6
  • Latest
ಬೆಳೆಸಾಲ | ಸಹಕಾರಿ ಸಂಘದಲ್ಲಿ ಗೊಂದಲ: ಶಾಸಕರ ಮಧ್ಯಸ್ಥಿಕೆಯಲ್ಲಿ ಸಭೆ

ಬೆಳೆಸಾಲ | ಸಹಕಾರಿ ಸಂಘದಲ್ಲಿ ಗೊಂದಲ: ಶಾಸಕರ ಮಧ್ಯಸ್ಥಿಕೆಯಲ್ಲಿ ಸಭೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೆಳೆಸಾಲ | ಸಹಕಾರಿ ಸಂಘದಲ್ಲಿ ಗೊಂದಲ: ಶಾಸಕರ ಮಧ್ಯಸ್ಥಿಕೆಯಲ್ಲಿ ಸಭೆ

AchyutKumar by AchyutKumar
in ಸ್ಥಳೀಯ
ಬೆಳೆಸಾಲ | ಸಹಕಾರಿ ಸಂಘದಲ್ಲಿ ಗೊಂದಲ: ಶಾಸಕರ ಮಧ್ಯಸ್ಥಿಕೆಯಲ್ಲಿ ಸಭೆ

ಶಿರಸಿಯ ದಾನಕೊಪ್ಪದ ಕಾಳoಗಿ ಸೇವಾ ಸಹಕಾರಿ ಸಂಘದಲ್ಲಿ ಭಿನ್ನಮತ ಕಾಣಿಸಿಕೊಂಡ ಹಿನ್ನಲೆ ಕೆಡಿಸಿಸಿ ಅಧ್ಯಕ್ಷರೂ ಆಗಿರುವ ಶಿವರಾಮ ಹೆಬ್ಬಾರ್ ವಿಶೇಷ ಸಭೆ ನಡೆಸಿದ್ದಾರೆ.

ADVERTISEMENT

ಬೆಳೆ ಸಾಲ ತುಂಬಲು ಏಪ್ರಿಲ್ 30 ಕೊನೆ ದಿನವಾಗಿದ್ದು, ಈ ಅವಧಿ ವಿಸ್ತರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಆದರೆ, ಆಡಳಿತ ಮಂಡಳಿ ಇದಕ್ಕೆ ಒಪ್ಪಲಿಲ್ಲ. ಸಂಘದ ಉಪಾಧ್ಯಕ್ಷರ ವಿರುದ್ಧವೂ ಸದಸ್ಯರು ಸಾಕಷ್ಟು ಆರೋಪ ಮಾಡಿದರು.

ಸೊಸೈಟಿ ಗೊಂದಲ ಬಗೆಹರಿಸುವಂತೆ ಆ ಭಾಗದವರು ಶಿವರಾಮ ಹೆಬ್ಬಾರ್ ಅವರನ್ನು ಕೇಳಿಕೊಂಡಿದ್ದು, ಶಿವರಾಮ ಹೆಬ್ಬಾರ್ ಜನರನ್ನು ಸಮಸ್ಯೆ ಆಲಿಸಿದರು. ಈ ವೇಳೆ ಸಹಕಾರಿ ಸಂಘ ಆಡಳಿತ ಮಂಡಳಿಯು ಬೆಳೆ ಸಾಲ ತುಂಬುವ ಆದೇಶಕ್ಕೆ ಸದಸ್ಯರು ಆಕ್ಷೇಪಿಸಿದರು.

Advertisement. Scroll to continue reading.

ಆಗ ‘ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷನಾಗಿ ನಾನು ಮೇ 2ನೇ ತಾರಿಕಿನವರೆಗೆ ಬೆಳೆ ಸಾಲ ಪಾವತಿಗೆ ಅವಧಿ ವಿಸ್ತರಿಸಲು ಸಾಧ್ಯ’ ಎಂದು ಶಿವರಾಮ ಹೆಬ್ಬಾರ್ ಹೇಳಿದರು. ‘ಅಷ್ಟರೊಳಗೆ ಸಾಲ ಮರುಪಾವತಿಸಿ’ ಎಂದು ಸೂಚಿಸಿದರು. ಅದಾದ ನಂತರ ಮತ್ತೆ ಕೂಡಲೇ ಬೆಳೆ ಸಾಲ ಮಂಜೂರಿ ಮಾಡಿಸಿಕೊಡುವುದಾಗಿ ಘೋಷಿಸಿದರು.‌ ಇದರಿಂದ ಸದಸ್ಯರು ಸಮಾಧಾನಗೊಂಡರು.

Advertisement. Scroll to continue reading.

ಹೃದಯ ಆಘಾತ: ಅರಣ್ಯಾಧಿಕಾರಿ ಬದುಕು ಅಂತ್ಯ!

ಕಾರವಾರದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ನವೀನ ಶೆಟ್ಟಿ ಹೃದಯಘಾತದಿಂದ ಸಾವನಪ್ಪಿದ್ದಾರೆ.

ಗೋಕರ್ಣ ಮೂಲದ ಅವರು ಅರಣ್ಯ ಇಲಾಖೆ ವಸತಿಗೃಹದಲ್ಲಿ ವಾಸವಾಗಿದ್ದರು. ಏಪ್ರಿಲ್ 29ರಂದು ಅವರಿಗೆ ಎದೆನೋವು ಕಾಣಿಸಿಕೊಂಡಿತು. ಹೀಗಾಗಿ ಪಿಕಳೆ ಆಸ್ಪತ್ರೆಯಲ್ಲಿ ತೋರಿಸಿದರು. ಅದೇ ದಿನ ಸಂಜೆ ನವೀನ ಶೆಟ್ಟಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಏಪ್ರಿಲ್‌ 30ರಂದು ಅವರಿಗೆ ಮತ್ತೆ ಎದೆನೋವು ಕಾಣಿಸಿತು. ಹೀಗಾಗಿ ಅವರನ್ನು ಮತ್ತೆ ಪಿಕಳೆ‌ ಆಸ್ಪತ್ರೆಗೆ ಕರೆತರಲಾಯಿತು. ತಪಾಸಣೆ ನಡೆಸಿದ ವೈದ್ಯರು ನವೀನ ಶಟ್ಟಿ ಅವರು ಸಾವನಪ್ಪಿರುವ ವಿಷಯ ತಿಳಿಸಿದರು. ಅವರ ಪತ್ನಿ ಸರಿತಾ ಶೆಟ್ಟಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.

ನೀರು ಬಿಡುವ ಸಿಬ್ಬಂದಿಗೆ ಸೇವಾ ನಿವೃತ್ತಿ

ಯಲ್ಲಾಪುರ‌ ಪಟ್ಟಣ ಪಂಚಾಯತದಲ್ಲಿ ನೀರು ಬಿಡುವ ಕೆಲಸ ಮಾಡುತ್ತಿದ್ದ ರಾಮಣ್ಣ ಅವರು ನಿವೃತ್ತರಾಗಿದ್ದಾರೆ.

ಕಳೆದ‌ ಅನೇಕ ವರ್ಷಗಳಿಂದ ಅವರು ಸೇವೆಯಲ್ಲಿದ್ದರು. ಈ ಹಿನ್ನಲೆ ಪ ಪಂ ಕಚೇರಿಯಲ್ಲಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಈ ವೇಳೆ ಪ ಪಂ ಸದಸ್ಯ ಕೈಸರ್ ಸಯ್ಯದ್ ಅಲಿ ಅವರು ರಾಮಣ್ಣ ಅವರನ್ನು ಸನ್ಮಾನಿಸಿದರು. ಕಚೇರಿಯ ಹೇಮಚಂದ್ರ ನಾಯ್ಕ, ಗುರು,‌ ಸಂತೋಷ‌ ನಾಯ್ಕ, ಸಂತೋಷ ಶೇಟ್, ವೀಣಾ ಇತರರು ಹಾಜರಿದ್ದರು.


‘ಕಾರ್ಮಿಕನ ಸಾವಿಗೆ ಗುತ್ತಿಗೆದಾರ ಕಾರಣ

ಸುರಕ್ಷತಾ ಪರಿಕರಗಳನ್ನು ಧರಿಸದೆ ಯಂತ್ರ ಬಳಸಿದ ದಾಂಡೇಲಿಯ ಅಬ್ದುಲ್ ಅಲೀಂ ಖಲಾಸಿ ಸಾವನಪ್ಪಿದ್ದಾರೆ.

ಅಬ್ದುಲ್ (53) ಅವರು ಹೀಟ್ ಎಕ್ಸಚೈಂಜರ್’ನ್ನು ಸಾಗಿಸುತ್ತಿರುವಾಗ ಹೀಟ್ ಎಕ್ಸಚೈಂಜರ್ ಅವರ ಮೇಲೆ ಬಿದ್ದು ಸಾವನಪ್ಪಿದ್ದಾರೆ. ಈ ಕುರಿತು ಮೃತ ಕಾರ್ಮಿಕನ ಪತ್ನಿ ಬಾಲಕಿಸ್ ಬಾನು ಅಬ್ದುಲ್ ಖಲಾಸಿ ದಾಂಡೇಲಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಗುತ್ತಿಗೆದಾರ ಸಾಜಿದ್ ಪಠಾಣ , ಮತ್ತು ನಿರೀಕ್ಷಕ ಅಬ್ದುಲ್ ಖಾದೀರ್ ಪಠಾಣ ಅವರೇ ಅಬ್ದುಲ್ ಅವರ ಸಾವಿಗೆ ಕಾರಣ’ ಎಂದವರು ದೂರಿದ್ದಾರೆ. ‘ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಕೆಲಸ ಮಾಡಿಸಿ ಕೊಂಡಿದ್ದರಿಂದ ಈ ಸಾವು ಸಂಭವಿಸಿದ್ದು,  ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿದ್ದಾರೆ. ನಗರ ಠಾಣೆಯ ಪಿಎಸ್ಐ ಅಮೀನಸಾಬ್ ಅತ್ತಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


ಬಸವಣ್ಣನ ನೆನಪಿನಲ್ಲಿ ಅನ್ನದಾನ

ಯಲ್ಲಾಪುರದ ಕಿರವತ್ತಿಯಲ್ಲಿ ಜಯ ಕರ್ನಾಟಕ ಸಂಘಟನೆಯವರುವ ಬಸವೇಶ್ವರ ಜಯಂತಿ ಆಚರಿಸಿದ್ದು, ಈ ವೇಳೆ ಅನ್ನದಾನ ಮಾಡಿದರು.

ಜಯ ಕರ್ನಾಟಕ‌ ತಾಲೂಕಾಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಊಟ ಬಡಿಸಿದರು. ಬಸವಣ್ಣನವರ ತತ್ವ-ಆದರ್ಶಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು. ಜಯ ಕರ್ನಾಟಕ ಸಂಘಟನೆ ಸದಸ್ಯರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.


 

Previous Post

ಲಾರಿಗೆ ಗುದ್ದಿದ ರಾಸಾಯನಿಕ ಟ್ಯಾಂಕರ್: ಚಾಲಕರಿಬ್ಬರಿಗೂ ಮರುಜೀವ!

Next Post

ಸರ್ವೆ ಸಿಬ್ಬಂದಿಯಿಂದ ಜಾಗೃತಿ ಯುದ್ಧ: ಪಾಪಿಸ್ತಾನಕ್ಕೆ ಪರ್ಯಾಯ ಪಾಠ!

Next Post
ಸರ್ವೆ ಸಿಬ್ಬಂದಿಯಿಂದ ಜಾಗೃತಿ ಯುದ್ಧ: ಪಾಪಿಸ್ತಾನಕ್ಕೆ ಪರ್ಯಾಯ ಪಾಠ!

ಸರ್ವೆ ಸಿಬ್ಬಂದಿಯಿಂದ ಜಾಗೃತಿ ಯುದ್ಧ: ಪಾಪಿಸ್ತಾನಕ್ಕೆ ಪರ್ಯಾಯ ಪಾಠ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ