂಲಕ ಮಹಿಳೆಯರನ್ನು ಊರಿಗೆ ತಲುಪಿಸಬೇಕು’ ಎಂದು ಒತ್ತಾಯಿಸಿದರು. ಕೊನೆಗೆ 1.45ಕ್ಕೆ ಬಿಡುವ ಬಸ್ಸನ್ನು 1.30ಕ್ಕೆ ಮಾಗೋಡಿಗೆ ಕಳುಹಿಸಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಲಾಯಿತು.

Advertisement. Scroll to continue reading.

ಕ್ಷಮೆ ಯಾಚನೆ:
`ಒಣ ಮೆಣಸನ್ನು ದೊಡ್ಡ ಪ್ರಮಾಣದಲ್ಲಿ ಬಸ್ಸಿನಲ್ಲಿ ಒಯ್ಯುವ ಹಾಗಿಲ್ಲ. ಬೇರೆಯವರಿಗೆ ತೊಂದರೆಯಾಗದ ರೀತಿ ಸಣ್ಣ ಪ್ರಮಾಣದಲ್ಲಿ ಒಯ್ಯಲು ತಕರಾರು ಇಲ್ಲ’ ಎಂದು ಸಾರಿಗೆ ಸಿಬ್ಬಂದಿ ಸಮಜಾಯಿಶಿ ನೀಡಿದರು. ನಿರ್ವಾಹಕ ಮಾಡಿದ ತಪ್ಪಿಗೆ ಘಟಕದ ಇತರೆ ಸಿಬ್ಬಂದಿ ಕ್ಷಮೆ ಕೋರಿದರು. ಅದಾಗಿಯೂ, ಪ್ರತಿಭಟನಾಕಾರ ಒತ್ತಾಯದ ಮೇರೆಗೆ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ಬಸ್ ನಿರ್ವಾಹಕರ ವಿರುದ್ಧ ಕ್ರಮ ಜರುಗಿಸುವುದಾಗಿ ಡಿಪೋ ವ್ಯವಸ್ಥಾಪಕ ಸಂತೋಷ ವರ್ಣೇಕರ್ ಭರವಸೆ ನೀಡಿದರು.

`ನಾಳೆಯಿಂದ ಈ ಬಸ್ ಸಿಬ್ಬಂದಿ ಮಾಗೋಡು ಕಡೆ ಕರ್ತವ್ಯ ನಿರ್ವಹಿಸುವ ಹಾಗಿಲ್ಲ. ಬಸ್ಸಿನಲ್ಲಿ ಯಾವ ವಸ್ತು ಒಯ್ಯುವುದು ನಿಷೇಧ ಎನ್ನುವದರ ಬಗ್ಗೆ ನಿಲ್ದಾಣದಲ್ಲಿ ನಾಮಫಲಕ ಅಳವಡಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದಕ್ಕೆ ಅಧಿಕಾರಿಗಳು ಸಮ್ಮತಿ ಸೂಚಿಸಿದರು.

Previous Post

ಗಾಂಜಾ ಅಮಲು: ವ್ಯಸವಿ ವಿರುದ್ಧ ಕಠಿಣ ಕ್ರಮ!

Next Post

ಮರಿ ರೌಡಿಗಳ ಅಟ್ಟಹಾಸ: ಬೀದಿ ಹೆಣವಾದ ರಾಜಕೀಯ ಪುಡಾರಿ!

Next Post
The laughter of young rowdies A political scandal that has taken the streets!

ಮರಿ ರೌಡಿಗಳ ಅಟ್ಟಹಾಸ: ಬೀದಿ ಹೆಣವಾದ ರಾಜಕೀಯ ಪುಡಾರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ