ಶಿರಸಿಯ ಅಯ್ಯಪ್ಪನಗರದಲ್ಲಿ ಎರಡು ಜೋಡಿ ಹಾವುಗಳ ಮಿಲನ ಕಂಡು ಬಂದಿದೆ. ಮನೆ ಬಳಿ ಹಾವು ಬಂದಿರುವುದನ್ನು ನೋಡಿದ ಜನ ಉರಗ ತಜ್ಞರಿಗೆ ಪೋನ್ ಮಾಡಿದ್ದು, ಆ ಕಾಡನ್ನು ತಜ್ಞರು ಕಾಡಿಗೆ ಬಿಟ್ಟಿದ್ದಾರೆ.
ಗುರುವಾರ ಅಯ್ಯಪ್ಪ ನಗರದ ಉಮೇಶ ನಾಯ್ಕ ಅವರ ಮನೆ ಅಂಚಿನಲ್ಲಿ ಒಟ್ಟಿಗೆ ನಾಲ್ಕು ಹಾವು ಕಾಣಿಸಿದವು. ಇದರಿಂದ ಆ ಮನೆಯವರು ಆತಂಕಗೊಂಡರು. ತಕ್ಷಣ ಉರಗ ತಜ್ಞ ಪ್ರಶಾಂತ ಹುಲೆಕಲ್ ಅವರಿಗೆ ಪೋನ್ ಮಾಡಿದರು.
ಹಾವುಗಳಿದ್ದ ಸ್ಥಳಕ್ಕೆ ಉರಗ ತಜ್ಞರು ಆಗಮಿಸಿದರು. ಎರಡು ಹಾವುಗಳು ಅಲ್ಲಿಂದ ಪರಾರಿಯಾದವು. ಇನ್ನೆರಡು ಹಾವುಗಳನ್ನು ಅವರು ಹಿಡಿದು ಕಾಡಿಗೆ ಬಿಟ್ಟರು.







